Tuesday, 13 December 2011

ಭಟ್ಟರು ಬಿಚ್ಚಿಟ್ಟ ಸತ್ಯ

ಕನ್ನಡಪ್ರಭ ದಿನಪತ್ರಿಕೆ ಮತ್ತು ಸುವರ್ಣ ನ್ಯೂಸ್ ಚಾನಲ್ ಸಂಪಾದಕ ವಿಶ್ವೇಶ್ವರ ಭಟ್ ಅವರ ಖಾಸಗಿ ಅಂತರ್ ಜಾಲ ತಾಣ http://vbhat.in/ ಮತ್ತೆ ಶುರುವಾಗಿದೆ. ಕೆಲ ತಿಂಗಳಕಾಲ ಕಾಲ ಕಣ್ಮರೆಯಾಗಿದ್ದ ತಾಣ ಇಂದು ಮಂಗಳವಾರ ಪ್ರತ್ಯಕ್ಷವಾಗಿದ್ದು ಅದರಲ್ಲಿ ಭಟ್ಟರ ಹೊಸ ಲೇಖನ ಬೆಳಕಾಗಿದೆ.ವಿಜಯ ಕರ್ನಾಟಕ ಸಂಪಾದಕ ಹುದ್ದೆಗೆ ಭಟ್ಟರು ರಾಜೀನಾಮೆ ನೀಡಿ ಒಂದು ವರ್ಷ ತುಂಬಿತು. ಇದನ್ನು ತನ್ನಿಮಿತ್ತ ಲೇಖನ ಎಂದು ಕರೆಯಲೂಬಹುದು. ವರ್ಷಾಬ್ಧಿಕ ಎನ್ನೋಣವೇ ಅಥವಾ ವಾರ್ಷಿಕೋತ್ಸವ ಎನ್ನೋಣವೇ? ಅಥವಾ ಇದಕ್ಕೆ ಬೇರೊಂದು ಹೆಸರುಂಟೊ?ಇದನ್ನು ಹೇಗೆ ಕರೆದರೆ ಸರಿಹೋದಿತೆಂದು ಸ್ವತಃ ಭಟ್ಟರೇ ತಮ್ಮ ದೀರ್ಘವಾದ ಲೇಖನದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಸವಿವರವಾಗಿ ಬರೆದುಕೊಂಡಿದ್ದಾರೆ. ಸ್ಯಾಂಪಲ್ಲಿಗಾಗಿ ವಿಶ್ವೇರಭಟ್ಟರ ಲೇಖನದಿಂದ ಆಯ್ದ ಒಂದೆರಡು ಎರಡು ಪ್ಯಾರ ಹೀಗಿದೆ :"ಚಿನ್ನನ್ ದಾಸ್ ನಂತರ ವಿಜಯ ಕರ್ನಾಟಕದ ಮ್ಯಾನೇಜ್ಮೆಂಟ್ ಮುಖ್ಯಸ್ಥನಾಗಿ ಬಂದ ತೀರ ಸಣ್ಣ ಮನಸ್ಸಿನ ವ್ಯಕ್ತಿಯೊಬ್ಬ ನನ್ನ ಜನಪ್ರಿಯತೆ ಸಹಿಸದಾದ. ಆತ ಮೊದಲ ದಿನದಿಂದಲೇ ಕ್ಯಾತೆ ತೆಗೆಯಲಾರಂಭಿಸಿದ. ಅಂಥವನ ಜತೆ ಎರಡು ವರ್ಷ ಕಾಲ ದೂಡಿದ್ದೊಂದು ಕತೆ. ಇರಲಿ. ಇದೊಂದೇ ಕಾರಣದಿಂದ ನಾನು ಹೊರಬಂದೆ ಹೊರತು, ಅದಕ್ಕೆ ಪತ್ರಿಕೆಯಾಗಲಿ, ಸಂಸ್ಥೆಯಾಗಲಿ, ಮತ್ತ್ಯಾವುದೇ ಸಂಗತಿಗಳೂ ಕಾರಣ ಅಲ್ಲ.ಆತ ಅಪೇಕ್ಷಿಸಿದಂತೆ ಅವನ ಓಲೈಕೆ, ಬಕೆಟ್ ಹಿಡಿಯುವಿಕೆ, ಚಮಚಾಗಿರಿ ಮಾಡಿದ್ದರೆ, ನಿರಾತಂಕವಾಗಿ ಅಲ್ಲಿಯೇ ಮುಂದುವರಿಯಬಹುದಿತ್ತು! ಇಷ್ಟಾಗಿಯೂ ವ್ಯಕ್ತಿಯನ್ನು ನಾನು ಸದಾ ಸ್ಮರಿಸುತ್ತೇನೆ. ಒಂದು ರೀತಿಯಲ್ಲಿ ನನಗೆ ಆತ ಪ್ರಾತಃ ಸ್ಮರಣೀಯ. ಕಾರಣ ಆತ ನನ್ನನ್ನು ಕೆಟ್ಟದ್ದಾಗಿ ನಡೆಸಿಕೊಳ್ಳದಿದ್ದರೆ ನಾನುವಿಕವನ್ನು ಬಿಡುತ್ತಿರಲಿಲ್ಲ. ವಿಕಕ್ಕಿಂತ ಮಿಗಿಲಾದ ಈಗಿನ ಜವಾಬ್ದಾರಿಯೂ ಸಿಗುತ್ತಿರಲಿಲ್ಲ. ಆತನ ಹೊಟ್ಟೆ ಸದಾ ತಣ್ಣಗಿರಲಿ! "ಹೀಗೆ "ಸಣ್ಣ ಮನಸ್ಸಿನ" ವ್ಯಕ್ತಿಗೆ ಬರೆಯುವ ನೆಪದಲ್ಲಿ ಭಟ್ಟರು ಇನ್ನೂ ಅನೇಕ ಸಂಗತಿಗಳನ್ನು ತಮ್ಮ ದೊಡ್ಡ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ಬರಹದಲ್ಲಿ 14 ವ್ಯಕ್ತಿಗಳ ಹೆಸರುಗಳು ಪ್ರಸ್ತಾಪವಾಗಿದೆ. 3 ವ್ಯಕ್ತಿಗಳ ಭಾವಚಿತ್ರ ಅಚ್ಚಾಗಿದೆ. ಬರಹವು ತಾಣದ ಬ್ರೇಕಿಂಗ್ ನ್ಯೂಸ್ ವಿಭಾಗದಲ್ಲಿ ಅಡಕವಾಗಿದೆ

ವಿಜಯ ಕರ್ನಾಟಕಬಿಟ್ಟ ಒಂದು ವರ್ಷದಲ್ಲಿ…!

ಇಂದಿಗೆ ಬರೋಬ್ಬರಿ ಒಂದು ವರ್ಷವಾಯಿತು!
ಹಿಂದಿನ ವರ್ಷ ಇದೇ ದಿನ ನಾನುವಿಜಯ ಕರ್ನಾಟಕಪತ್ರಿಕೆಗೆ ರಾಜೀನಾಮೆ ಕೊಟ್ಟು ಹೊರಬಿದ್ದಿದ್ದು. ಒಂದು ವರ್ಷ ಅದೆಷ್ಟು ಬೇಗ ಸರಿದು ಹೋಯಿತು?! ಇಂದಿಗೆ ನಿಂತು ಕಳೆದ ಮುನ್ನೂರ ಅರವತ್ತೈದು ದಿನಗಳನ್ನು ರಿವರ್ಸ್ ಗಿಯರ್್ನಲ್ಲಿ ಹೋಗಿ ತಟ್ಟಿ ಬಂದರೆ ಎಲ್ಲವೂ ತೀರಾ ವಿಚಿತ್ರವೆನಿಸುತ್ತಿದೆ. ಏಕೋ ರಾನನ್ ಕೀಟಿಂಗ್್ನ ”I believe I can fly’ ಹಾಗೂ ‘Life is a roller-coasterಹಾಡು ನೆನಪಾಗುತ್ತಿದೆ. ತನ್ನ ಜೀವನದಲ್ಲಿ ಒಂದು ವರ್ಷದಲ್ಲಿ ನಡೆದ ವಿದ್ಯಮಾನ, ಪ್ರಸಂಗಗಳನ್ನು ಮೆಲುಕು ಹಾಕಿದರೆ ಜೀವನದ ಅಸಂಖ್ಯ ಸಾಧ್ಯತೆ, ಅಗಾಧ ವಿಸ್ತಾರ, ಹರವು, ಅದು ನೀಡುವ ಅವಕಾಶಗಳಿಂದಾಗಿ ಬದುಕಿನ ಮೇಲೆ ವಿಶ್ವಾಸ, ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ. ಅವಧಿಯಲ್ಲಿ ನನ್ನವರೆನ್ನುವವರು ನಡೆದುಕೊಂಡ ರೀತಿಯಿಂದ ಮಾನವ ಸಂಬಂಧಗಳು ಹೊರಳುವ, ಮಗ್ಗಲು ಬದಲಿಸುವ, ನಿಜ ಸ್ವರೂಪ ಪ್ರದರ್ಶಿಸುವ ಹಾಗೂ ಮೂಲಕ ಸಂಬಂಧಗಳ ಸಂಕೀರ್ಣತೆ, ಶಿಥಿಲತೆ ಹಾಗೂ ಗಟ್ಟಿತನ ಅರಿಯಲು ಸಹಾಯಕವಾಗಿದೆ. ಬದುಕು ಸಾಕಷ್ಟು ಚಾಣ ತಿಂದಿದೆ. ಹದವಾಗಿದೆ. ಮೊದಲಿಗಿಂತ ಜೀವನವನ್ನು, ಮನುಷ್ಯರನ್ನು ಹೆಚ್ಚು ಪ್ರೀತಿಸಲಾರಂಭಿಸಿದ್ದೇನೆ. ಅದಕ್ಕಾಗಿ ಇಂದು ಬೆಳಿಗ್ಗೆ ಬೆಳಗ್ಗೆಯೇ ಒಂದು ಟ್ವೀಟ್ ಮಾಡಿದೆ- ‘Be thankful to problems. If they were to be less difficult, someone with lesser ability might have done your job” ಆಗೋದೆಲ್ಲ ಒಳ್ಳೆಯದಕ್ಕೇ ಆಯಿತು ಅಂತಾರಲ್ಲ, ನನ್ನ ವಿಷಯದಲ್ಲಿ ಮಾತ್ರ ಆಗಿದ್ದೆಲ್ಲ ಭಾಳ ಭಾಳ ಒಳ್ಳೆಯದೇ ಆಯಿತು ಎನ್ನಬಹುದು. ಆಗುವುದಕ್ಕೂಮತ್ತುಆಗಿದ್ದಕ್ಕೂನಡುವೆ ನಾವು ಹೇಗೆ ವರ್ತಿಸುತ್ತೇವೆ, ಸಮಸ್ಯೆಯನ್ನು ಯಾವ ರೀತಿ ನೋಡುತ್ತೇವೆ ಹಾಗೂ ಸ್ವೀಕರಿಸುತ್ತೇವೆ ಎಂಬುದು ಬಹಳ ಮುಖ್ಯ.
ಹಾಗೆ ನೋಡಿದರೆ ನಾನುವಿಜಯ ಕರ್ನಾಟಕಕ್ಕೆ ರಾಜೀನಾಮೆ ನೀಡಬೇಕಾದ ಸಂದರ್ಭ, ಸನ್ನಿವೇಶ ನನಗೇನೂ ಅನಿರೀಕ್ಷಿತವಾಗಿರಲಿಲ್ಲ. ಹೀಗಾಗಿ ಅದು ನನ್ನ ಪಾಲಿಗೆ ಆಘಾತಕಾರಿ ಬೆಳವಣಿಗೆಯೂ ಆಗಿರಲಿಲ್ಲ. ವಿಪರ್ಯಾಸವೆಂದರೆ ಹಿಂದಿನ ದಿನ, ಅಂದರೆ ಡಿಸೆಂಬರ್ 7 ರಂದು ಪ್ರತಾಪ ಸಿಂಹ ವಿಷಯದ ಬಗ್ಗೆ ಅರ್ಧ ಗಂಟೆ ನನ್ನ ಜತೆಗೆ ಚರ್ಚಿಸಿದ್ದ. ‘ಸಾರ್, ಇಂಥ ವಾತಾವರಣದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ, ರಾಜೀನಾಮೆ ಕೊಟ್ಟುಬಿಡಿ, ನಿಮ್ಮ ಜತೆ ನಾವಿದ್ದೇವೆಎಂದು ಪ್ರತಾಪ ಹೇಳಿದ್ದ. ‘ ಕಾಲ ಬರಲಿದೆ. ಆಗ ಯೋಚನೆ ಮಾಡೋಣ ಬಿಡುಎಂದು ಹೇಳಿದ್ದೆ. ಆದರೆ ಕಾಲಮರು ದಿನವೇ ಬಂದುಬಿಡುತ್ತದೆ ಎಂದು ನಾನಂತೂ ನಿರೀಕ್ಷಿಸಿರಲಿಲ್ಲ.
ಯಾಕೆಂದರೆ
ನಾನು ರಾಜೀನಾಮೆ ನೀಡಿದ ಹಿಂದಿನ ದಿನ ಕೆಲಸ ಮುಗಿಸಿ ರಾತ್ರಿ ಹನ್ನೊಂದು ಗಂಟೆಗೆ ಮನೆಗೆ ಹೋಗಬೇಕೆಂದು ಕಚೇರಿಯಿಂದ ಹೊರಬರುವಷ್ಟರಲ್ಲಿ ಒಂದು ಸುದ್ದಿ ಬಂತು. ಹಿರಿಯ ಪತ್ರಕರ್ತ ಸಂತೋಷಕುಮಾರ್ ಗುಲ್ವಾಡಿ ನಿಧನರಾದರಂತೆ ಎಂದು ನಮ್ಮ ವರದಿಗಾರರು ಹೇಳಿದರು. ಗುಲ್ವಾಡಿಯವರ ಬಗ್ಗೆ ಒಂದು ಸೂಕ್ತ ಶ್ರದ್ಧಾಂಜಲಿ ಲೇಖನ ಬರೆಯದಿದ್ದರೆ ಹೇಗೆ, ಅವರಿಗೊಂದು ಪುಟ ಮೀಸಲಿಡದಿದ್ದರೆ ಹೇಗೆ ಎಂದೆನಿಸಿ, ವಾಪಸ್ ನನ್ನ ಕ್ಯಾಬಿನ್್ಗೆ ಬಂದು ಗುಲ್ವಾಡಿ ಬಗ್ಗೆ ಬರೆಯಲಾರಂಭಿಸಿದೆ. ಅವರ ನಿಧನ ವಾರ್ತೆ, ವಿಶೇಷ ಲೇಖನ, ಸಮಗ್ರ ಬದುಕು ಮತ್ತು ಅಪರೂಪದ ಫೋಟೊಗಳನ್ನು ಒಳಗೊಂಡ ಇಡೀ ಪುಟ ಸಿದ್ಧಪಡಿಸಿದೆವು. ಎಲ್ಲ ಕೆಲಸ ಮುಗಿಸಿ ಮನೆಗೆ ಬರುವಾಗ ರಾತ್ರಿ ಒಂದು ಗಂಟೆಯಾಗಿತ್ತು. ಅಂದರೆ ರಾಜೀನಾಮೆ ನೀಡುವ ಹಿಂದಿನ ದಿನದವರೆಗೂ ಪತ್ರಿಕೆಯಲ್ಲಿ ನನ್ನ ಪಾಲ್ಗೊಳ್ಳುವಿಕೆ ಸಂಪೂರ್ಣವಾಗಿತ್ತು.
ಟೈಮ್ಸ್ ಆಫ್ ಇಂಡಿಯಾಮ್ಯಾನೇಜ್್ಮೆಂಟ್ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಗಳಿವೆ. ಕಲ್ಪನೆ ಪತ್ರಕರ್ತರಲ್ಲೂ ಮನೆಮಾಡಿದೆ. ಅದೇನೆಂದರೆ, ಟೈಮ್ಸ್ ಮ್ಯಾನೇಜ್್ಮೆಂಟ್ ಕಣ್ಣಲ್ಲಿ ಸಂಪಾದಕರು ಲೆಕ್ಕಕ್ಕಿಲ್ಲವಂತೆ, ಸಂಪಾದಕರನ್ನು ಕೆಟ್ಟದಾಗಿ ನಡೆಸಿಕೊಳ್ತಾರಂತೆ, ಸಂಪಾದಕರಿಗಿಂತ ಮಾರ್ಕೆಟಿಂಗ್್ನವರದೇ ದರ್ಬಾರಂತೆಇತ್ಯಾದಿ. ಇವೆಲ್ಲ ಶುದ್ಧ ಬೊಗಳೆ. ವಿಜಯ ಕರ್ನಾಟಕ ಟೈಮ್ಸ್ ಮ್ಯಾನೇಜ್್ಮೆಂಟ್ ಅಧೀನಕ್ಕೆ ಒಳಪಟ್ಟ ನಂತರ ನಾನು ಐದು ವರ್ಷ ಪ್ರಧಾನ ಸಂಪಾದಕನಾಗಿ ಕೆಲಸ ಮಾಡಿದ್ದೇನೆ. ಅವಧಿಯಲ್ಲಿ ಒಂದೇ ಒಂದು ಸಲ ನನಗಾಗಲಿ, ಸಂಪಾದಕ ಹುದ್ದೆಯ ಗೌರವ, ಸೆಡವಿಗಾಗಲಿ ಕುಂದು ಉಂಟಾಗುವ ಘಟನೆ, ಪ್ರಸಂಗ ಜರುಗಲಿಲ್ಲ. ಟೈಮ್ಸ್ ಮ್ಯಾನೇಜ್್ಮೆಂಟ್ ತೆಕ್ಕೆಗೆ ವಿಕ ಸೇರಿದ ಸಂದರ್ಭದಲ್ಲಿ ದಿಲ್ಲಿಯ ತಮ್ಮ ಮನೆಗೆ ಮಾಲೀಕರಾದ ಸಮೀರ್ ಜೈನ್ ನನ್ನನ್ನು ಕರೆಯಿಸಿಕೊಂಡಿದ್ದರು. ಮಧ್ಯಾಹ್ನದ ಊಟ ಸವಿಯುತ್ತಾ ಮೂರು ಗಂಟೆ ಕಾಲ ಅವರೊಂದಿಗೆ ಕಳೆದ ಕ್ಷಣಗಳನ್ನು ಮರೆಯುವಂತೆಯೇ ಇಲ್ಲ. ಟೈಮ್ಸ್ ಸಂಸ್ಥೆಯಲ್ಲಿ ಎಲ್ಲವೂ ಕರಾರುವಾಕ್ಕು. ಮಧ್ಯೆ ಇರುವ ಜನರಿದ್ದಾರಲ್ಲ, ಅವರದೇ ಕಿರಿಕ್ಕು. ನನ್ನ ವಿಷಯದಲ್ಲಾಗಿದ್ದೂ ಇದೇ. ಚಿನ್ನನ್್ದಾಸ್ ನಂತರ ವಿಜಯ ಕರ್ನಾಟಕದ ಮ್ಯಾನೇಜ್್ಮೆಂಟ್ ಮುಖ್ಯಸ್ಥನಾಗಿ ಬಂದ ತೀರ ಸಣ್ಣ ಮನಸ್ಸಿನ ವ್ಯಕ್ತಿಯೊಬ್ಬ ನನ್ನ ಜನಪ್ರಿಯತೆ ಸಹಿಸದಾದ. ಆತ ಮೊದಲ ದಿನದಿಂದಲೇ ಕ್ಯಾತೆ ತೆಗೆಯಲಾರಂಭಿಸಿದ. ಅಂಥವನ ಜತೆ ಎರಡು ವರ್ಷ ಕಾಲ ದೂಡಿದ್ದೊಂದು ಕತೆ. ಇರಲಿ. ಇದೊಂದೇ ಕಾರಣದಿಂದ ನಾನು ಹೊರಬಂದೆ ಹೊರತು, ಅದಕ್ಕೆ ಪತ್ರಿಕೆಯಾಗಲಿ, ಸಂಸ್ಥೆಯಾಗಲಿ, ಮತ್ತ್ಯಾವುದೇ ಸಂಗತಿಗಳೂ ಕಾರಣ ಅಲ್ಲ. ಆತ ಅಪೇಕ್ಷಿಸಿದಂತೆ ಅವನ ಓಲೈಕೆ, ಬಕೆಟ್ ಹಿಡಿಯುವಿಕೆ, ಚಮಚಾಗಿರಿ ಮಾಡಿದ್ದರೆ, ನಿರಾತಂಕವಾಗಿ ಅಲ್ಲಿಯೇ ಮುಂದುವರಿಯಬಹುದಿತ್ತು! ಇಷ್ಟಾಗಿಯೂ ವ್ಯಕ್ತಿಯನ್ನು ನಾನು ಸದಾ ಸ್ಮರಿಸುತ್ತೇನೆ. ಒಂದು ರೀತಿಯಲ್ಲಿ ನನಗೆ ಆತ ಪ್ರಾತಃ ಸ್ಮರಣೀಯ. ಕಾರಣ ಆತ ನನ್ನನ್ನು ಕೆಟ್ಟದ್ದಾಗಿ ನಡೆಸಿಕೊಳ್ಳದಿದ್ದರೆ ನಾನುವಿಕವನ್ನು ಬಿಡುತ್ತಿರಲಿಲ್ಲ. ವಿಕಕ್ಕಿಂತ ಮಿಗಿಲಾದ ಈಗಿನ ಜವಾಬ್ದಾರಿಯೂ ಸಿಗುತ್ತಿರಲಿಲ್ಲ. ಆತನ ಹೊಟ್ಟೆ ಸದಾ ತಣ್ಣಗಿರಲಿ!
ವಿಕದೊಂದಿಗಿನ ಸಂಬಂಧ ಅನೂಹ್ಯವಾದುದು. ಪತ್ರಿಕೆಯನ್ನು ನಂಬರ್ ಒನ್ ಮಾಡಿದ್ದು ನಾನೇ ಎಂಬ ಭ್ರಮೆ ನನಗೆ ಇಲ್ಲ. ಅದು ನಂ.1 ಆದಾಗ ನಾನು ಪತ್ರಿಕೆಯ ಪ್ರಧಾನ ಸಂಪಾದಕನಾಗಿದ್ದೆ ಎಂದು ಭಾವಿಸುವುದು  ಹೆಚ್ಚು ಸೂಕ್ತ, ಸಮರ್ಪಕ. ‘ವಿಕಕ್ಕೆ ನಾನೇನು ಮಾಡಿದೆ ಎಂಬುದು ಮುಖ್ಯವಲ್ಲ. ಅದು ಓದುಗರಿಗೆ ಗೊತ್ತಿದೆ. ಆದರೆ ನನ್ನನ್ನು ರೂಪಿಸಿದ್ದು ಮಾತ್ರವಿಕವೇ. ಅದಿಲ್ಲದಿದ್ದರೆ ನಾನು ಹೀಗೆ ಇಂದು ಇರುತ್ತಿರಲಿಲ್ಲ. ನಾನು ಈಗವಿಕಬಿಟ್ಟಿರಬಹುದು. ಆದರೆ ಅಸಂಖ್ಯ ಓದುಗರುವಿಕದೊಂದಿಗಿನ ನನ್ನ ಸಂಬಂಧವನ್ನು ಕಳಚಿದ್ದನ್ನು ಒಪ್ಪಿಕೊಳ್ಳಲು ಇನ್ನೂ ತಯಾರಿಲ್ಲ. ನಾನು ಗುಂಗಿನಿಂದ ಬಂದು ಬಹಳ ದಿನಗಳಾದವು. ಆದರೆ ಕೆಲ ಓದುಗರಿಗೆ ಮಾತ್ರ ಇನ್ನೂ ಅರಗಿಸಿಕೊಳ್ಳಲು ಸಾಧ್ಯಾವಾಗುತ್ತಿಲ್ಲ. ನಿಧಾನಕ್ಕೆ ಎಲ್ಲವೂ ಬದಲಾಗುತ್ತದೆ. ಬೆಂಗಳೂರಿನಿಂದ ಕುಮಟಾಕ್ಕೋ, ಗುಲ್ಬರ್ಗಕ್ಕೋ ಮಂಗಳೂರಿಗೋ ಬಸ್ಸಿನಲ್ಲಿ ಹೋಗಲು ರಿಸರ್ವೇಶನ್ ಮಾಡಿಸಿರುತ್ತೇವೆ ಅಂತಿಟ್ಟುಕೊಳ್ಳಿ. ಇಲ್ಲಿಂದ ಅಲ್ಲಿಗೆ ಹೋಗುವ ತನಕ ಮಾತ್ರ ಸೀಟು ನಮ್ಮದು. ಆನಂತರ ಸೀಟಿನಲ್ಲಿ ಯಾರೋ ಬಂದು ಕುಳಿತುಕೊಳ್ಳುತ್ತಾರೆ. ಆದರೆ ಪಯಣ ಮಾತ್ರ ಮುಂದುವರಿಯುತ್ತದೆ, ಮುಂದುವರಿಯಬೇಕು. ಅದೇ ಜೀವನ ತಾನೆ? ಇಡೀ ಪ್ರಸಂಗವನ್ನು ಭಾವದಿಂದ ತೆಗೆದುಕೊಂಡಿರುವುದರಿಂದ ಬೇಸರದ ಪ್ರಶ್ನೆಯೇ ಮೂಡಿಲ್ಲ.
ಅಷ್ಟಕ್ಕೂ ಬೇಸರವಾಗಲು ಕಾರಣಗಳಾದರೂ ಏಕೆ? ರಾಜೀನಾಮೆ ನೀಡಿ ಬರುತ್ತಿರುವಂತೆ ನನ್ನ ಪತ್ನಿಗೆ ಫೋನ್್ನಲ್ಲಿ ತಿಳಿಸಿದರೆ, ‘ಒಳ್ಳೆಯದಾಯಿತು. ನಿಮಗೂ ವಿಶ್ರಾಂತಿ ಅಗತ್ಯವಿತ್ತು ಬಿಡಿಎಂದಳು. ನಾನು ಎರಡನೆ ಕರೆ ಮಾಡಿದ್ದುವಿಜಯ ಕರ್ನಾಟಕಕ್ಕೆ ನನ್ನನ್ನು ಪ್ರಧಾನ ಸಂಪಾದಕನನ್ನಾಗಿ ಕೂರಿಸಿದ ವಿಜಯ ಸಂಕೇಶ್ವರರಿಗೆ. ನನ್ನದು ಅವರದು ಅವಿನಾಭಾವ ಸಂಬಂಧ. ಏನಿಲ್ಲವೆಂದರೂ ನೂರಾರು ವೇದಿಕೆಗಳಲ್ಲಿ ಅವರನ್ನು ಸ್ಮರಿಸಿಕೊಂಡಿರಬಹುದು. ನಾನೇನಾದರೂ ಪತ್ರಿಕಾ ಮಾಲೀಕರು- ಸಂಪಾದಕರ ನಡುವಿನ ಸಂಬಂಧದ ಬಗ್ಗೆ ಬರೆದರೆ ಅವರು, ಅವರ ಮಗ ಆನಂದ ಸಂಕೇಶ್ವರ್ ಹಾಗೂ ನನ್ನ ಕುರಿತೇ ಬರೆದುಕೊಳ್ಳಬೇಕು. ‘ವಾಷಿಂಗಟನ್ ಪೋಸ್ಟ್್ಪತ್ರಿಕೆಯ ಜನಪ್ರಿಯ ಹಾಗೂ ಘನಂಧಾರಿ ಸಂಪಾದಕ ಬೆನ್ ಬ್ರಾಡ್ಲಿ ತನ್ನ ಆತ್ಮಕತೆ ”A Good Life’ ನಲ್ಲಿ ಬರೆದುಕೊಂಡಿದ್ದಾನೆ- ‘ಕ್ಯಾಥರಿನ್ ಗ್ರಾಹಮ್್ಳಂಥ ಪ್ರಕಾಶಕಿ ಇರುವುದರಿಂದ ಬೆನ್ ಬ್ರಾಡ್ಲಿಯಂಥ ಸಂಪಾದಕ ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಾಯಿತು. ಇಲ್ಲವಾದರೆ ನಾನ್ಯಾವ ಸೀಮೆ ಸಂಪಾದಕ?’ ವಿಜಯಸಂಕೇಶ್ವರ ಬಗ್ಗೆ ಸಹ ಮಾತು ಅನ್ವಯ, ಅನ್ವರ್ಥಕ.
ಸಂಕೇಶ್ವರ ಅವರಿಗೆ ಫೋನ್ ಮಾಡಿದಾಗ ಅವರು ಸೇಲಮ್್ನಲ್ಲಿದ್ದರು. ಮರುದಿನ ಭೇಟಿಯಾಗೋಣ ಎಂದರು. ಡಿಸೆಂಬರ್ 9 ರಂದು ನಾನು, ವಿಜಯ ಸಂಕೇಶ್ವರ ಏಟ್ರಿಯಾ ಹೋಟೆಲ್್ನಲ್ಲಿ ಉಪಾಹಾರಕ್ಕೆ ಸೇರಿದೆವು. ಅವರ ಪತ್ನಿಯೂ ಇದ್ದರು. ಉಪಾಹಾರ ಮುಗಿಸಿ ಮೇಲೇಳುವ ಹೊತ್ತಿಗೆ ಸಂಕೇಶ್ವರರು, ‘ನನ್ನ ಹೊಸ ಪತ್ರಿಕೆಗೆ ಇಂದಿನಿಂದಲೇ ಕೆಲಸ ಶುರು ಮಾಡಿ. ನಿಮಗೆ ಮುಕ್ತ ಆಹ್ವಾನ ಕೊಡುತ್ತಿದ್ದೇನೆಎಂದರು.ಸಂಕೇಶ್ವರರನ್ನು ಭೇಟಿ ಮಾಡಲು ಹೋಗುವಾಗ, ಪರಿಚಿತರಾದವರೊಬ್ಬರು ಫೋನ್ ಮಾಡಿ, ‘ನಾಡಿದ್ದು (ಡಿ.11) ರಾಜೀವ್ ಚಂದ್ರಶೇಖರ್ ನಿಮ್ಮನ್ನು ಕಾಣಬಯಸಿದ್ದಾರೆಎಂದು ಹೇಳಿದರು. ಸಂಕೇಶ್ವರರನ್ನು ಭೇಟಿ ಮಾಡಿ ವಾಪಸ್ ಬರುತ್ತಿರುವಾಗ ಆತ್ಮೀಯರೊಬ್ಬರು ಫೋನ್ ಮಾಡಿನಾಳೆ ಡಿಸೆಂಬರ್ 10 ರಂದು ಸಾಯಂಕಾಲ ಉದಯವಾಣಿ ಪತ್ರಿಕೆ ಮಾಲೀಕರಾದ ಗೌತಮ್ ಪೈ ಜತೆಗೆ ಮೀಟಿಂಗ್ ನಿಶ್ಚಯವಾಗಿದೆಎಂದರು.ಡಿಸೆಂಬರ್ 10 ರಂದು ವಿಂಡ್ಸರ್ ಮ್ಯಾನರ್ ಹೋಟೆಲ್್ನಲ್ಲಿ ನಾನು ಹಾಗೂ ಗೌತಮ್ ಪೈ ಭೇಟಿಯಾದೆವು. ಅವರು ಅದೇ ರಾತ್ರಿ ಅಮೆರಿಕಕ್ಕೆ ಹೋಗುವವರಿದ್ದರು. ಪತ್ರಿಕಾ ಮಾಲೀಕರ ಪೈಕಿ ಅತ್ಯಂತ ಅಪರೂಪದ ವ್ಯಕ್ತಿ ಗೌತಮ್. ಮಿತಭಾಷೀ ಆದರೆ ಸ್ಪಷ್ಟ ವಿಚಾರ. ಪತ್ರಿಕಾ ಮಾಲೀಕನೆಂಬ ಪೊಗರು, ಪೊಂಚು ಇಲ್ಲ. ‘highly unassuming’ ಅಂತಾರಲ್ಲ ಹಾಗೆ. ಹೊರ ಪ್ರಪಂಚವನ್ನು ಚೆನ್ನಾಗಿ ಬಲ್ಲ, ತುದಿ ಬೆರಳಲ್ಲಿ ವಿಷಯಗಳನ್ನಿಟ್ಟುಕೊಂಡಿರುವ ಗೌತಮ್, ಆದರೆ ಹೊರಗೆ ಅಷ್ಟಾಗಿ ತೆರೆದುಕೊಂಡವರಲ್ಲ. ಎಲ್ಲ ಪತ್ರಿಕೆಯ ಸುದ್ದಿ ಮನೆಯಲ್ಲಿ ಅವರ ಫೋಟೋ ಸಹ ಇದ್ದಂತಿಲ್ಲ. ಆದರೆ ಗೌತಮ್ ಪ್ರತಿಯೊಂದು ಸಂಗತಿಗಳಲ್ಲೂ ವಿಶೇಷ ಕುತೂಹಲವಿಟ್ಟುಕೊಂಡಿರುವ, ಪತ್ರಿಕೆಯನ್ನು ಕಟ್ಟುವಲ್ಲಿ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವ, ಯಾರಾದರೂ ಇಷ್ಟಪಡುವ  ಸಜ್ಜನ. ಅಂದು ನಮ್ಮಿಬ್ಬರ ಮಧ್ಯೆ ಮಾತುಕತೆ ಹರಡಿಕೊಂಡು ಒಂದು ಗಂಟೆಯಾದ ಬಳಿಕ ಗೌತಮ್ ತಮ್ಮ ಐಪ್ಯಾಡ್ ಕವರ್್ನಿಂದ ಒಂದು ಲಕೋಟೆ ತೆಗೆದು, ‘ಇದು ನಿಮ್ಮ ಆಫರ್ ಲೆಟರ್. ಯಾವಾಗ ಸೇರ್ತೀರಿ? ಆದಷ್ಟು ಬೇಗ ಸೇರ್ತೀರಿ ಅಂತ ಅಂದುಕೊಂಡಿದ್ದೇನೆಎಂದರು. ಅವರು ಹೋದ ಬಳಿಕ ಕವರ್ ಒಡೆದು ನೋಡಿದೆ. ‘ಎಡಿಟೋರಿಯಲ್ ಡೈರೆಕ್ಟರ್್ಎಂಬ ಡೆಸಿಗ್ನೇಶನ್ ಕೊಟ್ಟು ಕೆಲಸಕ್ಕೆ ಆಮಂತ್ರಣ ನೀಡಿದ್ದರು.
ಗೌತಮ್ ಪೈ ಅವರನ್ನು ಭೇಟಿ ಮಾಡಿದ ಮರುದಿನವೇ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿದೆ. ಕಳೆದ ಹದಿನಾಲ್ಕು ವರ್ಷಗಳಿಂದ ಅವರು ಪರಿಚಿತರು. ನಾವಿಬ್ಬರೂ ಹಲವಾರು ಸಂದರ್ಭಗಳಲ್ಲಿ ವಿಚಾರ ವಿನಿಮಯ ಮಾಡಿಕೊಂಡವರು. ರಾಜೀವ್ ಅವರ ವೇಗ, ಪಾದರಸದಂಥ ವ್ಯಕ್ತಿತ್ವ, ದೂರದೃಷ್ಟಿತ್ವ ಎಂಥವರನ್ನಾದರೂ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಅವರಲ್ಲಿ ಯಾರಾದರೂ ತಕ್ಷಣ ಗುರುತಿಸುವ ಅಂಶವೇನೆಂದರೆ ಅವರು ನಿಮಗಿಂತ ಕನಿಷ್ಠ ಒಂದು ವಾರ ಮುಂದಿರುತ್ತಾರೆ. ನನಗಿಂತ ಒಂದು ವರ್ಷ ಹಿರಿಯರಾದ ರಾಜೀವ ಅವರ ಸಾಧನೆ ಅಸಾಮಾನ್ಯ. ಬರೀ ಇಪ್ಪತ್ತು ನಿಮಿಷಗಳಲ್ಲಿ ನಮ್ಮ ಮಾತುಕತೆ ಮುಗಿದುಹೋಯಿತು. ಅವರು ಕೊಟ್ಟ ಆಫರ್ ಹೇಗಿತ್ತೆಂದರೆ ಅದು ಯಾವುದೇ ಪತ್ರಕರ್ತನಿಗೆ ಜೀವನದಲ್ಲಿ ಪದೇ ಪದೆ ಸಿಗುವಂಥದ್ದಲ್ಲ! ಜೀವನದಲ್ಲಿ ಹೆಚ್ಚೆಂದರೆ ಒಂದು ಸಲ ಮಾತ್ರ ಸಿಗಬಹುದು! ಹಾಗಿತ್ತು.
ಹತ್ತು ವರ್ಷ ನನಗೆ ಹಾಗೂ ನನ್ನ ಮಗನಿಗೆ ಸಿಗದೇ ಬರೀ ವಿಜಯ ಕರ್ನಾಟಕದಲ್ಲೇ ಕಳೆದಿರಿ. ನಿಮ್ಮ ನಿರುದ್ಯೋಗ ಪರ್ವವನ್ನು ನಾವು ತುಂಬು ಹೃದಯದಿಂದ ಸ್ವಾಗತಿಸುತ್ತೇವೆಎಂದು ನಾನು ರಾಜೀನಾಮೆ ಕೊಟ್ಟ ದಿನ ವಿಜೃಂಭಿಸಿ ನನ್ನ ಪತ್ನಿ ಸಂಭ್ರಮಪಟ್ಟಿದ್ದಳು.
ಆದರೆ ರಾಜೀನಾಮೆ ಕೊಟ್ಟು ಇನ್ನೂ ಮೂರು ದಿನಗಳಾಗಿರಲಿಲ್ಲ. ಆಗಲೇ ಮೂರು ಕೆಲಸಗಳು ಅರಸಿಕೊಂಡು ಬಂದಿದ್ದವು. ನಾನು ಅಕ್ಷರಶಃ problem of plenty ಅಂತಾರಲ್ಲ, ಅಂಥ ಸಂಕಟ ಅನುಭವಿಸಿದೆ. ಸಂಕೇಶ್ವರರು ಹಾಗೂ ಗೌತಮ್ ಪೈ ನನ್ನ ನಿರ್ಧಾರದಿಂದ ಏನಂದುಕೊಂಡರೋ ಏನೋ, ಆದರೆ ನಾನು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕತ್ವವನ್ನು ವಹಿಸಿಕೊಂಡೆ.
ನಾನು ರಾಜೀನಾಮೆ ನೀಡಿ ಒಂದು ಗಂಟೆಯೊಳಗೆ ನನ್ನ ಸಹೋದ್ಯೋಗಿ ಮಿತ್ರರಾದ ಪಿ. ತ್ಯಾಗರಾಜ್, ಪ್ರತಾಪ ಸಿಂಹ ಹಾಗೂ ರಾಧಾಕೃಷ್ಣ ಭಡ್ತಿ, ಬೇಡ ಬೇಡವೆಂದರೂ ರಾಜೀನಾಮೆ ನೀಡುತ್ತೇವೆಂದು ಹೇಳಿ ಮರು ದಿನವೇ ನೀಡಿಬಿಟ್ಟರು. ಪ್ರತಾಪ್ ಮದುವೆಯಾಗಿ ಬರೀ ಇಪ್ಪತ್ತೊಂದು ದಿನಗಳಾಗಿದ್ದವು! ನಾನೇನಾದರೂ ಪ್ರತಾಪ್ ಜಾಗದಲ್ಲಿದ್ದಿದ್ದರೆ ಅಂಥ ನಿರ್ಧಾರ ತೆಗೆದುಕೊಳ್ಳಲು ಧೈರ್ಯ ಮಾಡುತ್ತಿದ್ದೆನಾ? ಗೊತ್ತಿಲ್ಲಆದರೆ ನನ್ನ ಓದುಗರು ನೀಡಿದ ಪ್ರತಿಕ್ರಿಯೆಯಿದೆಯಲ್ಲ, ಅದು ಮಾತ್ರ ನನ್ನನ್ನು ಹಿತವಾಗಿ ಕದಲಿಸಿಹಾಕಿತು. ಒಬ್ಬರಾ, ಇಬ್ಬರಾ, ಅಸಂಖ್ಯ ಓದುಗರು ನೀಡಿದ ನೈತಿಕ ಬೆಂಬಲ ನನ್ನನ್ನು ಮೂಕವಿಸ್ಮಿತನನ್ನಾಗಿಸಿತು. ಫೇಸ್್ಬುಕ್, ನನ್ನ ವೆಬ್್ಸೈಟ್್ಗೆ ಹರಿದು ಬಂದ ಪ್ರೀತಿಯ ಬೆಂಬಲವನ್ನು ವರ್ಣಿಸಲಸಾಧ್ಯ. ಮೈಸೂರಿನ ಟೇಲರ್ ವೆಂಕಟೇಶ ಬಾಬು ನಮ್ಮ ಮನೆಗೆ ಬಂದುನೀವು ರಾಜೀನಾಮೆ ಕೊಟ್ಟಿದ್ದೀರಿ ಅಂತ ಗೊತ್ತಾಯಿತು. ನಿಮ್ಮ ಲೇಖನ, ಪತ್ರಿಕೆಯಿಂದ ನಾನು, ನನ್ನ ಮಗ ಉಪಕೃತರಾಗಿದ್ದೇವೆ, ತಪ್ಪು ತಿಳಿಯುವುದಿಲ್ಲ ಅಂದ್ರೆ ಹಣ ಇಟ್ಕೊಳ್ಳಿ, ಖರ್ಚಿಗೆ ಇರಲಿಎಂದಾಗ ನಾನು ಮಾತು ಕಳೆದುಕೊಂಡಿದ್ದೆ. ತೀರಾ ನೋವೆನಿಸಿದ ಅಂಶವೆಂದರೆ ಆತ್ಮೀಯರೆನಿಸಿಕೊಂಡ ಕೆಲವರು ಸುಖಾಸುಮ್ಮನೆ ನಡೆಸಿದ ಚಾರಿತ್ರ್ಯಹರಣ, ಅನಗತ್ಯ ಟೀಕೆ. ‘ಗೂಳಿ ಬಿದ್ದಾಗ ಆಳಿಗೊಂದು ಕಲ್ಲು’  ಎಂಬಂತೆ ಕೆಲವರು ಕಲ್ಲು ಹೊಡೆದು ಖುಷಿಪಟ್ಟರು.
ಬೇಸರವಾಗಲಿಲ್ಲ. ಮನುಷ್ಯ ಸ್ವಭಾವಕ್ಕೆ ವ್ಯತಿರಿಕ್ತವಾದದ್ದೇನನ್ನೂ ಅವರು ಮಾಡಿರಲಿಲ್ಲ. ಪ್ರಾಯಶಃ ನಾನೇ ಅವರನ್ನು ತಪ್ಪಾಗಿ ಭಾವಿಸಿದ್ದೆ. ಕತ್ತಲನ್ನು ಬೆಳಕೆಂದು ಭ್ರಮಿಸಿದ್ದು ನನ್ನದೇ ತಪ್ಪು.ಬದುಕು ಮುಂದಕ್ಕೆ ಸಾಗಲೇಬೇಕು. ಈಗ ಎರಡೆರಡು ಜವಾಬ್ದಾರಿಪತ್ರಿಕೆ ಹಾಗೂ ಟಿವಿ. ದಿನದಲ್ಲಿ ಬರೀ ಹದಿನೆಂಟು ಗಂಟೆ ಕೆಲಸ! ಉಳಿದ ಸಮಯವನ್ನು ಮಲಗಿ ವ್ಯರ್ಥಗೊಳಿಸುತ್ತಿದ್ದೇನೆ.
ಒಂದು ವರ್ಷ ಕಳೆದಿದ್ದೆ ಗೊತ್ತಾಗಲಿಲ್ಲ!
 

Wednesday, 30 November 2011

ಗೆಳೆಯ ಮಠ ಗುರುಪ್ರಾಸದ್‌ನ ಒಬ್ಬನೇ ಕೂತು ಎಣ್ಣೆ ಹಾಕೋವಾಗ ಹೊಳೆದ ಕಥೆ


ಅವನಿಗೆ ಮೂವತ್ನಾಲ್ಕು ವರ್ಷ. ಮದುವೆಯಾಗಿ ಎಂಟು ವರ್ಷ ಆಗಿದೆ. ಒಂದು ಮಗುವೂ ಇದೆ. ದೊಡ್ಡ ಕೆಲಸ.. ಅವನ ಡ್ರೈವರ್ಗೇ ತಿಂಗಳಿಗೆ ಏಳು ಸಾವಿರ ಸಂಬಳ ಅಂದ್ರೆ ಇನ್ನು ನೀವೇ ಲೆಕ್ಕ ಹಾಕಿ. ಅವನ ಹೆಸರು ಹೇಳಲು ಮರೆತೆ.. ’ಜಾಣ’, ಎಲ್ಲ ಗಂಡಸರಂತೆ
 
 ಸುದ್ದಿಸಂಗ್ರಹ:ನವೀನ್ ಮರಳವಾಡಿ           
***
ಜಾಣ ಒಂದು ದಿನ ಬೆಳಿಗ್ಗೆ ಏಳ್ತಾನೆ. ಎದ್ದು ನೋಡ್ತಾನೆ.. ಮುಖ ಒಣಗಿ ಹೋದ ಬದನೇಕಾಯಿಯಂತಾಗುತ್ತದೆ.. ಅವನು ನೋಡಿದ್ದು ಅವನ ಹೆಂಡತಿಯನ್ನ.. ರಾತ್ರಿ ಮಲಗಿದಾಗ ಕತ್ತಲಿದ್ದುದರಿಂದ ಬಹುಶಃ ಅವಳು ಸುಂದರವಾಗಿ ಗೋಚರಿಸಿರಬೇಕು.. ಅಥವಾ ತನ್ನ ಹೊತ್ತಿನ ಅವಶ್ಯಕತೆಗೆ ಹಾಗೆ ತನ್ನ ಕಣ್ಣಿಗೆ ಕಂಡಳೇನೋ.. ಈಗ ನೋಡಿದರೆ ಕೆದರಿರೋ ಕೂದಲು.. ಬಾಯಿವಾಸನೆ.. ಗೀಜು.. ಬೆವರು ನಾತ.. ಮುಖ ಸಿಂಡರಿಸಿಕೊಳ್ತಾನೆ ಜಾಣ. ಅವನಿಗೆ ನಗು ಬರುತ್ತದೆ. ಏನಪ್ಪಾ ದೇವರೇ ನಿನ್ನ ಲೀಲೆ.. ಕೊಳಕಿಯ ಜೊತೆಯಲ್ಲಾ ರಾತ್ರಿ ನಾನು ಮಲಗಿದ್ದು.. ನಿದ್ದೆ ಮಾಡ್ತಿದ್ದಾಗ ವಾಸನೆ ಯಾಕೆ ಗೊತ್ತಾಗಲ್ಲ..? ತನಗೆ ದಿನಂಪ್ರತಿ ಕನಸಿನಲ್ಲಿ ಬೀಳ್ತಿದ್ದ ಛತ್ರದ ಪಕ್ಕದ ಕೊಳೆ ತೊಟ್ಟಿಗೂ ಇವಳ ಗಬ್ಬಿಗೂ ಏನಾದ್ರೂ ಸಂಬಂಧ ಇರಬಹುದಾ..?
***
ಟವಲು ಸುತ್ತಿಕೊಂಡು ರೂಮಿನಿಂದ ಹೊರಬರುತ್ತಿರುವ ಜಾಣ ಕಣ್ಣಿನ ಗೀಜನ್ನು ಬೆರಳುಗಳಲ್ಲಿ ಪುಡಿಮಾಡುತ್ತಾ ಪಕ್ಕದಲ್ಲೇ ಇರೋ ದೇವರ ಕೋಣೆಯನ್ನು ಹಾದು ಹೋಗುವಾಗ ಅವನಿಗೆ ಇವತ್ತು ಏನೋ ತೋಚಿದಂತಾಗಿ ದೇವರ ಕೋಣೆಯ ಮುಂದೆ ಅರೆಕ್ಷಣ ನಿಲ್ತಾನೆ.. ಅಲ್ಲಿಂದಲೇ ರೂಮಿನಲ್ಲಿ ಅಸ್ತವ್ಯಸ್ತವಾಗಿ ಮಲಗಿರೋ ಹೆಂಡತಿಯ ಕಡೆ ಒಮ್ಮೆ ನೋಡಿ ಇನ್ನು ಸಾಧ್ಯವೇ ಇಲ್ಲಾ ಎನ್ನುವಂತೆ ದೇವರ ಕಡೆ ತಿರುಗಿ ಕೈ ಮುಗಿದು ಕೊಂಡು ಪ್ರಾರ್ಥಿಸಲಾರಂಭಿಸುತ್ತಾನೆ.
***
ಅಯ್ಯಾ.. ಭಗವಂತ.. ನಂಗೊಂದು ಸಹಾಯ ಮಾಡ್ತೀಯಾ.. ಮಾಡ್ತೀನಿ ಅಂದ್ರೆ ಹೇಳ್ತೀನಿ.. ದಿನಾ ಒಂದೇ ಮುಖವಾ.. ನನಗೆ ಸಾಕಾಗಿ ಹೋಗಿದೆ.. ದಿನಾ ನಾನು ಕೆಲಸದಿಂದ ಬರುವಷ್ಟರಲ್ಲಿ ನನ್ನ ಹೆಂಡತಿ ಬೇರೆ ಮುಖದಲ್ಲೇ ಇದ್ದರೆ ಹೇಗಿರ್ತಿತ್ತು..? ರಾತ್ರಿ ಮಲಗುವಾಗ ಒಂದು ಮುಖ.. ಬೆಳಿಗ್ಗೆ ಎದ್ದಾಗ ಬೇರೆಯೇ ಮುಖ.. ಡಬಲ್ ಧಮಾಕ.. ಇದೊಂದು ವರ ನನಗೆ ಕೊಡು.. ತುಂಬಾ ದಿನದಿಂದ ಕೇಳಬೇಕು ಅಂತಿದ್ದೆ.. ಇವತ್ತು ಕಾಲ ಕೂಡಿ ಬಂದಿದೆ ಅನ್ಸುತ್ತೆ.. ಯೋಚನೆ ಮಾಡು.. ನಾನು ಸ್ನಾನ ಮುಗಿಸಿ ಬರ್ತೀನಿ.. ಏನಂತೀ..? ಜಾಣ ಸ್ನಾನಕ್ಕೆ ಹೊರಡ್ತಾನೆ. ಮತ್ತೆ ತನ್ನ ರೂಮಿನೆಡೆಗೆ ನೋಡುವ ಧೈರ್ಯವನ್ನೂ ಮಾಡಲ್ಲ..
***
ಸಾರ್.. ಇವತ್ತು ಮಧ್ಯಾಹ್ನ ಹನ್ನೆರಡಕ್ಕೆ ನಿಮ್ಮ ಮಿಸಸ್ ಅವ್ರು ಬ್ಯೂಟಿ ಪಾರ್ಲರ್ಗೆ ಡ್ರಾಪ್ ಮಾಡು ಅಂತಿದ್ರು.. ನಿಮ್ಮ ಪ್ರೋಗ್ರಾಮ್ ಏನು ಸಾರ್...?’ ಜಾಣನನ್ನು ಡ್ರೈವರ್ ಕೇಳ್ತಾನೆ.. ಕಾರ್ ಚಲಿಸುತ್ತಿದೆ. ಲ್ಯಾಪ್ ಟಾಪ್ನಲ್ಲಿ ಮುಳುಗಿ ಹೋಗಿದ್ದ ಜಾಣರಾಷ್ಟ್ರಪತಿಗಳ ಜೊತೆ ಮೀಟಿಂಗ್ ಇದ್ರೂ ನಾನು ಆಟೋದಲ್ಲಿ ಹೋಗ್ತೀನಿ, ಮೊದಲು ಅವಳನ್ನ.. ಮೀನ್ ಮೇಡಂನ ಬ್ಯೂಟಿ ಪಾರ್ಲರ್ಗೆ ಕರ್ಕೊಂಡ್ ಹೋಗಿ ಬಿಡು..’
ಆಯ್ತು ಸಾರ್..’
***
ಜಾಣನಿಗೆ ಅವತ್ತು ಆಫೀಸ್ನಲ್ಲಿ ಅಂಥ ತಲೆ ಹೋಗೋ ಕೆಲಸ ಏನೂ ಇರಲಿಲ್ಲ.. ತನ್ನ ಸೆಕ್ರೆಟರಿ ಬಂದು ಬೇಕಾದ ಫೈಲ್ಸ್ಗೆ ತನ್ನ ಸಹಿ ತೊಗೊಂಡು ಹೋದ ನಂತರ ಆತ ಯೋಚಿಸಲಾರಂಭಿಸುತ್ತಾನೆ. ಸೆಕ್ರೆಟರಿ ಎಷ್ಟು ಅದ್ಭುತವಾಗಿದಾಳೆ.. ಇವಳಿಗೆ ಬರ್ತಿರೋ ಸಂಬಳಕ್ಕೆ ನಾಲ್ಕು ಪಟ್ಟು ಸಂಬಳ ಕೊಡ್ತೀನಿ ನನ್ನ ಹೆಂಡತಿ ಕೆಲಸ ಮಾಡು ಅಂದ್ರೆ ಇವಳು ಏನು ಅನ್ನಬಹುದು..? ನಾನು ಯಾವ ಹೊತ್ತಿನಲ್ಲಿ ನಿನ್ನ ನೋಡಿದ್ರೂ ನೀನು ಅದ್ಭುತವಾಗಿ ನನಗೆ ಕಾಣಬೇಕು ಅನ್ನೋ ಶರತ್ತೂ ಹಾಕಬೇಕು.. ಆದ್ಹಂಗೆ ಆಗಿಬಿಡಲಿ ಇವತ್ತು ಕೇಳೇ ಬಿಡ್ತೀನಿ.. ಇಂಟರ್ಕಾಮನಲ್ಲಿ ಅವಳನ್ನು ಕರೆದೇ ಬಿಡ್ತಾನೆ ಜಾಣ..
***
ಸಾರ್.. ಕರೆದ್ರೀ..?
ನೀನು ಈಗ ಇಲ್ಲಿ ಬರೋ ಮುಂಚೆ ಲಿಪ್ಸ್ಟಿಕ್ ಹಾಕ್ಕೊಂಡ್ ಬಂದ್ಯಾ..?
ಹೌದು ಸಾರ್.. ಯಾಕೆ.. ಕೇಳ್ತಿದ್ದೀರಿ..?
ನಾನು ಮಾತಾಡ್ತೀನಿ.. ನೀನು ಬರ್ಕೋತೀ.. ನಿನ್ನ ತುಟಿಗಳಿಗೆ ಹಾಗೆ ನೋಡಿದ್ರೆ ಕೆಲಸವೇ ಇಲ್ಲ.. ಮತ್ಯಾಕೆ.. ಲಿಪ್ಸ್ಟಿಕ್..?
ಹಲೋ.. ಹೇಳಿ ಸಾರ್..
ಏನಿಲ್ಲಮ್ಮಾ.. ಅಕೌಂಟ್ ಸೆಕ್ಷನ್ಗೆ ಮಾಡೋಕೆ ಹೋದೆ ನಿಂಗೆ ಬಂತಾ..? ಸಾರಿ..
***
ಊಟ ಬಂತಾ..?’ ಬ್ರೇಕ್ನಲ್ಲಿ ಹೆಂಡತಿ ಫೋನ್..
ಬ್ಯೂಟಿ ಪಾರ್ಲರ್ಗೆ ಹೋಗಿದ್ಯಾ..?’
ಇಲ್ಲ.. ಇವತ್ತು ಯಾಕೋ ಹೊಟ್ಟೆ ಸರೀ ಇರ್ಲಿಲ್ಲಾ.. ತುಂಬಾ ಗ್ಯಾಸ್.. ಅದಕ್ಕೆ ಹೋಗ್ಲಿಲ್ಲಾ..’
ನೆನ್ನೆಯ ಕೊಳೆಯ ತೊಟ್ಟಿ ಇವತ್ತು ನಾರಬಹುದೇನೋ.. ’ಅದ್ಭುತ.. ಆರೋಗ್ಯ ಹುಷಾರು.. ಟೇಕ್ ಕೇರ್.. ಓಕೇ.. ಬಾಯ್..’

ಒಂದ್ನಿಂಷ.. ಬರುವಾಗ ಕ್ರ್ಯಾಕ್ ತೊಗೊಂಡ್ ಬನ್ನಿ.. ಕಾಲು ಒಡೆದು ಸಾಲ್ಟ್ ಪೇಪರ್ ಥರಾ ಆಗಿ ಹೋಗಿದೆ.. ಮರೀಬೇಡೀ..’
ನಿನ್ನನ್ನು ಮರೆತು ಬಿಟ್ಟೇನು.. ಅದನ್ನ ಮರೀತೀನ್ಯೇ..? ಖಂಡಿತಾಮ್ಮಾ.. ಬಾಯ್..’
***
ಜಾಣನಿಗೆ ಇವತ್ತು ಯಾಕೋ ಕ್ಲಬ್ಗೆ ಹೋಗಬೇಕು ಅಂತ ಅನ್ನಿಸ್ತಿಲ್ಲ.. ಸೀದಾ ಮನೆಗೆ ಹೋಗಿ ಬಿಡೋಣಾ ಅಂತ ಅಂದ್ಕೋತಾನೆ. ಹೆಂಡತಿ ನೆನಪಾಗ್ತಾಳೆ. ಒಂದಿಷ್ಟು ಫೈಲ್ಸ್ ತೊಗೊಂಡು ಹೋಗಬೇಕು.. ಅದರಲ್ಲಿ ಮುಳುಗಿ ಹೋದರೆ ಬಚಾವ್.. ಸಾಧ್ಯವಾದರೆ ವೀಡಿಯೋ ಪಾರ್ಲರ್ನಲ್ಲಿ ಯಾವುದಾದ್ರೂ ರೊಮ್ಯಾಂಟಿಕ್ ಸಿನಿಮಾ ಇಸ್ಕೋಬೇಕು.. ಮನೇಲೇ ಕೂತು ಎರಡು ಪೆಗ್ ಹಾಕ್ತಾ ಸಿನೆಮಾ ನೋಡಬೇಕು.. ಜಾಣ ಡ್ರೈವರ್ಗೆ ಕಾರ್ ತೆಗೆಯಲು ಹೇಳ್ತಾನೆ.
***
ಜಾಣ ಕಾಲಿಂಗ್ ಬೆಲ್ ಒತ್ತುತ್ತಾನೆ.. ಬಾಗಿಲನ್ನು ಹೆಂಡತಿ ತೆಗೆಯುತ್ತಾಳೆ.
ಹೆಂಡತಿ ಥೇಟ್ ಚಿತ್ರನಟಿ ರಮ್ಯನ ಥರಾ ಕಾಣ್ತಿದ್ದಾಳೆ.. ಅವಳು ಹಾಕಿರೋ ಪರ್ಫ್ಯೂಮ್ ಅವನನ್ನ ಹುಚ್ಚನನ್ನಾಗಿಸುತ್ತದೆ.. ಆಗ ತಾನೇ ಸ್ನಾನ ಮಾಡಿದ್ದಾಳೆ, ಜಾಣೆ. ಕಾಲಿನಿಂದ ತಲೆಯವರೆಗಿನ ಅಣು ಅಣುವಿನಲ್ಲೂ ಆಹ್ವಾನ ಕೊಡ್ತಿದಾಳೆ..
ನೀವು ಇವತ್ತು ಕ್ಲಬ್ಗೆ ಹೋಗಲ್ಲಾಂತ ನನಗೆ ಗೊತ್ತಿತ್ತು..’ ಮಾದಕ ಧ್ವನಿಯಲ್ಲಿ ಹೇಳ್ತಾಳೆ ಜಾಣೆ.
ಹೇಗೆ.. ಗೊತ್ತಿತ್ತು..?’
ಅವಳ ಮುಖವನ್ನು ಅವನ ಮುಖಕ್ಕೆ ತಂದು ಅವನ ತುಟಿಯನ್ನು ಮುದ್ದಾಗಿ ಕಚ್ಚಿ ..’ಹೀಗೆ..’ ಹಾಗೆ ಮುದ್ದಿಸುತ್ತಲೇ ಅವನನ್ನು ಸ್ನಾನದ ಮನೆಗೆ ತಲುಪಿಸುತ್ತಾಳೆ. ಕಣ್ಣಲ್ಲಿ ಬೇಗ ಸ್ನಾನ ಮುಗಿಸಿ ಬಾ, ಸ್ವರ್ಗದ ಅಡ್ರೆಸ್ ಗೊತ್ತಾಗಿದೆ.. ನಿನ್ನ ಕರ್ಕೊಂಡು ಹೋಗಿ ಹಾಗೇ ನಾಲ್ಕು ಸುತ್ತು ಹಾಕಿಸಿಕೊಂಡು ಬರ್ತೀನಿ ಅನ್ನೋ ಇನ್ವಿಟೇಷನ್ ಕಾರ್ಡ್ ತಲುಪಿಸುತ್ತಾಳೆ.. ಜಾಣನಿಗೆ ಮಹದಾನಂದ.. ತಾನು ಮುಂದೆ ಮಾಡಬಹುದಾದ ಎಲ್ಲವನ್ನೂ ನೆನೆನೆನೆಸಿ ಕೊಂಡು.. ಕಾಮ ವಾಸ್ತವಕ್ಕಿಂತ ಕಲ್ಪನೆಯಲ್ಲಿ ಹೆಚ್ಚು ಚೆನ್ನಾಗಿರುತ್ತಂತೆ.. ಕಲ್ಪನೆಗೆ ಕಾಲದ ಮಿತಿಯಿಲ್ಲದ ಕಾರಣ..
***
ಜಾಣ ಸ್ನಾನ ಮಾಡ್ತಿದ್ದಾನೆ.. ದೇವರೇ ಬೆಳಿಗ್ಗೆ ಕೇಳಿದ ವರವನ್ನು ಏನು ಅದ್ಭುತವಾಗಿ ಕರುಣಿಸಿದ್ದೀಯಪ್ಪಾ.. ತುಂಬಾ ಥ್ಯಾಂಕ್ಸ್.. ಭಗವಂತಾ.. ನೀನು ಕೊಟ್ಟ ವರವನ್ನು ತುಂಬಾ ಸಮರ್ಥವಾಗಿ ದುಡಿಸಿಕೊಳ್ತೇನೆ.. ನೊ ಟೈಂ ವೇಸ್ಟ್.. ಅಂದ ಹಾಗೆ ಭಗವಂತಾ.. ಒಂದು ಪ್ರಶ್ನೆ.. ನಾಳೆ ನನ್ನ ಹೆಂಡತಿಯ ಮುಖ ಯಾರಂತಿರಬಹುದು.. ಮಾಹಿತಿ ಇಂಟರ್ನೆಟ್ನಲ್ಲಿ ಸಿಗಬಹುದಾ..? ತುಂಬಾ ವರ್ಷದಿಂದ ಮಾಧುರಿ ದೀಕ್ಷಿತ್ ಕಾಡ್ತಿದ್ದಾಳೆ.. ಅದೊಂದು ವ್ಯವಸ್ಥೆ ಮಾಡು.. ನಿನಗೆ ಪುಣ್ಯ ಬರುತ್ತೆ..
***
ಅವನ ಎಂಟು ವರ್ಷದ ದಾಂಪತ್ಯ ಜೀವನದಲ್ಲಿ ಅವನ ಹೆಂಡತಿ ಅವನಿಗೆ ಅಷ್ಟು ಅದ್ಭುತವಾಗಿ ಸ್ಪಂದಿಸಿರುವುದೇ ಇಲ್ಲ.. ಜಾಣ, ಮ್ಯಾನೇಜರ್ ಆದ ನಂತರ .ಟಿ ಮಾಡೇ ಇಲ್ಲ.. ಇವತ್ತು ಮಾಡ್ತಾನೆ.. ಅದ್ಭುತವಾಗಿ.. .ಟಿ. ರಾತ್ರಿಯೆಲ್ಲಾ..!
***
ಕಳೆದ ಹದಿನಾಲ್ಕು ದಿನದಿಂದ ಅವನ ಆನಂದಕ್ಕೆ ಪಾರವೇ ಇಲ್ಲ.. ಹೆಂಡತಿಯಲ್ಲಿ ದಿನವೂ ಬೇರೆ ಬೇರೆ ಮುಖಗಳು.. ಇನ್ನೇನು ಬೇಕು ಗಂಡಸಿಗೆ..? ಇವತ್ತು ಹೆಂಡತಿ ಬೇಗ ಬರುವಂತೆ ಹೇಳಿದ್ದಾಳೆ. ಏನು ಕಾದಿದೆಯೋ..? ಅವಳು ಕಳಿಸಿದ್ದ ಊಟ ಇತ್ತೀಚೆಗೆ ತುಂಬಾ ರುಚಿಸುತ್ತಿದೆ.. ಯಾಕೋ..?
***
ಗಂಡ ಹೆಂಡತಿ ಹೊರಗೆ ಬಂದಿದ್ದಾರೆ.. ಇವನನ್ನು ಒಂದು ಪ್ರಶ್ನೆ ತುಂಬಾ ಕಾಡ್ತಿದೆ.. ತನ್ನ ಹೆಂಡತಿಯ ಮುಖ ಬದಲಾಗುತ್ತಿರುವುದು ತನಗೆ ಮಾತ್ರ ಗೋಚರಿಸುತ್ತಿದೆಯೋ.. ಅಥವಾ ಅದು ಅವಳಿಗೂ ಗೊತ್ತಿದೆಯೋ..? ಬಹುಶಃ ಗೊತ್ತಿರಲಾರದು.. ಗೊತ್ತಾಗಿದ್ದಿದ್ರೆ ಇಷ್ಟು ಹೊತ್ತಿಗೆ ಪ್ರಸ್ತಾಪ ಮಾಡಿರ್ತಿದ್ಳು.. ಮಗಳಾದ್ರೂ ಗುರುತಿಸುತ್ತಿದ್ಳಲ್ಲಾ..?
***
ಕಾರ್ ನಿಲ್ಲಿಸಿ ಮುಚ್ಚಿರೋ ಅಂಗಡಿಯ ಮುಂದಿನ ಮೆಟ್ಟಿಲ ಮೇಲೆ ಇಬ್ಬರೂ ಕೂತಿದ್ದಾರೆ.. ಚುರುಮುರಿ ತಿನ್ನುತ್ತಾ..
ನಾನು ನಿನಗೆ ಒಂದು ಹೇಳಬೇಕು..’
ಒಂದಲ್ಲಾ.. ಹತ್ತು ಹೇಳಿ.. ಅಂಗಡಿಯೋರು ಬೆಳಿಗ್ಗೆವರ್ಗೂ ಬಾಗಿಲೇನೂ ತೆಗೆಯಲ್ಲಾ..’
ಒಂದಿನ ನಾನು ದೇವರನ್ನ ಕೇಳ್ಕೊಂಡೆ.. ನಂಗೊಂದು ವರ ಬೇಕೂಂತ.. ಅದನ್ನು ಅವನು ಕೊಟ್ಟ.. ಕ್ಯಾನ್ ಯು ಬಿಲೀವ್ ಇಟ್..? ಅದಕ್ಕೆ ನಾನು ಹದಿನೈದು ದಿನದಿಂದ ಆನಂದವಾಗಿರೋದು..’
ಅವಳು.. ’ಅದಾ.. ನಾನು ವಿಚಾರ ನಿಮ್ಮ ಹತ್ರ ಮಾತಾಡಬೇಕೂ ಅಂತಿದ್ದೆ.. ಇವತ್ತು ಟೈಂ ಬಂತು.. ನಾನು ಹದಿನೈದು ದಿನಗಳಿಂದ ತುಂಬಾ ಆನಂದವಾಗಿರೋದಕ್ಕೂ ಅದೇ ಕಾರಣ.. ನೀವು ದಿನಾ ಬೇರೆ ಬೇರೆ ಮುಖದಲ್ಲಿ ಮನೆಗೆ ಬರೋದು.. ಮೊದಲ ದಿನ ನಿಮ್ಮ ಸ್ನೇಹಿತ ಶೇಖರ್ ಥರಾ ಬಂದ್ರಲ್ಲಾ.. ನನ್ನ ಹಳೆಯ ಕನಸು ಅದು.. ಅವನು ಎಷ್ಟು ನೀಟ್ ಆಗಿದ್ದಾನೆ.. ಯಾವಾಗ್ಲೂ ಘಮ್ ಅಂತಿರ್ತಾನೆ.. ಅವನು ಕುಡಿಯಲ್ಲ.. ಮಲಗೋ ಮುಂಚೆ ಹಲ್ಲು ಉಜ್ಜಿ ಮಲಗ್ತಾನೆ.. ಅದಕ್ಕೇ ನಾನು ಅವತ್ತು ಹಾಗೆ ಸ್ಪಂದಿಸಿದ್ದು..ಮಾರನೆಯ ದಿನ ನಿಮ್ಮ ಸೇಲ್ಸ್ ಟೀಂನ ಸುಧಾಕರನಂತೆ ಬಂದಾಗಲಂತೂ ನನಗೆ ಅಣು ಅಣುವಿನಲ್ಲಿ ಹೂ ಕಂಪನ.. ಇನ್ನೂ ಮದುವೆಯಾಗದ ಹುಡುಗನಲ್ಲಿರಬಹುದಾದ ಎಲ್ಲಾ ಕುತೂಹಲಗಳನ್ನೂ ನೀವು ಅವತ್ತು ಪ್ರದರ್ಶಿಸಿದಿರಿ.. ಥೇಟ್ ಸುಧಾಕರನ ಥರಾ.. ನನಗೆ ಸ್ಪಂದಿಸದೇ ಇರಲು ಆಗುತ್ತ್ಯೇ..? ಒಂದಿನ ಅಂತೂ ನೀವು ನನ್ನನ್ನು ಮುಟ್ಟಲೇ ಇಲ್ಲ.. ಬರೀ ಮಾತಾಡಿದಿರಿ.. ಹಳೆಯ ಘಝಲ್ಗಳ ಸಾಲುಗಳನ್ನು ಹಾಡ್ತಾ.. ನಿಮ್ಮ ಸ್ನೇಹಿತ ಅಮರ್ ಥರಾ.. ದಟ್ ವಾಸ್ ಬೆಸ್ಟ್.. ದೂರದಲ್ಲಿದ್ದರೂ ಸುರತಿ ಸಾಧ್ಯ ಅಂತ ಅರ್ಥವಾಗಿದ್ದೇ ಅವತ್ತು.. ಅದು ಬಿಡಿ.. ಮೊನ್ನೆ ಒಂದಿನ ಮಧ್ಯಾಹ್ನ ನಾನು ನಿರೀಕ್ಷಿಸದ ಹೊತ್ತಿನಲ್ಲಿ ನನ್ನನ್ನು ಹಿಂದಿನಿಂದ ಬಂದು ಹಿಡ್ಕೊಂಡು ನನ್ನನ್ನು ಹಿಂಡಿ ಹಿಪ್ಪೆ ಮಾಡಿಬಿಟ್ರಲ್ಲಾ ರಾಕ್ಷಸನ ಥರಾ.. ದಟ್ ವಾಸ್ ಅಲ್ಟಿಮೇಟ್.. ನಿಮ್ಮ ಡ್ರೈವರ್ ಚಂದ್ರನ ಥರಾ.. ಏನು ಸ್ಪೀಡು.. ಏನು ಶಕ್ತಿ.. ವಾಹ್...’
***
ಜಾಣ ದೇವರ ಮುಂದೆ ಕೈ ಮುಗಿದುಕೊಂಡು ನಿಂತಿದ್ದಾನೆ.. ತುಂಬಾ ಗಂಭೀರವಾಗಿ.. ಭಗವಂತಾ.. ನನ್ನ ತಪ್ಪಿನ ಅರಿವಾಗಿದೆ.. ನಾನು ಕೊಟ್ಟಷ್ಟೇ ನನಗೂ ಸಿಗೋದು ಅನ್ನೋ ನೀತಿ.. ನನ್ನಲ್ಲಿನ ತಪ್ಪುಗಳನ್ನು ನಾನು ಗುರುತಿಸದೇ ಅವಳನ್ನು ದೂರುತ್ತಿದ್ದೆ.. ಅದಕ್ಕಾಗಿ ನನ್ನನ್ನು ಕ್ಷಮಿಸು.. ನನ್ನ ಮುಖದಲ್ಲಿ ಯಾರ್ಯಾರು ಬಂದು ಹೋಗಿದ್ದಾರೋ.. ಅತಿಥಿಗಳು.. ಭಗವಂತಾ.. ನನಗೆ ವರ ಬೇಡಾ.. ವಾಪಸ್ ತೊಗೊಂಡು ಬಿಡು.. ಪ್ಲೀಸ್..
***
ದೇವರು ಹಿಂದಿನ ಸಲ ವರ ಕೊಡುವಾಗ ಮಾತಾಡಿರಲಿಲ್ಲ.. ಆದರೆ ಸಲ ತುಂಬಾ ಸ್ಪಷ್ಟವಾಗಿ ಮಾತಾಡಿದ.. .. ’ಇಲ್ಲ.. ಮಗನೇ.. ನಾನು ಕೊಟ್ಟ ವರ ನಾನು ವಾಪಸ್ ತೊಗೊಳಲ್ಲ.. ಅನುಭವಿಸು..’
***
ಕಥೆಯನ್ನು ಹೇಳಿದವರಿಗೂ, ಕೇಳಿದವರಿಗೂ, ಓದಿದವರಿಗೂ, ಅರ್ಥೈಸಿಕೊಂಡವರಿಗೂ, ಅಳವಡಿಸಿಕೊಂಡವರಿಗೂ, ಕಥೆಯನ್ನು ಓದುವಂತೆ ಬೇರೆ ಸ್ನೇಹಿತರಿಗೆ ಹೇಳಿದವರಿಗೂ ಪ್ರೇಮಮಯಿ ಭಗವಂತ ಸನ್ಮಂಗಳವನ್ನುಂಟುಮಾಡಲಿ..
                                                             
                                                      

Tuesday, 19 April 2011

ಔಷಧೀಯ ಗುಣಗಳನ್ನು ಹೊಂದಿರುವ ತುಳಸಿ


ಭಾರತೀಯ ಸಂಸ್ಕೃತಿಯಲ್ಲಿ ತುಳಸಿಯ ಪಾತ್ರ ಮಹತ್ವದ್ದು. ತುಳಸಿಕಟ್ಟೆಯನ್ನು ಹೊಂದಿರದ ಹಿಂದೂಗಳ ಮನೆಯೇ ಇಲ್ಲ. ಅಂತಹ ತುಳಸಿ ಪವಿತ್ರವಾದದ್ದು ಮಾತ್ರವಲ್ಲ, ರೋಗ ನಿರೋಧಕ ಶಕ್ತಿ ಸೇರಿದಂತೆ ಆರೋಗ್ಯಕ್ಕೆ ಅನುಗುಣವಾದದ್ದು ಎಂದು ಹಲವು ಸಂಶೋಧನೆಗಳು ಹೇಳಿವೆ.
ಹಿಂದೂ ಧಾರ್ಮಿಕ ಸಂಪ್ರದಾಯದ ಪ್ರಮುಖ ಅಂಗವಾಗಿರುವ ತುಳಸಿ (Ocimum tenuiflorum) ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಹಿಂದೂಗಳು ಇದನ್ನು ಅತ್ಯಂತ ಪವಿತ್ರವಾಗಿ ಕಾಣುತ್ತಾ ಪೂಜೆ ಮಾಡುವುದು ಸಾಮಾನ್ಯ. ತುಳಸಿಯನ್ನು ಸ್ಪರ್ಶಿಸುವುದರಿಂದ ಪಾಪಗಳು ಪರಿಹಾರವಾಗುತ್ತವೆಯೆಂಬ ನಂಬಿಕೆ ಮಾತ್ರವಲ್ಲ, ಹಲವು ರೋಗಗಳು ಶಮನವಾಗುತ್ತದೆ ನಾಶವಾಗುತ್ತಯೆಂಬ ನಂಬಿಕೆಯೂ ಬೆಳೆದು ಬಂದಿದೆ.
ಮುಖ್ಯವಾಗಿ ತುಳಸಿಯಲ್ಲಿ ಎರಡು ವಿಧಗಳಿವೆ. ಕರಿ ಅಥವಾ ಶ್ಯಾಮ ವರ್ಣದ ಕೃಷ್ಣ ತುಳಸಿ ಮತ್ತು ತಿಳಿಬಣ್ಣದ ರಾಮ ತುಳಸಿ. ಸಾಮಾನ್ಯವಾಗಿ ಪೂಜೆಗೆ ಬಳಸುವ ಕೃಷ್ಣ ತುಳಸಿಯು ಹಲವು ವೈದ್ಯಕೀಯ ಗುಣಗಳನ್ನು ಹೊಂದಿವೆ.
ಈ ಗಿಡಮೂಲಕೆಯು ಶೀತ, ತಲೆನೋವು, ಅಜೀರ್ಣ, ಮಲೇರಿಯಾ ಮತ್ತು ಹೃದಯ ಸಂಬಂಧದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಅಲ್ಲದೆ ಶರೀರದಲ್ಲಿರುವ ಹಲವು ವಿಷಕ್ರಿಮಿಗಳನ್ನು ಇವು ನಾಶ ಮಾಡುತ್ತದೆ.
ದೇವಸ್ಥಾನ, ಯಾತ್ರಾಸ್ಥಳ ಮತ್ತು ಸಂಪ್ರದಾಯಸ್ಥ ಹಿಂದೂ ಕುಟುಂಬದಲ್ಲಿ ಇವುಗಳು ಹೆಚ್ಚಾಗಿ ಕಾಣ ಸಿಗುತ್ತದೆ. ಇವುಗಳಿಗೆ ಒತ್ತಡ ನಿವಾರಿಸುವ ಶಕ್ತಿಯು ಇದೆ. ತುಳಸಿಯ ಎಲೆಗಳನ್ನು ಹಸಿಯಾಗಿ ಅಥವಾ ಒಣಗಿಸಿ ಪುಡಿಯ ರೂಪದಲ್ಲಿ ಅಥವಾ ಪಾನೀಯ ರೂಪದಲ್ಲಿ ಕುಡಿಯಲಾಗುತ್ತಿದೆ.
ಹಂದಿಜ್ವರಕ್ಕೂ ರಾಮಬಾಣ...
ಆಯುರ್ವೇದ ಪ್ರಕಾರ ಹಂದಿಜ್ವರ ನಿವಾರಣೆಗೆ ತುಳಸಿ ರಾಮಬಾಣವಂತೆ. ಇದರಲ್ಲಿರುವ ಔಷಧೀಯ ಗುಣಗಳು ಎಚ್‌1ಎನ್1 ರೋಗಾಣುಗಳು ಶರೀರಕ್ಕೆ ಪ್ರವೇಶಿಸದಂತೆ ರಕ್ಷಿಸುತ್ತದೆಯಂತೆ.
ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ತುಳಸಿ ವೃದ್ಧಿಪಡಿಸುತ್ತದೆ. ಅಲ್ಲದೆ ಹಂದಿಜ್ವರ ರೋಗಾಣುಗಳನ್ನು ಹತ್ತಿಕ್ಕುವ ಗುಣ ತುಳಸಿಯಲ್ಲಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಡುತ್ತಾರೆ.
ತುಳಸಿ ಎಲೆಗಳು ಹಂದಿಜ್ವರ ಬರದಂತೆ ತಡೆಗಟ್ಟುತ್ತದೆ. ಹಾಗೆಯೇ ರೋಗ ಪೀಡಿತರಾದವರು ಶೀಘ್ರದಲ್ಲೇ ಗುಣಮುಖವಾಗಲು ನೆರವಾಗುತ್ತದೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.
ಆರೋಗ್ಯದ ದೃಷ್ಟಿಕೋನದಿಂದ ಪ್ರತಿದಿನ 7ರಿಂದ 8 ತುಲಸಿ ಎಲೆಗಳನ್ನು ತಿನ್ನುವುದು ಉತ್ತಮ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ದಿಯಾಗುವುದಲ್ಲದೆ ಬಾಯಿಯ ದುರ್ಗಂಧವು ಕೂಡಾ ನಿವಾರಣೆಯಾಗುತ್ತದೆ.
ದಿನನಿತ್ಯ ತುಳಸಿ ಸೇವನೆಯಿಂದ ಅಡ್ಡ ಪರಿಣಾಮಗಳೇನು ಇಲ್ಲ. ಜ್ವರ, ವಿಷಮ ಶೀತ, ಶ್ವಾಸಕೋಶದ ಸೋಂಕು, ಕೆಮ್ಮು ಮತ್ತು ನೆಗಡಿ ಹೋಗಾಡಿಸಲು ಇದರಿಂದ ಸಾಧ್ಯ. ತುಳಸಿ ಕಷಾಯ ಕುಡಿದರೆ ದೇಹ ಸದೃಢವಾಗುವುದರೊಂದಿಗೆ ಹೊಟ್ಟೆ ಸಂಬಂಧಿ ರೋಗಳನ್ನು ದೂರವಿರಿಸಬಹುದು.
ತುಳಸಿ ಎಲೆಯ ರಸವನ್ನು ಎಣ್ಣೆಯಲ್ಲಿ ಕಾಯಿಸಿ ತಲೆಗೆ ಹಚ್ಚುವುದರಿಂದ ತಲೆಯಲ್ಲಿನ ಹೇನು, ಹೊಟ್ಟು ಬರುವಿಕೆ ಕೂಡಾ ನಿವಾರಣೆಯಾಗುತ್ತದೆ. ಹಾಗೆಯೇ ಹಲವು ವಿಧದ ಚರ್ಮ ಸಂಬಂಧಿ ರೋಗಗಳಿಂದಲೂ ನಿವಾರಣೆ ಮಾಡುತ್ತದೆ. ಇದರಿಂದ ಚರ್ಮ ಮೃದುವಾಗುವುದಲ್ಲದೆ ಅಂದವಾಗುತ್ತದೆ. ಮನೆ ಪರಿಸರದಲ್ಲಿ ತುಳಸಿ ಗಿಡಗಳನ್ನು ಬೆಳೆಸುವ ಮೂಲಕ ಸೊಳ್ಳೆಗಳನ್ನು ದೂರವಿರಿಸಬಹುದು. ಒಟ್ಟಿನಲ್ಲಿ ಉತ್ತಮ ಆರೋಗ್ಯಕ್ಕಾಗಿ ತುಳಸಿ ಸೇವನೆ ಉತ್ತಮ.

                                                                  *ನಾಗರಾಜ್ ಬೇಳ

ಪ್ರತಿ ಮನೆಯ ಅತಿಥಿ ಆಗಿರುವ ಶೀತ, ನೆಗಡಿ

ಮಳೆಗಾಲ ಅಥವಾ ಚಳಿಗಾಲವೇ ಆಗಲಿ, ಕೆಮ್ಮು ಹಾಗೂ ಶೀತ ಸಾಮಾನ್ಯ. ಆದರೆ ಇದು ಕೇವಲ ತಂಪಾದ ಹವೆದಿಂದ ಮಾತ್ರ ಬರುವುದಿಲ್ಲ. ಅಲರ್ಜಿ, ಕೆಲವೊಂದು ಪರಿಸ್ಥಿತಿಗಳಲ್ಲಿ ಜನರೊಂದಿಗೆ ಹೆಚ್ಚು ಬೆರೆಯುವುದರಿಂದಲೂ ನೆಗಡಿ ಉಂಟಾಗುತ್ತದೆ. ಇದರ ಕಿರಿಕಿರಿ ಮಾತ್ರ ಹೇಳತೀರದು.
ಪ್ರತಿ ಮನೆಯ ಅಪರೂಪವಲ್ಲದ ಈ ಅತಿಥಿಯು ಇತರರಿಗೆ ಹರಡಲು ಹೆಚ್ಚು ಕಷ್ಟಪಡಬೇಕಿಲ್ಲ. ಮೂಗನ್ನು ಕೈಯಿಂದ ಸೀದ ನಂತರ ಆ ವ್ಯಕ್ತಿಯು ಅದೇ ಕೈಯಿಂದ ಇನ್ನೊಬ್ಬ ವ್ಯಕ್ತಿಯನ್ನು ಮುಟ್ಟಿದರೂ ವೈರಸ್ ಹರಡಿ ನೆಗಡಿ ಉಂಟಾಗಬಹುದು. ಸಾಮಾನ್ಯವಾಗಿ ಕೆಮ್ಮು ಮತ್ತು ಸೀನುವಿಕೆಯಿಂದಾಗಿ ಮಾತ್ರ ಕೆಮ್ಮು ಹರಡುತ್ತದೆ ಎಂಬುದು ತಪ್ಪು ಭಾವನೆ. ನಾವು ದಿನನಿತ್ಯ ಉಪಯೋಗಿಸುವಂತಹ ವಸ್ತುಗಳಲ್ಲಿರುವ ಹಲವು ವೈರಸ್‌ಗಳಿಂದಲೂ ಇದು ಪಸರಿಸುತ್ತದೆ.
ದಿನನಿತ್ಯ ಬಳಕೆಯಾಗುವ ವಸ್ತುಗಳಲ್ಲಿ ರೋಗಾಣಗಳು ಗಂಟೆಗಟ್ಟಲೆ ಜೀವಂತವಾಗಿರುತ್ತವೆ. ಹಾಗಾಗಿ ಇಂತಹ ವಸ್ತುಗಳಿಂದಲೂ ಸೋಂಕು ಹರಡುತ್ತವೆ. ದೈನಂದಿನ ಜೀವನದಲ್ಲಿ ಬಳಕೆಯಾಗುವ ಎಲ್ಲಾ ವಸ್ತುಗಳನ್ನು ಸ್ವಚ್ಛವಾಗಿಡಿಲು ಯತ್ನಿಸುವುದು ಈ ನಿಟ್ಟಿನಲ್ಲಿ ಅಗತ್ಯ.

'
ವಿಟಮಿನ್ ಡಿ' ಕೊರತೆ ಶೀತ ಮತ್ತು ನೆಗಡಿ ಬರುವ ಸಾಧ್ಯತೆಗಳು ಹೆಚ್ಚು. ಯಾಕೆಂದರೆ ರೋಗಾಣುಗಳ ವಿರುದ್ಧ ವಿಟಮಿನ್ ಡಿ ಹೋರಾಡುತ್ತಿರುತ್ತದೆ. ದೇಹದಲ್ಲಿ ಇದರ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ರೋಗ ನಿರೋಧಕ ಶಕ್ತಿಯೂ ಕುಂಠಿತವಾಗುತ್ತದೆ. ಇದರಿಂದಾಗಿ ಶೀತ ಮತ್ತು ನೆಗಡಿಯು ಸುಲಭವಾಗಿ ವ್ಯಕ್ತಿಯನ್ನು ಆವರಿಸುತ್ತವೆ.
ನಮ್ಮ ಶರೀರಕ್ಕೆ ವಿಟಮಿನ್ ಡಿ ಪ್ರಮಾಣ ಸೂರ್ಯ ಪ್ರಕಾಶದಿಂದ ಸಿಗುತ್ತದೆ. ಆದರೆ ಚಳಿ ಮತ್ತು ಮಳೆಗಾಲದಲ್ಲಿ ಸೂರ್ಯನ ಬೆಳಕು ಸಿಗದೇ ಇರುವ ಸಂದರ್ಭದಲ್ಲಿ ವಿಟಮಿನ್ ಡಿ ಪ್ರಭಾವವೂ ಕುಂಠಿತವಾಗುತ್ತದೆ. ಇದು ಶೀತ ಮತ್ತು ನೆಗಡಿ ಹೆಚ್ಚಲು ಕಾರಣವಾಗುತ್ತದೆ.
ಇದನ್ನು ತಡೆಗಟ್ಟಲು ಪ್ರತಿದಿನ ರಾತ್ರಿ ಮಲಗುವುದಕ್ಕಿಂತ ಮುಂಚೆ ಹಾಲು ಕುಡಿಯುವುದು ಉತ್ತಮ. ಯಾಕೆಂದರೆ ಹಾಲಿನಿಂದಲೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಹಾಗೆಯೇ ಬಿಸಿ ಹಾಲಿಗೆ ಕಾಳು ಮೆಣಸಿನ ಪುಡಿ ಮತ್ತು ಕಲ್ಲುಸಕ್ಕರೆ ಸೇರಿಸಿ ಕುಡಿಯುವುದರಿಂದಲೂ ನೆಗಡಿ ಕಡಿಮೆಯಾಗುತ್ತದೆ.
ಜೇನುತುಪ್ಪದಲ್ಲಿ ಕಾಳುಮೆಣಸಿನ ಚೂರ್ಣವನ್ನು ಕಲಸಿ ಸೇವಿಸುವ ಮೂಲಕವೂ ಇದರ ನಿವಾರಣೆ ಮಾಡಬಹುದು. ವಿಪರೀತ ಕೆಮ್ಮು ಉಂಟಾದ ಸಂದರ್ಭದಲ್ಲಿ ಅರಿಶಿನ ಪುಡಿಯನ್ನು ಕೆಂಡದ ಮೇಲೆ ಚೆಲ್ಲಿ, ಅದರಿಂದ ಹೊರಡುವ ಹೊಗೆಯನ್ನು ಮೂಗಿನ ಮೂಲಕ ಸೇವಿಸಿಯೂ ಇದರ ಪ್ರಭಾವ ಕಡಿಮೆ ಮಾಡಬಹುದು.
 *ನಾಗರಾಜ್ ಬೇಳ