Saturday 28 July 2012

ಗೀತಾ ಬ್ಯಾಂಗಲ್ ಸ್ಟೋರ್ ಸಿನಿಮಾ ಮಹೂರ್ತ ಸಮಾರಂಭ-1

ಪುಟ ವಿನ್ಯಾಸಕ ಲೇಖಕ ಶೇಷಾದ್ರಿ ಧನಗೂರ್ ಜತೆ ನವೀನ್ ಮರಳವಾಡಿ

ನಿರ್ದೇಶಕರ ಭಾವಚಿತ್ರ ಪ್ರದರ್ಶನ

ನಿರ್ದೇಶಕರ ಭಾವಚಿತ್ರ ಪ್ರದರ್ಶನ

ನಿರ್ದೇಶಕರ ಭಾವಚಿತ್ರ ಪ್ರದರ್ಶನ

ನಿರ್ದೇಶಕರ ಭಾವಚಿತ್ರ ಪ್ರದರ್ಶನ

ಟೌನ್ ಹಾಲ್‌ನಲ್ಲಿ ಸಿನಿಮಾ ಮಹೋರ್ತ

ಕಿರು ಚಿತ್ರ ನಿರ್ದೇಶಕ ಮತ್ತು ಪತ್ರಕರ್ತ ನಾಗರಾಜ್ ಅರೆಹೂಳೆ ಜತೆ ನವೀನ್ ಮರಳವಾಡಿ

ಕಿರು ಚಿತ್ರ ನಿರ್ದೇಶಕ ಮತ್ತು ಪತ್ರಕರ್ತ ನಾಗರಾಜ್ ಅರೆಹೂಳೆ ಜತೆ ನವೀನ್ ಮರಳವಾಡಿ

ವಿ.ಮನೋಹರ್ ನಿರ್ದೇಶಕರ ಭಾವಚಿತ್ರ ವಿಕ್ಷೀಸುತ್ತಿರುವುದು

ಮಿಮಿಕ್ರಿ ಕಲಾವಿದ ಮತ್ತು ಪುಟ ವಿನ್ಯಾಸಕ ಪ್ರಶಾಂತ್


ಗೀತಾ ಬ್ಯಾಂಗಲ್ ಸ್ಟೋರ್ ಸಿನಿಮಾ ಮಹೂರ್ತ ಸಮಾರಂಭ

ನಿರ್ದೇಶಕ ಭಗವಾನ್‌ರೂಂದಿಗೆ ಯುವ ನಿರ್ದೇಶಕ ಮಂಜು ಮಿತ್ರ

ನಿರ್ದೇಶಕರ ಭಾವಚಿತ್ರಗಳನ್ನು ವಿಕ್ಷಿಸುತ್ತಿರುವ ಕರವೇ ರಾಜ್ಯಾಧ್ಯಕ್ಷ ನಾರಯಣ ಗೌಡ


ಪುಟ ವಿನ್ಯಾಸಕ ಶೇಷಾದ್ರಿ ಧನಗೂರ್ ಜತೆ ನವೀನ್ ಮರಳವಾಡಿ

ಗೀತಾ ಬ್ಯಾಂಗಲ್ ಸ್ಟೋರ್ ಸಿನಿಮಾ ಮಹೂರ್ತ ಸಮಾರಂಭ

ಗೀತಾ ಬ್ಯಾಂಗಲ್ ಸ್ಟೋರ್ ಸಿನಿಮಾ ಮಹೂರ್ತ ಸಮಾರಂಭ



ನಿರ್ದೇಶಕರ ಭಾವಚಿತ್ರ ಪ್ರದರ್ಶನ

ನಿರ್ದೇಶಕರ ಭಾವಚಿತ್ರ ಪ್ರದರ್ಶನ


ನಿರ್ದೇಶಕ ಭಗವಾನ್‌ರೂಂದಿಗೆ ಯುವ ನಿರ್ದೇಶಕ ಮಂಜು ಮಿತ್ರ


ನಿರ್ದೇಶಕ ಭಗವಾನ್‌ರೂಂದಿಗೆ ಯುವ ನಿರ್ದೇಶಕ ಮಂಜು ಮಿತ್ರ



ಸಂಗೀತ ನಿರ್ದೇಶಕ ವಿ.ಮನೋಹರ್ ಮತ್ತು ನಟಿ ನಿರೂಪಕಿ ಅಪರ್ಣ


ನಿರ್ದೇಶಕರ ಭಾವಚಿತ್ರ ಪ್ರದರ್ಶನ


ನಿರ್ದೇಶಕ ಭಗವಾನ್‌ರೂಂದಿಗೆ ಯುವ ನಿರ್ದೇಶಕ ಮಂಜು ಮಿತ್ರ


Tuesday 24 July 2012

ಕ್ಯಾಮರಾ ಕಣ್ಣಿಗೆ ಸಿಕ್ಕುಬಿದ್ದ ಪ್ರೇತ

ನಿಜವಾಗ್ಲೂ ದೆವ್ವ, ಭೂತ, ಪ್ರೇತ, ಪಿಶಾಚಿ ಎಂಬುದೆಲ್ಲ ಇದೆಯಾ. ಇದೇ ಅನ್ಸುತ್ತೆ. ವೈಜ್ಙಾನಿಕವಾಗಿ ಯುಗ, ಆದರೆ ಅದು ಆತ್ಮದ ಪ್ರತಿರೂಪ. ಅದಕ್ಕೆ ಯಾವುದೇ ಶಕ್ತಿಗಳಿಲ್ಲ. ಆದರೆ ಅಸ್ವಷ್ಟ ಆಕಾರಗಳಿವೆ ಅಂತ ಕೆಲ ಸಂಶೋಧಕರು ಹೇಳುತ್ತಾರೆ. ದೇವತೆಗಳನ್ನು ನಂಬದವರೆಲ್ಲಾ ಈ ದೆವ್ವಗಳನ್ನು ನಂಬುತ್ತಾರೆ ಎಂಬುದು ಸತ್ಯ. ಇದಕ್ಕೆ ವಿದೇಶಿಯರು ಹೊರತೇನಲ್ಲ. ಅತಿ ಹೆಚ್ಚಾಗಿ ದೆವ್ವಗಳನ್ನು ನಂಬುವವರೆ ಅವರು. ದೆವ್ವದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದವರು ಪ್ರೇತಗಳ ಮೂಲ ಹುಡುಕ ಹೊರಟವರು ಅದರಿಂದ ಸಾಕಷ್ಟು ಕಹಿ ಅನುಭವಗಳನ್ನು ಕಂಡಿದ್ದಾರೆ. ಹೀಗೆ ಪ್ರೇತದ ಮೂಲ ಹುಡುಕಿ ಈ ಹಿಂದೆ ಇಂಗ್ಲಿಷ್‌ನಲ್ಲಿ ಈವಿಲ್‌ಡೆಡ್ ಎಂಬ ಸಿನಿಮಾ ನಾಲ್ಕು ಭಾಗಗಳು ಭಯಾನಕವಾಗಿ ಮೂಡಿ ಬಂದಿತ್ತು. ಆ ಸಿನಿಮಾವನ್ನು ಇಂದಿಗೂ ಯಾವ ಸಿನಿಮಾವು ಮೀರಿಸಲಾಗಲೇ ಇಲ್ಲ. ಆ ಪರಿ ಭಯಂಕರ ಸಿನಿಮಾ ಅದಾಗಿತ್ತು. ಆ ಸಿನಿಮಾದ ನಿರ್ದೇಶಕ ಸೇರಿದಂತೆ ಕಲಾವಿದ, ತಂತ್ರಜ್ಞರು ಕೂಡ ಅಷ್ಟೇ ನಿಗೂಢವಾಗಿ ಸಾವನಪ್ಪಿದ್ದು ಇಂದಿಗೂ ಸಂಶಯಕ್ಕೆ ಎಡೆ ಮಾಡಿತ್ತು. ಆ ಸಂಶಯ ಇವತ್ತಿಗೂ ಬಗೆಹರಿದಿಲ್ಲ. ಅಷ್ಟು ಹಿಂದಿನ ಉದಾಹರಣೆ ಬೇಡ ಇತ್ತೀಚೆಗೆ ಪಾಪ್ ಗಾಯಕ ಜಗತ್ಪ್ರಸಿದ್ದ ನೃತ್ಯಪಟು ಸಂಗೀತ ನಿರ್ದೇಶಕ ಮೈಕಲ್ ಜಾಕ್ಸನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದನಲ್ಲ ಆತನೇ ದೆವ್ವವಾಗಿ ತನ್ನ ನೆದರ್‌ಲ್ಯಾಂಡ್ ರ‍್ಯಾಂಚ್ ಅರಮನೆಯಲ್ಲಿ ದೆವ್ವವಾಗಿ ಓಡಾಡುತ್ತಿದ್ದಾನೆ ಅಂತ ಬಿಸಿ-ಬಿಸಿ ಸುದ್ದಿಯೊಂದು ಹಬ್ಬಿತ್ತು. ಅದನ್ನು ಸುಳ್ಳು ಎನ್ನಲು ಸಾಧ್ಯವಿಲ್ಲ. ಏಕೆಂದರೆ, ಕ್ಯಾಮರಾ ಕಣ್ಣಿಗೆ ಜಾಕ್ಸನ್‌ನ ಪ್ರೇತ ಸೆರೆ ಸಿಕ್ಕಿತಲ್ಲ. ಅದನ್ನು ನೋಡಿದವರ‍್ಯಾರು ಜಾಕ್ಸನ್‌ನ ಆಕಾರವಲ್ಲ ಅಂತ ಹೇಳಲು ಸಾಧ್ಯವಿರಲಿಲ್ಲ. ಅದು ಸೇಮ್ ಟು ಸೇಮ್ ಜಾಕ್ಸನ್‌ನಂತೆಯೇ ಇತ್ತು. ಸುಳ್ಳು ಅನ್ನೋದಾದರೂ ಹೇಗೆ. ಹೀಗೆ ಸಾಕಷ್ಟು ಉದಾಹರಣೆಗಳು ಸಿಗುತ್ತೆ. ಆದರೆ ಕೆಲವು ಕಿಡಿಗೇಡಿಗಳು ಕಂಪ್ಯೂಟರ್ ಗ್ರಾಫಿಕ್ಸ್ ಮಾಡಿ ದೆವ್ವಗಳಂತೆ ಫೋಟೊಗಳನ್ನು ಸೃಷ್ಟಿಸಿ, ಇಂಟರ್‌ನೆಟ್‌ಗೆ ಬಿಟ್ಟಿದ್ದಾರೆ. ಅದೇ ಇಂಟರ್‌ನೆಟ್‌ಗಳಲ್ಲಿ ನಿಜವಾದ ದೆವ್ವಗಳ ಭಾವಚಿತ್ರಗಳು ಲಭ್ಯವಿದೆ. ನಿಮಗೆ ಅದರ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ತಿತಿತಿ.ಥಿouಣube.ಛಿom ವೆಬ್‌ಸೈಟು ಹೊಕ್ಕು ನೋಡಿದರೆ ಪ್ರೇತ ನಡೆದು ಬರುವುದು, ನಡೆದಾಡುವುದು ಎಲ್ಲಾ ವಿಡಿಯೊ ಮೂಲಕವೇ ನೋಡಬಹುದು. ಐದು ವರ್ಷಗಳ ಹಿಂದೆ ಯಾರೋ ಬೆಂಗಳೂರಿನ ಮಂದಿ ಒಬ್ಬ ಅಮೆರಿಕನ್ ಹುಡುಗನ ಹಿಂದೆ ದೆವ್ವ ನಿಂತಿರುವಂತೆ ಭಾವ ಚಿತ್ರ ಸೃಷ್ಠಿ ಮಾಡಿ ಆಲದಮರದ ಹತ್ತಿರ ಈ ಹುಡುಗನ ಫೋಟೊ ತೆಗೆದರೆ ಅವನ ಹಿಂದೆ ದೆವ್ವ ನಿಂತಿರುವಂತೆ ಫೋಟೊ ಬಂತು ಅಂತೆಲ್ಲಾ ಸುದ್ದಿ ಹಬ್ಬಿಸಿ ಜನರನ್ನು ಭಯ ಬೀಳಿಸುವಂತೆ ಮಾಡಿದ್ದರು. ಅಷ್ಟೇ ಅಲ್ಲ, ಆ ಫೋಟೊಗಳು ಸೈಬರ್ ಪಾಯಿಂಟ್‌ಗಳಲ್ಲಿ ೫ರಿಂದ ೧೦ ರೂಪಾಯಿ ಮಾರಾಟ ಕೂಡ ಮಾಡಲಾಗುತ್ತಿತ್ತು. ಆದರೆ ಅದೆಲ್ಲಾ ಪಕ್ಕಾ ಸುಳ್ಳು ಎಂದು ಜನರಿಗೂ ಬೇಗ ಅರ್ಥವಾಗಿತ್ತು. ಈಗ ವರ್ಷದ ಹಿಂದೆ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನದ ಮೆಟ್ಟಿಲು ಹತ್ತುತ್ತಿದ್ದ ಒಂದು ಬಿಳಿಯ ಆಕೃತಿ ಸಿ.ಸಿ. ಕ್ಯಾಮರಾಗೆ ಬಿದ್ದಿತಲ್ಲ ಅವತ್ತು ವಿಮಾನ ನಿಲ್ದಾಣದಿ ಕೆಲಸ ಮಾಡುವವರೆಲ್ಲ ಬೆಚ್ಚಿ ಬಿದ್ದಿದ್ದರು. ಅದಕ್ಕೆ ತಕ್ಕಂತೆ ಕೆಲವು ಪುಷ್ಠಿ ತರುವ ಜನರ ಅಭಿಪ್ರಾಯವು ಇದನ್ನು ನಿಜ ಎನಿಸಿದ್ದು ಸುಳ್ಳಲ್ಲ.
ವಿಮಾನವೇರಿದ ಹೆಣ್ಣುದೆವ್ವ
ಆ ವಿಮಾನದಲ್ಲಿ ಆಕೃತಿ ಸ್ಪಷ್ಟವಾಗಿ ಹೆಣ್ಣು ಎಂದು ಗೋಚರಿಸುತ್ತಿತ್ತು. ಎಲ್ಲರಿಗೂ ಆಶ್ಚರ್ಯ, ಕೆಲವರು ಅವಳೇ ಇವಳು ಎಂದುಕೊಂಡರು. ಈ ಹಿಂದೆ ದೇವನಹಳ್ಳಿ ವಿಮಾನ ನಿಲ್ದಾಣದ ಹತ್ತಿರ ಒಂದು ಬೇಲಿಯಲ್ಲಿ ಸತ್ತ ಹೆಣ್ಣಿನ ಶವ ಸಿಕ್ಕಿತು. ಯಾರೊ ಹಂತಕರು ಆಕೆಯನ್ನು ರೇಪ್ ಮಾಡಿ ನಂತರ ಕೊಲೆ ಮಾಡಿ ಅಲ್ಲಿ ತಂದು ಹಾಕಿದ್ದರು. ಆಕೆಯೆ ದೆವ್ವವಾಗಿ ಏರ್‌ಪೋರ್ಟ್‌ನಲ್ಲಿ ಅಲೆಯುತ್ತಿದ್ದಾಳೆ ಎಂದು ಮಾತನಾಡಿಕೊಂಡಿದ್ದರು. ಅದು ನಿಜವಿರಲೂಬಹುದು. ಏಕೆಂದರೆ ಸಿ.ಸಿ. ಕ್ಯಾಮರಕ್ಕೆ ಆ ಪ್ರೇತ ಸೆರೆ ಸಿಕ್ಕಿತಲ್ಲ. ಈ ನಡುವೆ ಬೆಂಗಳೂರಿನ ಸುಂಕದ ಕಟ್ಟೆಯ ಕೆಲ ಹುಡುಗರು ಪ್ರೇತದ ಬೆನ್ನತ್ತಿಬಿಟ್ಟಿದ್ದರು. ಅದಕ್ಕಾಗಿಯೇ ಒಂದು ವೆಬ್‌ಸೈಟ್ ಓಪನ್ ಮಾಡಿದ್ದರು. ಸ್ಮಶಾನಗಳಲ್ಲಿ ದೆವ್ವಗಳ ಬೇಟೆಗೆ ಕಾದು ಕೂತರು. ಅಲ್ಲಲ್ಲಿ ತೊಂದರೆಗೂ ಈಡಾದರು. ಕನಕಪುರ ರಸ್ತೆಯಲ್ಲಿರುವ ರೊರಿಚ್ ಎಸ್ಟೇಟ್ ಅರ್ಥಾತ್ ದೇವಿಕಾರಾಣಿ ಎಸ್ಟೇಟ್‌ನ ಆಸುಪಾಸಿನಲ್ಲಿ ದೆವ್ವಗಳಿವೆ. ಅಲ್ಲಿಗೆ ನೀವು ಬಂದರೆ ನೋಡಬಹುದು ಅಂತ ಅಂದರು. ಆ ಹುಡುಗರ ಗುಂಪು ಬಂತು. ಮಧ್ಯರಾತ್ರಿಯಾದರೂ ಯಾವ ಪ್ರೇತಗಳು ಕಂಡುಬಂದಿರಲಿಲ್ಲ. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಒಬ್ಬೊಬ್ಬರೂ ಒಂದೊಂದು ರೀತಿಯ ಕಷ್ಟ ಅನುಭವಿಸಿದ್ದರು. ನಂತರ ಅಪಘಾತವಾಯಿತಾದರೂ ಪ್ರಾಣಾಪಾಯದಿಂದ ಪಾರಾಗಿದ್ದರು. ಆ ಹುಡುಗರ ಗುಂಪು ಸದ್ಯಕ್ಕೆ ಸದ್ದು ಮಾಡುತ್ತಿಲ್ಲ.
ಬೆಂಗಳೂರು ಆಟೋದಲ್ಲಿ ದೆವ್ವ (೧೦ ವರ್ಷಗಳ ಹಿಂದೆ)
ದೆವ್ವದ ಬಗ್ಗೆ ಒಂದು ಸವಿಸ್ತಾರ ವರದಿ ಮಾಡಬೇಕು ಅಂತ ಹೊರಟಾಗ ನಿಜಕ್ಕೂ ನಂಬಲಾಗದ ಒಂದು ಭಯಾನಕ ಘಟನೆ ಹೇಳಿಕೊಂಡವನು ಒಬ್ಬ ಆಟೋ ಡ್ರೈವರ್. ಆತ ತುಂಬಾ ದುಡಿಯಬೇಕು, ಆಟೋ ಮೇಲಿದ್ದ ಪೈನಾನ್ಸ್‌ನೆಲ್ಲ ತೀರಿಸಿಬಿಡಬೇಕು ಎಂದು ಹಗಲು ರಾತ್ರಿ ಎನ್ನದೆ ದುಡಿಯುತಲಿದ್ದ. ಹೀಗಿರಬೇಕಾದರೆ ಅವತ್ತೊಂದು ದಿನ ರಾತ್ರಿ ೧೧ ಗಂಟೆ ಸಮಯ. ಒಬ್ಬ ಹೆಂಗಸು ಪುಟ್ಟ ಮಗುವಿನೊಂದಿಗೆ ಈ ಆಟೋ ಡ್ರೈವರ್ ಬಳಿ ಬಂದಿದ್ದಾಳೆ. ಬನಶಂಕರಿಯಿಂದ ಡಬಲ್‌ರೋಡ್‌ಗೆ ಹೋಗಬೇಕು ಎಂದಾಗ ಈತ ಡಬಲ್ ಮೀಟರ್ ಎಂದಿದ್ದಾನೆ. ತ್ರಿಬಲ್ ಕೊಡ್ತೀನಿ ನಡಿ ಅಂದಿದ್ದಾಳೆ. ಈತನು ಸುಮಾರು ೪ ಮೈಲುಗಳು ಮುಂದೆ ಹೋಗಿದ್ದಾನೆ. ನಿಶ್ಯಬ್ದವಾಗಿ ಹೋಗುತ್ತಿದ್ದ ಆಟೋದಲ್ಲಿ ಸಣ್ಣಗೆ ಶಬ್ದ ಇವನ ಕಿವಿಗೆ ಬಿದ್ದಿದೆ. ಅದು ಏನೋ ತಿನ್ನುತ್ತಿರುವ ಶಬ್ದ. ಹಾಗೆ ಹಿಂದೆ ತಿರುಗಿ ನೋಡಿದ್ದಾನೆ ಭಯದಿಂದ ಕಿರುಚಿಕೊಂಡು ಆಟೋವನ್ನು ಎದುರಿಗಿದ್ದ ಗೋಡೆಗೆ ಗುದ್ದಿಬಿಟ್ಟಿದ್ದಾನೆ. ಏಕೆಂದರೆ ಹಾಲುಣಿಸುತ್ತಿದ್ದ ಆ ಹೆಂಗಸು ಅನಾಮತ್ತು ಮಗುವನ್ನು ಕಚ್ಚಿ-ಕಚ್ಚಿ ತಿನ್ನತೊಡಗಿದ್ದಳು. ಗುದ್ದಿದ ಆಟೋ ಎತ್ತಿ ನಿಲ್ಲಿಸಿದವನು ಆ ಹೆಂಗಸನ್ನು ಮತ್ತು ಮಗುವನ್ನು ಹುಡುಕಾಡಿದ್ದಾನೆ, ಕೂಗಿ ಕರೆದಿದ್ದಾನೆ, ಎಲ್ಲಿಯೂ ಆ ಮಗು ಮತ್ತು ಹೆಂಗಸು ಕಾಣಿಸಿಕೊಂಡಿಲ್ಲ. ಇವನಿಗೆ ಖಚಿತವಾಗಿ ಹೋಗಿತ್ತು. ತಾನು ಆಟೋದಲ್ಲಿ ಕರೆತಂದದ್ದು ಹೆಣ್ಣು ಪ್ರೇತವನ್ನು ಎಂದು. ಹೀಗೆ ಹೆದರಿ ಆಟೋ ಆಕ್ಸಿಡೆಂಟ್ ಮಾಡಿಕೊಂಡವನು ಮತ್ತೆ ಮೊದಲಿನ ಸ್ಥಿತಿಗೆ ಬರುವಷ್ಟರಲ್ಲಿ ತಿಂಗಳುಗಳೇ ಕಳೆದು ಹೋದವು. ಏನಯ್ಯ ಭ್ರಮೆನೋ, ಕನಸೋ ಇರಬೇಕು ನೋಡು ಅಂದರೆ ಕನಸ್ಸಾದರೆ ಈ ಪರಿ ಆಕ್ಸಿಡೆಂಟ್ ಆಗುತ್ತಿತ್ತ ಅಂತ ತನ್ನ ತಲೆಗೆ, ಮೈಕೈಗೆ ಬಿದ್ದ ಪೆಟ್ಟು ಮತ್ತು ಗಾಯಗಳನ್ನು ತೋರಿಸುತ್ತಾನೆ ಮತ್ತು ಇದು ನಿಜ ಅಂತ ವಾದಿಸುತ್ತಾನೆ. ಅವತ್ತಿನಿಂದ ಇವತ್ತಿನವರೆಗೂ ಅವನು ರಾತ್ರಿ ೯ಕ್ಕೆಲ್ಲಾ ಆಟೋ ಓಡಿಸುವುದು ನಿಲ್ಲಿಸುತ್ತಾನೆ. ೯ ಗಂಟೆಯ ಮೇಲೆ ಆಟೋ ಓಡಿಸಲು ಹೋಗುವುದಿಲ್ಲ. ದೆವ್ವ-ಭೂತ ನಂಬದ ಆತ ಈಗ ಪ್ರೇತ ಇರೋದು ನಿಜ ಅಂತಾನೆ. ಅದೆಷ್ಟು ಸತ್ಯವೋ ಭಗವಂತನೇ ಬಲ್ಲ.ಇದೇ ತರಹದ ಮತ್ತೊಂದು ಘಟನೆ ಇದೇ ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದಿತ್ತು. ಆತನು ಆಟೋ ಡ್ರೈವರೇ. ನಿರ್ಭಿಡ ರಸ್ತೆಯಲ್ಲಿ ರಾತ್ರಿ ೧೨ ಗಂಟೆಯಲ್ಲಿ ಒಬ್ಬನೆ ಆಟೋದಲ್ಲಿ ಬರುತ್ತಿದ್ದಾಗ ಯಾರೊ ಈ ನಡುರಸ್ತೆಯಲ್ಲಿ ನಿಂತು ಕೈ ಅಡ್ಡ ಹಾಕಿದ್ದಾರೆ. ಇವನು ಹೆದರಿ ವಿದ್ಯುತ್ ಕಂಬವೊಂದಕ್ಕೆ ಆಟೋವನ್ನು ಗುದ್ದಿ ಬುರುಡೆ ಒಡೆದುಕೊಂಡಿದ್ದಾನೆ. ಆದರೆ ಸುತ್ತಲು ನೋಡಿದರೆ ರಸ್ತೆಯಲ್ಲಿ ನಿಂತ ಮನುಷ್ಯ ರೂಪದ ವ್ಯಕ್ತಿ ಎಲ್ಲೂ ಕಾಣಿಸಿಕೊಂಡಿಲ್ಲ. ಈತ ಇಂದಿಗೂ ವಾದಿಸುತ್ತಾನೆ ೧೦೦ಪರ್ಸೆಂಟು ಅದು ದೆವ್ವ ಅಂತ. ಪ್ರೇತವನ್ನು ನೋಡದ ನಮಗೆ ನಂಬಿಕೆ ಇಲ್ಲವಾದರೂ ನೋಡಿದವರು ಮಾತ್ರ ನಂಬುತ್ತಾರೆ. ಇಂತಹ ಸಾಕಷ್ಟು ಘಟನೆಗಳು ನಮ್ಮ ಸುತ್ತಲು ಕಂಡುಬರುತ್ತವೆ.
ಹಾರೋಹಳ್ಳಿ ಬಳಿ ಕ್ಯಾಮರಾ ಕಣ್ಣಿಗೆ ಬಿದ್ದ ಪ್ರೇತ
ಈಗ್ಗೆ ತಿಂಗಳಿನ ಹಿಂದೆ ಹಾರೋಹಳ್ಳಿಯ ಮೇಗಳ ಬೀದಿಯ ಹುಡುಗ ನವೀನ್ ಎಂಬುವವರ ಮೊಬೈಲಿಗೆ ಸಿಕ್ಕು ಬಿದ್ದ ಆಕೃತಿ ಮನುಷ್ಯಾಕೃತಿ. ಅದೊಂದು ಬೆಳಕಿನ ರೂಪ. ಕೆಲಸದಿಂದ ಕಂಪ್ಯೂಟರ್ ಮತ್ತು ಮೊಬೈಲ್ ರಿಪೇರಿ ಮಾಡುವ ನವೀನ್ ಹಾಗೂ ಜಯಸಿಂಹ ಎಂಬ ಹುಡುಗರ ಮನೆಯಲ್ಲಿ ಅಂದು ಯಾರೂ ಇರಲಿಲ್ಲ. ಮನೆಯ ಕಾಂಪೊಂಡಿನ ಬಳಿ ದಬದಬ ಶಬ್ದವಾಗುತ್ತಿತ್ತು. ನಾಯಿಗಳು ಊಳಿಡುತ್ತಿದ್ದವಂತೆ. ಅದು ರಾತ್ರಿ ೧೨ ಗಂಟೆ ಸಮಯ ಹೊರ ಬಂದು ಬಾಗಿಲು ತೆಗೆದು ನೋಡಿದರೆ ಅಲ್ಲಿ ಯಾರು ಇರಲಿಲ್ಲ. ನವೀನ್ ಮತ್ತೆ ಬಂದು ಬಾಗಿಲು ಹಾಕೊಂಡು ಮಲಗುತ್ತಾನೆ. ಆದರೆ ದಬದಬ ಅಂತ ಓಡಾಡಲು ಶಬ್ದ ಮಾತ್ರ ನಿಂತಿರಲಿಲ್ಲ. ಅಷ್ಟರಲ್ಲಿ ತನ್ನ ಮನೆಯಿದ್ದ ರಸ್ತೆಯಲ್ಲಿ ದೆವ್ವಗಳು ರಾತ್ರಿ ವೇಳೆ ಓಡಾಡುತ್ತವೆ. ಅದನ್ನು ನಾವು ನೋಡಿದ್ದೇವೆ ಅಂತೆಲ್ಲಾ ಹಿರಿಯರು ಹೇಳಿದ್ದನ್ನು ನೆನೆಸಿಕೊಂಡ ಈ ಹುಡುಗನಿಗೆ ಮತ್ತಷ್ಟು ಭಯ ಹೆಚ್ಚಾಗಿದೆ. ಕ್ಯಾಮರ ಕಣ್ಣಿಗೆ ದೆವ್ವ ಬೀಳುತ್ತವಂತೆ ಎಂಬುದನ್ನು ಎಲ್ಲೊ ಓದಿದ್ದನ್ನು ಯಾರೋ ಹೇಳಿದ್ದನ್ನು ಜ್ಞಾಪಿಸಿಕೊಂಡವನಂತೆ ತನ್ನ ಮೊಬೈಲ್ ಎತ್ತಿಕೊಂಡು ಮನೆಯ ಮನೆಯ ಸುತ್ತ ಸುಮಾರು ೨೦ ಫೋಟೊಗಳನ್ನು ಕ್ಲಿಕ್ಕಿಸಿದ್ದಾನೆ. ನಂತರ ಮನೆಯ ಒಳಗೆ ಬಂದು ಬಾಗಿಲು ಹಾಕಿಕೊಂಡು ಒಂದೊಂದೆ ಫೋಟೊಗಳನ್ನು ನೋಡಿದ್ದಾನೆ ತಕ್ಷಣಕ್ಕೆ ಏನೂ ಕಂಡಿಲ್ಲ. ಸುಮ್ಮನೆ ಮಲಗಿದ್ದಾನೆ. ಬೆಳಿಗ್ಗೆ ಎದ್ದವನು ಮತ್ತೆ ಸೂಕ್ಷ್ಮವಾಗಿ ನೋಡಿದಾಗ ಏನೋ ಹೊಗೆಯಂತಹ ಆಕಾರ ೨೦ ಫೋಟೊಗಳ ಪೈಕಿ ಒಂದರಲ್ಲಿ ಕಾಣಿಸಿದೆ. ಆದರೆ ಮೊಬೈಲ್ ಸ್ಕ್ರೀನ್ ಚಿಕ್ಕದಾದ್ದರಿಂದ ಕಂಪ್ಯೂಟರಿನಲ್ಲಿ ಹಾಕಿ ದೊಡ್ಡ ಪರದೆಯ ಮೇಲೆ ಅದನ್ನು ನೋಡಿದಾಗ ನಿಜಕ್ಕೂ ಅಚ್ಚರಿ ಮೂಡಿಸಿದೆ. ಅದು ಹೊಗೆಯ ಆಕಾರವೆ. ಸೂಕ್ಷ್ಮವಾಗಿ ಗಮನಿಸಿದರೆ ಅದು ಮನುಷ್ಯನ ತರಹವೇ ಇದೆ. ನಂತರ ಅದು ಒಬ್ಬರಿಂದ ಒಬ್ಬರಿಗೆ ಗೊತ್ತಾಗಿ ದೊಡ್ಡ ಸುದ್ದಿಯಾಗಿದೆ. ಅದು ಯಾವುದೇ ರೀತಿಯ ಕಂಪ್ಯೂಟಾರೈಸಡ್ ಫೋಟೊ ಅಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕೆಲವೆಡೆ ಮನುಷ್ಯನ ಕಣ್ಣಿಗೆ ದೆವ್ವಗಳು ಕಂಡರೆ ಮತ್ತೆ ಕೆಲವರ ಕ್ಯಾಮರ ಕಣ್ಣಿಗೆ ಈ ರೀತಿಯ ಆಕೃತಿಗಳೂ ಮನುಷ್ಯ ರೂಪಗಳು ಕಾಣಿಸಿಕೊಂಡಿವೆ. ಕೆಲವರಿಗೆ ಇದರಿಂದ ಅನಾನುಕೂಲವು ಆಗಿದೆ. ಇಂತಹ ಹತ್ತಾರು ಘಟನೆಗಳು ನಮ್ಮ ಆಸುಪಾಸಿನಲ್ಲೆ ನಡೆದು ಹೋಗಿವೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರೇತವಿದೆಯಾ?
ಇದೊಂದು ಅನುಮಾನ ಇಂದು ನೆನ್ನೆಯದಲ್ಲ. ಹಿಂದಿನಿಂದಲೂ ಹೀಗೊಂದು ಗುಸು-ಗುಸು, ಪಿಸು-ಪಿಸು ಇದ್ದೇ ಇದೆ. ರಾತ್ರಿ ವೇಳೆ ಕಿಟಕಿಯ ಗಾಜಿನ ಬಳಿ ಯಾರೋ ಓಡಾಡುತ್ತಾರೆ, ಕಲ್ಲು ಒಡೆದ ಸದ್ದಾಗುತ್ತದೆ, ಯಾರೋ ಅರಚಿದಂತಾಗುತ್ತೆ, ಮಾತನಾಡುವ, ಗಹಗಹಿಸಿ ನಗುವ ರೀತಿಯೆಲ್ಲಾ ಇಲ್ಲಿ ಆಗುತ್ತೆ ಎಂದು ಕೆಲ ಮಂದಿ ಹೇಳುತ್ತಾರೆ. ಅವರಲ್ಲಿ ಕೆಲವರು ಆಸ್ಪತ್ರೆಯ ನೌಕರರು ಕೆಲ ವರ್ಷಗಳ ಹಿಂದೆ ಇಲ್ಲಿ ರಾತ್ರಿಯ ಹೊತ್ತು ಶವಗಾರ ಕಾಯುವ ಮಹಾದೇವ ಎಂಬ ಕೆಲಸಗಾರನನ್ನು ಪ್ರೇತ ಹೆಸರಿಡಿದು ಕೂಗುತ್ತದೆ ಎಂಬೆಲ್ಲಾ ಸುದ್ದಿಗಳು ಹರಡಿಕೊಂಡಿದ್ದವು. ಆದರೆ ಆ ಮಹಾದೇವನನ್ನೆ ಕೇಳಿದರೆ, ಸ್ವಾಮಿ ದಿನಕ್ಕೆ ಹಲವಾರು ಹೆಣ ನೋಡ್ತೀನಿ. ಇಲ್ಲೆ ಶವಾಗಾರದ ಪಕ್ಕದ ಕೊಠಡಿಲೆ ಮಲಗ್ತೀನಿ. ಯಾವ ದೆವ್ವ ಭೂತನು ಇಲ್ಲಾ ಸ್ವಾಮಿ. ಅದರ ಮೇಲೆ ನನಗ್ಯಾಕೆ ಭಯ. ಇಷ್ಟೊಂದು ಹೆಣ ಕಾಯುವ ನನ್ನೆ ನೋಡಿ ಅದು ಹೆದರಿರಬೇಕು. ಅದಕ್ಕೆ ನನ್ನ ಕಣ್ಣಿಗೆ ಬೀಳಲ್ಲ ಅಂತ ತಮಾಷೆಯಾಗಿ ಮಾತನಾಡುತ್ತಾನೆ. ರಾತ್ರಿಯಲ್ಲಿ ಮಹಾದೇವ ಅಂತ ಕೂಗುವ ಶಬ್ದವಾಗುತ್ತಲ್ಲ ಹೌದ ಎಂದರೆ ಹೌದು ಪೊಲೀಸಿನವರು ಒಮ್ಮೊಮ್ಮೆ ಕೂಗುವುದುಂಟು. ಅದು ಆಕ್ಸಿಡೆಂಟ್ ಕೇಸ್‌ಗಳಿರ‍್ತವಲ್ಲ ಸ್ವಾಮಿ ಅದನ್ನ ಕೇಳಿ ಕೆಲಜನ ಈ ರೀತಿ ಹೇಳಿರಬೇಕು ಅಂತಾನೆ ಮಹದೇವಯ್ಯ. ಇದೇ ರೀತಿಯ ದೂರುಗಳು ಕೇಳಿ ಬರುವ ಆಸ್ಪತ್ರೆ ನಿಮ್ಹಾನ್ಸ್ ಆಸ್ಪತ್ರೆ ಹಿಂದಿರುವ ಸಂಜಯ್ ಗಾಂಧಿ ಆಸ್ಪತ್ರೆ. ಇಲ್ಲಿನ ನರ್ಸ್‌ಗಳು ಹೇಳುವ ಪ್ರಕಾರ ರಾತ್ರಿ ಹೊತ್ತಿನಲ್ಲಿ ಕಿಟಕಿ ಗಾಜುಗಳಿಗೆ ಕಲ್ಲು ಬೀಳುತ್ತವೆ. ಹೆಜ್ಜೆ ಸಪ್ಪಳ ಕೇಳಿಸುತ್ತದೆ ಎಂದು ಆದರೆ ಪುಂಡ ಪೊಕರಿಗಳು ಹಾಗೆಲ್ಲ ಮಾಡಿರುವ ಸಾಧ್ಯತೆಗಳು ಇವೆ. ಅಕಸ್ಮಾತ್ ಕೆಲವರಿಗೆ ಆಗಾಗ ಕಾಣಿಸಿಕೊಳ್ಳೊ ಆತ್ಮವೇ ಇಲ್ಲೂ ಕಾಣಿಸಿಕೊಂಡಿದ್ದರೂ ಅಚ್ಚರಿ ಏನಿಲ್ಲ!
ಹುಟ್ಟಿದ ಮಗು ಮಾತನಾಡಿತಲ್ಲ ಅದು ಪ್ರೇತವೇ
ಬಳ್ಳಾರಿ ಮೂಲದ ಒಂದು ಹಳ್ಳಿಯಲ್ಲಿ ಮಧ್ಯಮ ವರ್ಗದ ಮನೆಯೊಂದರಲ್ಲಿ ಕೆಲ ವರ್ಷಗಳ ಹಿಂದೆ ಒಂದು ಮಗು ಜನಿಸಿತ್ತು. ಅದು ಭರ್ಜರಿ ಸುದ್ದಿ ಹಾಗೂ ವಿಸ್ಮಯವೇ ಸರಿ. ಅದೊಂದು ವಿಲಕ್ಷಣ ರೀತಿಯಲ್ಲಿ ಜನ್ಮ ತಾಳಿದ ಮಗು ಅದು. ಹುಟ್ಟಿದಾಗ ಕರಳು ಹೊಟ್ಟೆಯ ಹೊರಗಿತ್ತು. ನೋಡಲು ವಯಸ್ಸಾದ ಮುದುಕನಂತಿತ್ತು. ನೋಡಿದ ಡಾಕ್ಟರ್ ಈ ಮಗು ಬದುಕುವುದು ಸಾಧ್ಯವಿಲ್ಲ ಎಂದಿದ್ದಾರೆ. ಆ ಮಗುವನ್ನು ನೋಡಲು ಜನರು ಸಾಕಷ್ಟು ಮಂದಿ ಅಕ್ಕಪಕ್ಕದ ಊರುಗಳಿಂದೆಲ್ಲಾ ಬಂದಿದ್ದಾರೆ. ಅಚ್ಚರಿಯ ವಿಷಯ ಅಂದರೆ ಹುಟ್ಟಿದ ೧೦ ಗಂಟೆಗಳಲ್ಲಿ ಅದು ಮಾತನಾಡುತ್ತಿತ್ತು. ಅಪ್ಪ ಅಂದರೆ ಅದು ಅಪ್ಪ ಎನ್ನುತ್ತಿತ್ತು. ಅಮ್ಮ ಎಂದರೆ ಅದು ಅಮ್ಮ ಎನ್ನುತ್ತಿತ್ತು. ನಾವು ಹೇಗೆಲ್ಲಾ ಮಾತನಾಡುತ್ತೀವೊ ಅದು ಹಾಗೆಲ್ಲಾ ಮಾತನಾಡುತ್ತಿತ್ತು. ಜನ ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡುತ್ತೆ ಅಂತಾರಲ್ಲ ಹಾಗಾಯಿತು ಇದು ಅಂದುಕೊಂಡರು. ನಿಜಕ್ಕೂ ಅದು ಅಚ್ಚರಿ ಮೂಡಿಸುವಂತಹ ಸಂಗತಿ. ಕುರಾನ್‌ನ ಪ್ರಕಾರ ಮುಸ್ಲಿಂ ಗುರುಗಳೊಬ್ಬರು ಹೇಳುವಂತೆ ಇದು ಸೈತಾನನ ಸಂತತಿಯಂತೆ. ಯಾವುದೊ ಆತ್ಮ ದೈವ ಶಕ್ತಿಗೆ ಹೆದರಿ ಈ ಮಗು ಹೊಟ್ಟೆಯಲ್ಲಿರುವಾಗಲೆ ಆ ಮಗುವಿನ ದೇಹ ಹೊಕ್ಕು ತಪ್ಪಿಸಿಕೊಂಡು ಅಲ್ಲೆ ಬೆಳೆದು ಈ ರೀತಿ ವಿಕಾರ ರೂಪದಲ್ಲಿ ಜನ್ಮ ತಳೆದಿದೆ ಎನ್ನುತ್ತಾರೆ. ಕಾರಣ ದೈವಶಕ್ತಿ. ಪ್ರೇತವನ್ನು ಕೊಲ್ಲಲು ಹೋಗಿ ಮಗುವನ್ನು ವಿನಾಕಾರಣ ಕೊಲ್ಲುವುದಿಲ್ಲ ಎಂದ ರೀತಿ ಆತ್ಮ ಈ ಕೆಲಸ ಮಾಡಿದೆ ಅನ್ನುತ್ತಾರೆ. ಈ ಸೂಚನೆ ಪ್ರಪಂಚದ ವಿನಾಶವೊ, ಸೈತಾನನ ಸಂತಾನವೊ ಹೀಗೊಂದು ಮಗು ಇಷ್ಟು ಭಯಾನಕವಾಗಿ ಹುಟ್ಟಿ ಮಾತನಾಡಿದ ರೀತಿ ನಾಗರೀಕರ ಸಮುದಾಯವನ್ನು ಬೆಚ್ಚಿ ಬೀಳಿಸಿದೆ.
                                                                                                                                  -ನವೀನ್ ಮರಳವಾಡಿ

ಮುತ್ತತ್ತಿ ಕಾಡಿನಲ್ಲಿ...! ಕಾಮ ಪಿಶಾಚಿ...!


ಆತ್ಮಗಳು, ಅಂತರ್ ಆತ್ಮಗಳು, ಪ್ರೇತಾತ್ಮಗಳ ಬಗ್ಗೆ ನಂಬಿಕೆ ಇದ್ದವರಿಗೆ ಕುತೂಹಲವಿದ್ದವರಿಗೆ ನಿಜಕ್ಕೂ ಇದು ರೋಚಕ, ಭಯಾನಕ. ಈ ಕಾಲದಲ್ಲೂ ವಿಜ್ಞಾನಿಗಳು ಆತ್ಮಗಳ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದಾರೆ. ಅವುಗಳ ಶಕ್ತಿ ಮತ್ತು ಚಲನೆಯ ಬಗ್ಗೆ ಸಂಶೋಧಿಸಿದ್ದಾರೆ. ವಿಶ್ವದಲ್ಲಿ ಶೇಕಡ ೪೦% ರಷ್ಟು ಜನ ದೆವ್ವ ಭೂತವೆಂಬುದೆಲ್ಲ ಇಲ್ಲ ಎಂದರು. ಇನ್ನುಳಿದ ೬೦% ನಷ್ಟು ಜನ ಈ ಬಗ್ಗೆ ನಂಬಿಕೆ ಹೊಂದಿದ್ದಾರೆ. ಆತ್ಮಗಳ ಬಗ್ಗೆ ಕುತೂಹಲವಿಟ್ಟುಕೊಂಡಿದ್ದಾರೆ. ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.  ಅಂದ ಹಾಗೆ ಈ ವರದಿಯ ಉದ್ದೇಶ ದೆವ್ವ ಇದೆ ಅಥವಾ ಇಲ್ಲಾ ಎಂಬ ಚರ್ಚೆಗಲ್ಲ. ಮುತ್ತತ್ತಿ ಕಾಡಿನಲ್ಲಿ ಇತ್ತೀಚೆಗೆ ಆಗುತ್ತಿರುವ ಘಟನೆಗಳು. ಅದರಿಂದ ಬೆಚ್ಚಿ ಬಿದ್ದ ಜನಗಳು. ಮತ್ತು ಅಲ್ಲಿ ಆದ ಆತ್ಮಹತ್ಯೆಗಳು, ಕೊಲೆಗಳು, ಅತ್ಯಾಚಾರಗಳು. ಇವನ್ನೆಲ್ಲ ಮುಂದಿಟ್ಟುಕೊಂಡು ಸಿದ್ಧಪಡಿಸಿದ ರೋಚಕ ವರದಿ. ಮುತ್ತತ್ತಿ ಅಂದ ತಕ್ಷಣ ನೆನಪಾಗುವುದು ಭಯಾನಕ ಕಾಡು, ಘೋಳಿಡುವ ಪ್ರಾಣಿಗಳು, ಕಾಡು ಮೊಲಗಳು, ಗರಿಬಿಚ್ಚಿ ನರ್ತಿಸುವ ನವಿಲುಗಳು, ನಾಯಿಯಂತೆ ಜೋರಾಗಿ ಕೂಗಿಕೊಳ್ಳುವ ನರಿಗಳು, ಜುಳು-ಜುಳು ಹರಿವ ನದಿ ರಾಕ್ಷಸಗಾತ್ರದ ಮೊಸಳೆಗಳು, ಹಿಂಡುಗಟ್ಟಲೆ ಆನೆಗಳು. ದಂಡು ಕಟ್ಟಿಕೊಂಡು ತಿರುಗವ ಕೋತಿಗಳು. ಆದರೆ, ಅದೆಲ್ಲ ೮೦ರ ದಶಕದ ಮಾತು. ಈಗ ಎಲ್ಲ ಪ್ರಾಣಿ ಪಕ್ಷಗಳ ಸಂತತಿ ಕ್ಷೀಣಿಸಿದೆ. ಅಲ್ಲಲ್ಲಿ ಆನೆಗಳು ರಸ್ತೆಗೆ ಅಡ್ಡಲಾಗಿ ಬಂದು ನಿಲ್ಲುತ್ತದೆ. ಅಷ್ಟು ಬಿಟ್ಟರೆ ಕಾಡು ಇಂದಿಗೂ ಸೊಂಪಾಗಿದೆ.
ಹುಲಸಾಗಿ ಬೆಳೆದಿದೆ. ನದಿ ತುಂಬಿ ಹರಿಯುತ್ತದೆ. ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತಿದೆ. ಕಣ್ಣಿಗೆ ಹಿತವಾಗಿ ಕಾಣಿಸುತ್ತಿದೆ. ಅದನ್ನು ಹಾಗೆ ಉಳಿಸಿಕೊಳ್ಳಲೂ ಅರಣ್ಯ ಸಿಬಂದಿಗಳಿಂದ ಆಗುತ್ತಿಲ್ಲವಾದರಿಂದ. ಇನ್ನು ಹತ್ತು ವರುಷಗಳಲ್ಲಿ ಮುತ್ತತ್ತಿ ಬರಿದಾಗುವುದರಲ್ಲಿ ಎರಡು ಮಾತಿಲ್ಲ. ಭಾನುವಾರ ಮತ್ತು ರಜಾದಿನಗಳು ಬಂದರೆ ಒಂದೊಂದು ಲಾರಿ ಲೋಡಿನಷ್ಟು ತ್ಯಾಜ್ಯಗಳು ಬಿದ್ದು ಇಲ್ಲಿನ ಪರಿಸರವನ್ನು ಮತ್ತು ನದಿ ನೀರಿನ ಶುಚಿತ್ವವನ್ನು ಮಲೀನಗೊಳಿಸುತ್ತಿದೆ. ಅಷ್ಟೇ ಅಲ್ಲ ಹತ್ಯೆಗಳೂ ಆತ್ಮಹತ್ಯೆಗಳೂ ನದಿಯ ನೀರಿನಲ್ಲಿ ಶವವಾಗಿ ಗಂಗೆ ಕಲುಷಿತೆಯಾಗುತ್ತಿದ್ದಾಳೆ. ಅಂದ ಹಾಗೆ ಇಲ್ಲಿ ತೇಲುವ ಹೆಣಗಳು ಯಾರದೆಂದು ಗುರುತು ಪತ್ತೆಯಾಗುವುದಿಲ್ಲ. ಆ ಬಗ್ಗೆ ಪ್ರಕರಣವು ದಾಖಲಾಗುವುದಿಲ್ಲ. ಇನ್ನೆಲ್ಲಿ ತನಿಖೆಯ ಮಾತು. ಅದು ಎಲ್ಲರಿಗೂ ಗೊತ್ತಿರುವ ಸತ್ಯ ಆದರೆ ಈಗ ಕೇಳಿ ಬರುತ್ತಿರುವುದು ಭೂತದ ಕಥೆ. ನಡುರಾತ್ರಿಯಾದರೆ ನಾಯಿಗಳು ಊಳಿಡಲು ಶುರುಮಾಡುತ್ತವಂತೆ. ಅದರ ಹಿಂದೆಯೇ, ಹೆಂಗಸೊಬ್ಬಳು ವಿಕಾರವಾಗಿ ಕಿರುಚುವ ಶಬ್ಧ ಕೇಳಿ ಬರುತ್ತದೆಯಂತೆ. ಅದರ ಒಟ್ಟೊಟ್ಟಿಗೆ ಗಂಡಸಲು ಗುಸು-ಗುಸು ವಿಕಾರವಾಗಿ ಮಾತನಾಡುವ ಶಬ್ಧ. ಮಗುವೊಂದು ಅಳುವ ಶಬ್ಧ, ಅಷ್ಟಲ್ಲದೆ ವಸತಿಗೃಹಗಳ ಮೇಲೆ ಕಲ್ಲುಗಳು ಬೀಳುವುದು, ಬಾಗಿಲು ಕಿಟಕಿಗಳು ಗಾಳಿ ಬೀಸದಿದ್ದರು ಬಡಿದುಕೊಳ್ಳುವುದು, ಹೀಗೆ ವಿಚಿತ್ರಾತಿ ವಿಚಿತ್ರಗಳು ಘಟಿಸುತ್ತಿವೆಯಂತೆ. ಈ ಬಗ್ಗೆ ಕೆಲ ಸ್ಥಳೀಯರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ತಮ್ತೆ ಕೆಲವರ ಅನುಭವಕ್ಕೆ ಬಂದಿಲ್ಲ. ಈ ಬಗ್ಗೆ ಸ್ಥಳೀಐರು ಹೌದು ಸಾರ್ ನಾವು ಆ ವಿಕಾರ ಶಬ್ಧವನ್ನು ಕೇಳಿದ್ದೇವೆ. ಎಲೆಲ್ಲೂ ಸತ್ತವರು ದೆವ್ವಗಳಾಗುತ್ತಾರೆ ಇನ್ನು ವಯಸ್ಸಾಗದೆ ಆಕಸ್ಮಿಕವಾಗಿ ಇಲ್ಲಿ ಸಾವು ಕಂಡವರು ಯಾಕೆ ಭೂತವಾಗಿರಬಾರದು ಅಂತ ವಾದಿಸುತ್ತಾರೆ ಮತ್ತು ಭೀತಿಯನ್ನು ವ್ಯಕ್ತಪಡಿಸುತ್ತಾರೆ. ಮತ್ತು ಪ್ರವಾಸಕ್ಕೆ ಬಂದವರಿಗೆ ಮಟ-ಮಟ ಮಧ್ಯಾಹ್ನದ ಹೊತ್ತು ನೀರಿಗಿಳಿದು ಬೇಡಿ ಪಿಶಾಚಿ ಕಾಟ ನೀರಿನೊಳಗೆ ಅದುಮಿ ಬಿಡುತ್ತದೆ. ಹುಷಾರು ಅಂತ ಹೇಳಲು ಮರೆಯುವುದಿಲ್ಲ. ಹೀಗಾಗಿ ಪ್ರವಾಸಿಗರು ಈಗ ಮುತ್ತತ್ತಿ ಹೆಸರು ಕೇಳೀದ್ರೆ ಭಯಪಡುತ್ತಿದ್ದಾರೆ. ವಾಸ್ತವಾಂಶ ಹೀಗಿರಬೇಕಾದ್ರೆ, ಅದೊಂದು ಘಟನೆ ಜನರನ್ನು ಮತ್ತಷ್ಟು ಭಯ ಬೀಳುವಂತೆ ಮಾಡಿದೆ.
ಆಗಸ್ಟ್ ಮೊದಲವಾರ
ಅಂದು ಶನಿವಾರ ಬೆಂಗಳೂರಿನಿಂದ ಪ್ರವಾಸಕ್ಕೆ ಅಂತ ಮುತ್ತತ್ತಿಗೆ ಹೊರಟ ಯುವಕರ ತಂಡವೊಂದು. ಸಂಜೆಯ ಹೊತ್ತಿಗೆ ಕಾಡು ಸೇರಿಕೊಂಡಿದೆ. ಅಂದು ರಾತ್ರಿ ಭರ್ಜರಿ ಪಾರ್ಟಿ ಮಾಡಿ ಒಂದೆಡೆ ನದಿಯ ಹತ್ತಿರ ಓಮಿನಿಕಾರನ್ನು ನಿಲ್ಲಿಸಿ. ಕಟ್ಟಿಗೆಗೆ ಬೆಂಕಿ ಹಚ್ಚಿ ಕಾಯುತ್ತ ಕುಡಿಯುತ್ತ ಎಂಜಾಯ್ ಮಾಡಿದೆ. ಅಚ್ಚರಿ ಅಂದರೆ ಅವರೆಲ್ಲ ಬೆಂಗಳೂರಿನಿಂದ ಬಂದಾಗಲೇ ಭಾನುವಾರ ಬಾಡೂಟ ಮಾಡುವ ಸಲುವಾಗಿ ಮೂರು ನಾಟಿ ಕೋಳಿಗಳನ್ನು ತಂದಿದ್ದರು. ಅವುಗಳನ್ನು ಕಾರಿನ ಸೀಟುಗಳನೆಲ್ಲ ಮಡಚಿ ಆ ರಾತ್ರಿ ಕಾಲುಕಟ್ಟಿ ಒಳಗೆ ಬಿಚ್ಚಿದ್ದರು. ಆ ಗುಂಪು ಅಂದು ರಾತ್ರಿ ಹೆಂಗಸೊಬ್ಬಳು ವಿಕಾರವಾಗಿ ಕಿರುಚಿಕೊಳ್ಳುವ ಶಬ್ಧವನ್ನು ಕೇಳಿದ್ದಾರೆ. ಜತೆಗ ಮಗು ಅಳುವ ಸದ್ದನ್ನು ಆಲಿಸಿದ್ದಾರೆ. ಆದರೆ ಹತ್ತಿರದಲ್ಲೆ ಸ್ಥಳೀಯರ ಹೋಟೆಲ್ ಕಂ ಮನೆಗಳಿದ್ದದ್ದರಿಂದ ಅಲ್ಲಿಂದ ಬಂದ ಶಬ್ಧವಿರಬೇಕು ಅಂದುಕೊಂಡು ಸುಮ್ಮನಾಗಿದ್ದಾರೆ. ನಂತರ ಎಲ್ಲರೂ ಕಂಠಮಟ್ಟ ಕುಡಿದದ್ದರಿಂದ ನಿದಿರೆ ಬಂದು ಅಲ್ಲೆ ಹುಲ್ಲುಹಾಸಿನ ಮೇಲೆ ಜಮಖಾನ ಹಾಸಿಕೊಂಡು ಮಲಗಿ ನಿದ್ದೆ ಹೋಗಿದ್ದಾರೆ.
ಕಣ್ಣಿಗೆ ಬಿತ್ತು ಪಿಶಾಚಿ
ಅದು ಹುಣ್ಣಿಮೆಯ ಅಜುಬಾಜಿನ ದಿನ. ರಾತ್ರಿ ಪಾರ್ಟಿ ಮಾಡಿ ಮಲಗಿದ್ದರು. ರಾತ್ರಿ ಕಳೆದು ಬೆಳಕು ಹರಿಯತೊಡಗಿದೆ. ಆಗ ಬೆಳಗಿನ ಜಾವಾ ಸುಮಾರು ನಾಲ್ಕೂವರೆ ಸಮಯ, ಪಿಕ್ನಿಕ್‌ಗೆ ಅಂತ ಬಂದಿದ್ದ ಹುಡುಗರ ಪೈಕಿ ಒಬ್ಬಾತನಿಗೆ ಬಹಿರ್ದೆಸೆಗೆ ಹೋಗಬೇಕೆನ್ನಿಸಿದೆ. ಆತ ಅಲ್ಲೆ ಪಕ್ಕದಿಲ್ಲಿದ್ದ ಬೇಲಿ ಮರೆಗೆ ಹೋಗಿ ಕೆಲಸ ಮುಗಿಸಿ ತೊಳೆದುಕೊಳ್ಳಲು ನದಿದಡಕ್ಕೆ ಬಂದಿದ್ದಾನೆ. ತೊಳೆದುಕೊಳ್ಳುತ್ತಿರುವಾಗಲೆ, ಮುಸುಕು - ಮುಸುಕು ಕತ್ತಲಲ್ಲಿ ಯಾರೋ ನಡೆದು ಬರುವಂತೆ ಕಂಡುಬಂದಿದೆ. ತಲೆ ಎತ್ತಿ ನೋಡಿದರೆ ಎದುರಿಗೆ ನಡೆದು ಬರುತ್ತಿದ್ದವಳೊಬ್ಬ ಹೆಂಗಸು. ಆಕೆ ಬೀದಿ ಬದಿಯ ವೇಶ್ಯೆಯಂತೆ ಸಖತ್ ಮೇಕಪ್ ಮಾಡಿಕೊಂಡಿದ್ದಳಂತೆ. ಯಾರೋ ಹೆಂಗಸಿರಬೇಕು ಅಂತ ನಾಚಿಕೆಯಿಂದ ಚಡ್ಡಿಯೇರಿಸಿಕೊಂಡಿದ್ದಾನೆ. ಹತ್ತಿರ ಬಂದ ಹೆಂಗಸಿನ ಆಕೃತಿ, ತನ್ನ ಕ್ಷುದ್ರರೂಪ ತೋರಿಬಿಟ್ಟಿದೆ. ಬಾಯಿ ತೆರೆದು ಎದೆ ಯುದ್ದಕ್ಕೆ ನಾಲಿಗೆ ಚಾಚಿ, ವಿಕಾರವಾಗಿ ಕಿರುಚಿಕೊಂಡಿದೆ. ಅಷ್ಟೇ ಆಕೆಯ ಮೈಮೇಲೆಲ್ಲ ರಕ್ತ ಒಸರಿದೆ. ಅಷ್ಟೇ ಅದನ್ನು ನೋಡಿದ ಹುಡುಗ ಎದ್ದನೋ ಬಿದ್ದನೋ ಅಂತ ಗೆಳೆಯರಿದ್ದ ಜಾಗ ತಲುಪಿಕೊಂಡಿದ್ದಾನೆ. ಆಗ ಸಮಯ ಐದುಗಂಟೆ ಎಲ್ಲರನ್ನು ಎದ್ದೇಳಿ ದೆವ್ವ.. ದೆವ್ವ.. ಅಂದಿದ್ದಾನೆ. ಗಡತಾಗಿ ನಿದ್ದೆ ಹೊಡೆಯುತ್ತಿದ್ದ ಹುಡುಗರು ಎಲ್ಲೊ ಕನಸು ಕಂಡಿರಬೇಕು. ಅದಕ್ಕೆ ಹೆದರಿಕೊಂಡಿದ್ದಾನೆ. ಅಂತ ಎಳೆದು ತಮ್ಮ ಮಧ್ಯೆಕ್ಕೆ ಮಲಗಿಸಿಕೊಂಡಿದ್ದಾರೆ. ಅದರೂ ಆ ವಿಕಾರ ರೂಫದ ಹೆಂಗಸನ್ನು ನೋಡಿದ ಹುಡುಗ ಮಾತ್ರ ನಡುಗುತ್ತಲೆ ಬೆಳಕು ಹರಿಸಿದ್ದಾನೆ. ಬೆಳಗಾಗುತ್ತಲೆ ಎಲ್ಲರಿಗೂ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾನೆ. ಆದರೆ ಅದನ್ನು ನಿಜ ಅಂತ ನಂಬಲು ಯಾರಿಂದಲೂ ಸಾಧ್ಯವಾಗಲಿಲ್ಲ. ಎಲ್ಲರೂ ಉಡಾಫೆಯಿಂದ ಈವಿಲ್ ಡೆಡ್ ಸಿನಿಮಾ ನೋಡಿ ಕನಸ್ಸು ಕಂಡು ಹೆದರಿಕೊಂಡಿದ್ದಾನೆ ಅಂತ ತಮಾಷೆ ಮಾಡಿದ್ದಾರೆ.
ವೇಶ್ಯೆಯ ಕೊಲೆ
ಆ ನಂತರ ಕಾರನ್ನು ಅಲ್ಲಿಯೇ ನಿಲ್ಲಿಸಿ ಎಲ್ಲರು ಮುಖ ತೊಳೆದುಕೊಂಡು ಕಾಫಿ ಕುಡಿಯಲು ಊರಿನ ಒಳ ಹೋಗಿದ್ದಾರೆ. ಅಲ್ಲಿದ್ದ ತೆಂಗಿನಗರಿಯಿಂದ ನಿರ್ಮಿಸಿದ್ದ ಹೋಟೆಲಿನಲ್ಲಿ ಕಾಫಿ ಕುಡಿಯುತ್ತ ಹೋಟೆಲ್ ಮಾಲೀಕನಿಗೆ ಬೆಳಗಿನ ಜಾವ ನಡೆದ ಘಟನೆಯನ್ನು ಆ ಹುಡುಗ ವಿವರಿಸಿದ್ದಾನೆ. ಅದಕ್ಕೆ ಬೆರಗು ಗಣ್ಣಿನಿಂದ ಹುಡುಗರನ್ನೆ ದಿಟ್ಟಿಸಿ ನೋಡಿದ ಹೋಟೆಲಿನ ಮುದುಕ ಬದುಕೊಂಡೆ ಬಿಡು. ನೀನು ದಡದಲ್ಲಿ ಇಲ್ಲದ ನೀರಿನಲ್ಲಿ ಇದ್ದಿದ್ದರೆ ಅದುಮಿ ಸಾಯಿಸಿ ಬಿಡೋದೆನೋ. ಇನ್ನು ಹೆಂಗಸಿನ ಚಟವಿದ್ದು ಅದರ ಹಿಂದೆ ಹೋಗಿದ್ದೂ, ಮತ್ತೆ ನಿನ್ನ ಜೀವಂತವಾಗಿ ಯಾರು ನೋಡಲಾಗುತ್ತಿರಲಿಲ್ಲ. ಗೆದ್ದುಕೊಂಡೆ ಬಿಡು ಸ್ನಾನ ಮಾಡಿ ದೇವಸ್ಥಾನದಿ ಪೂಜೆ ಮಾಡಿಸಿಕೊಂಡು ಹೋಗಿಬಿಡಿ ಅಂದಿದ್ದಾನೆ. ಆಗ ನಿಜಕ್ಕೂ ಗುಂಪಿನಲ್ಲಿದ್ದ ಎಲ್ಲ ಹುಡುಗರಿಗೂ ತೊಡೆ ನಡುಗ ತೊಡಗಿದೆ. ಕಣ್ಣರಳಿಸಿ ಕುಳಿತು ಯಾರಾಕೆ? ಏನು ಕಥೆ? ಯಾಕೆ? ಹೀಗೆಲ್ಲಾ ಮಾಡುತ್ತಿದ್ದಾಳೆ ಅಂತ ಕೇಳಿದ್ದಾರೆ. ಆಗ ಮುದುಕ ಹೇಳಿದ್ದು ಸುಮಾರು ೨೫ ರಿಂದ ೩೦ ವರುಷ ಹಿಂದಿನ ಕಥೆ. ಅಂದ ಹಾಗೆ ಆತ ಹೇಳಿದ ಪ್ರಕಾರ ಕೊಲೆಯಾಗಿದ್ದವಳು ವೇಶ್ಯೆ. ಆಕೆಯನ್ನ ಎಲ್ಲಿಂದಲೊ ಕರೆತಂದು ಇಲ್ಲಿ ಕೊಲೆ ಮಾಡಲಾಗಿತ್ತು.
ಭೋಗಿಸಿ ಹತ್ಯೆಗೈದರು!
ಸುಮಾರು ಮೂವತ್ತು ವರುಷಗಳ ಹಿಂದೆ ನಾಲ್ಕೈದು ಮಂದಿ ಪುಂಡರು ಒಬ್ಬ ವೇಶ್ಯೆಯನ್ನು ಕರೆತಂದು, ನಾಲ್ಕೈದು ದಿವಸ ಅಲ್ಲೆ ಬಿಡುಬಿಟ್ಟಿದ್ದರಂತೆ. ಅಗಿನ್ನು ಈಗಿನಂತೆ ರಸ್ತೆ ಇರಲಿಲ್ಲ. ದಟ್ಟ ಕಾಡು, ಮೃಗಗಳು ದಾರಿಗೆ ಅಡ್ಡಲಾಗಿ ಬಂದು ನಿಲ್ಲುತ್ತಿದ್ದವು. ಜನರ ಓಡಾಟವು ಕಡಿಮೆ ಇತ್ತು. ಅರಣ್ಯ ಸಿಬ್ಬಂದಿಯೂ ಕಡಿಮೆ, ಇನ್ನು ಹೇಳಿಕೊಳ್ಳಲಿಕ್ಕೆ ಅಂತ ಇದದ್ದು ಒಂದೇ ವಸತಿ ಗೃತಹ. ಅಂದ ಹಾಗೆ ಆ ಸಮಯದಿ ಆ ಪುಂಡರು ಕರೆತಂದ ಹುಡುಗಿ ಸುಮಾರು ೨೫ ವರ್ಷ ವಯಸ್ಸಿನ ಅಸುಪಾಸಿನವಳು. ನೋಡಲಿಕ್ಕೆ ಮೈ ಕೈ ತುಂಬಿಕೊಂಡಿದ್ದ ಅಪ್ರತಿಮ ಸುಂದರಿ. ಯಾವ ಸಿನಿಮಾ ನಟಿಗೂ ಕಡಿಮೆ ಇಲ್ಲದಂತಹ ರೂಪ. ಅಂದ ಹಾಗೆ ಅವರು ಬಂದದ್ದು ಒಂದು ಅಂಬಾಸಿಡರ್ ಕಾರಿನಲ್ಲಿ. ಇದ್ದ ನಾಲ್ಕು ದಿನದಲ್ಲಿ ಎಲ್ಲರೂ ಪಾನಮತ್ತರಾಗಿರುತ್ತಿದ್ದರು. ಆ ಹೆಂಗಸಿಗೂ ಕುಡಿಯುವ ಚಟವಿತ್ತು. ಹೀಗೆ ಮಜಾ ಮಾಡಿದ ಪುಂಡರ ತಂಡ ನಾಲ್ಕನೆಯ ದಿನ ಅದೇನಾಯಿತೋ ಮೂವರು ಚೆನ್ನಾಗಿ ಕುಡಿದು ಅವಳಿಗೂ ಕುಡಿಸಿ ನದಿಯ ದಡದಲ್ಲಿದ್ದ ಮರದ ಕೆಳಗೆ ಆಕೆಯನ್ನು ಬೆತ್ತಲು ಮಾಡಿ ಮೂವರು ಒಬ್ಬರಾದ ಮೇಲೆ ಒಬ್ಬರು ಸಂಭೋಗಿಸಿದ್ದಾರೆ. ನಂತರ ಅಲ್ಲೆ ಪಕ್ಕದಿ ಜಮಾಖಾನ ಹಾಸಿಕೊಂಡು ಕುಡಿಯಲು ಕುಳಿತಿದ್ದಾರೆ. ನಾಲ್ಕನೆಯವನು ಬೆತ್ತಲಾಗಿದ್ದವಳ ಬಳಿ ಹೋಗಿ ತಾನು ಸಂಭೋಗ ಶುರುಮಾಡಿದ್ದಾನೆ. ಆಕೆ ಕಾಮೋನ್ಮಾದದ ತುತ್ತ ತುದಿಯಲ್ಲಿ ಸುಖದ ನರಳಿಕೆಯಲ್ಲಿದ್ದಾಗ ಭೋಗಿಸುತ್ತಿದ್ದವನು ಹರಿತವಾದ ಚಾಕು ತಎಗೆದು ಆಕೆಯ ಕೊರಳನ್ನು ಕತ್ತರಿಸಿ ಹಾಕಿದ್ದಾನೆ. ನೆತ್ತರು ಹರಿದು ಆಕೆ ಪ್ರಾಣ ಬಿಟ್ಟಿದ್ದಾಳೆ. ಅರೆ ಕಾಮದ ಸುಖದಲ್ಲಿದ್ದ ಆಕೆಯ ಕಣ್ಣುಗಳಲ್ಲಿ ಅದೇ ಖುಷಿಯಿತ್ತು. ನಂತರ ಆಕೆಯನ್ನು ನದಿಗೆ ಎಸೆದು ಅಲ್ಲಿಂದ ಎಲ್ಲರೂ ಪರಾರಿಯಾಗಿದ್ದಾರೆ. ಆದರೆ ಜನರೆಲ್ಲ ನೋಡಿಕೊಳ್ಳುವ ಹೊತ್ತಿಗೆ ಆಕೆಯ ನಗ್ನದೇಹವನ್ನು ಮೊಸಳೆ ಅರ್ಧ ತಿಂದು ಹಾಕಿತು. ಪೊಲೀಸರಿಗೆ ವಿಷಯ ತಿಳಿಯುವ ಹೊತ್ತಿಗೆ ಆಕೆಯ ಶವದ ಪಳಯುಳಿಕೆಯೂ ಇರಲಿಲ್ಲ. ಇನ್ನು ಆಗ ಪೊಲೀಸ್ ಇಲಾಖೆ ಈಗಿನಷ್ಟು ಚುರುಕಾಗಿಯೂ ಇರಲಿಲ್ಲ. ಹಂಗಾಗಿ ಕೊಂದವರ‍್ಯಾರು? ಕೊಲೆಯಾದವಳ್ಯರು ಎಂಬ ಯಾವ ವಿಷಯವು ಹೊರಗೆ ಬರಲೇ ಇಲ್ಲ. ಇಂಥವು ಎಷ್ಟೊ ಬಿಡಿಸ್ವಾಮಿ ಅಂತ ಕಥೆ ಹೇಳಿ ಮುಗಿಸಿದ್ದ ಮುದುಕ. ಅಷ್ಟಲ್ಲದೆ ಹಾಗೆ ಕೊಲೆಯಾದವರು ಅಥವಾ ಆತ್ಮಹತ್ಯೆ ಮಾಡಿಕೊಂಡವರು ದೆವ್ವವಾಗಿ ಆಗಾಗ ಹೀಗೆ ಅವರಿವರ ಕಣ್ಣಿಗೆ ಬೀಳುತ್ತಿರುತ್ತಾರೆ ಅಂತ ಹೇಳೀದ್ದ ಮುದುಕ.
ಸಿನಿಮಾ ನಟರಿಗೂ ಕಾಟ
ಈ ಕಥೆಯನ್ನು ಕೇಳಿದ ಬೆಂಗಳೂರಿನಿಂದ ಬಂದಿದ್ದ ಹುಡುಗರು ದಂಗಾಗಿ ಹೋಗಿದ್ರು. ಎಂತಹ ಜಾಗಕ್ಕೆ ಬಂದೆವಪ್ಪ ಅಂತ ಭೀತಿಯಿಂದ ಅಂದುಕೊಂಡು ಮತ್ತೆ ಮತ್ತೊಂದು ಸುತ್ತಿನ ಕಾಫಿ ಕುಡಿದು ಸಿಗರೇಟು ಸೇದಿದವರು ಎದ್ದು ಇನ್ನೆನೂ ಹೋಟೆಲಿನಿಂದ ಹೊರಬರಬೇಕು ಅಷ್ಟರಲ್ಲಿ ಅವರ ಬೆನ್ನ ಹಿಂದೆಯೆ ಹೊರಬಂದ ಹೋಟೆಲಿನ ಮುದುಕ, ಹುಡುಗರ ಕುರಿತು ಸ್ವಾಮಿ ಅದಕ್ಕೆಲ್ಲ ಏನು ಹೆಚ್ಚಾಗಿ ತಲೆಕೆಡಿಸಿಕೊಂಡು ಹೆದರಿಕೊಳ್ಳಬೇಡಿ. ಈ ಪಿಶಾಚಿ ನಿಮ್ಮ ಒಬ್ಬರಿಗೆ ಕಂಡಿದ್ದಲ್ಲ. ಆ ಹೆಂಗಸಿನ ಕೊಲೆಯಾದ ವರುಷವೇ ಪ್ರಭಾಕರ್ ನಟಿಸಿದ್ದ ಕಾಡಿನ ರಾಜ ಚಿತ್ರದ ಶೂಟಿಂಗು ಇಲ್ಲೆ ನಡೆಯಿತು. ಆಗ ಸಹ ಕಲಾವಿದರು, ನಟರಿಗೆಲ್ಲ ಈ ಅನುಭವವಾಗಿತ್ತು. ಆಗ ಎಂ.ಪಿ.ಶಂಕರ್ ಮುತ್ತತ್ತಿರಾಯ (ಹನುಮಂತ)ನಿಗೆ ಬಾರಿ ಪೂಜೆಯನ್ನೆ ಮಾಡಿಸಿದ್ರು. ಇದೆಲ್ಲ ಇಲ್ಲಿ ಸಾಮಾನ್ಯ. ಅಂದ ಹಾಗೆ ಊಟಕ್ಕೆ ಕೋಳಿಸಾರು ಏನಾದ್ರು ಬೇಕಾದ್ರೆ ಮಾಡಿಕೊಡ್ತೀವಿ ಅಂದಿದ್ದ ಮುದುಕ. ಅದಕ್ಕೆ ಹುಡುಗರು ನಾವೇ ಮಾಡಿಕೊಳ್ಳುವ ಅಂತ ನಾಟಿ ಕೋಳಿ ತಂದಿದ್ದೇವೆ. ಇಲ್ಲಿ ನೋಡಿದ್ರೆ ಇವನು ಪಿಶಾಚಿ ನೋಡಿ ಹೆದರಿಕೊಂಡು ನಡುಗುತ್ತಿದ್ದಾನೆ. ನಾವು ಅಡುಗೆ ಮಾಡುವ ಸ್ಥಿತಿಯಲ್ಲಿ ಇಲ್ಲ. ಕೋಳಿ ಕಾರಿನಲ್ಲಿದೆ ತಂದು ಕೊಡ್ತೀವಿ. ನೀವೆ ಅಡುಗೆ ಮಾಡಿಕೊಟ್ಟು ಬಿಡಿ ಅದೆಷ್ಟು ದುಡ್ಡಾಗುತ್ತೊ ನಾವು ಕೊಟ್ಟು ಬಿಡ್ತೇವೆ ಎಂದಿದ್ದಾರೆ. ಮುದುಕ ಒಪ್ಪಿ ತಲೆಯಾಡಿಸಿದ್ದಾನೆ. ನಂತರ ಎಲ್ಲರು ನದಿಯ ದಡ ತಲುಪಿದ್ದಾರೆ. ಅಲ್ಲಿ ಕಾರು ತೆರೆದು ನೋಡಿದೆ ಮತ್ತಷ್ಟು ಭಯಾನಕ ದೃಶ್ಯ ಅವರ ಕಣ್ಣಿಗೆ ಕಂಡಿತ್ತು.
                                                             ಕೋಳಿ ರಕ್ತಕಾರಿ ಸತ್ತಿದ್ದವು!
ಕಾರಿನಲ್ಲಿದ್ದ ಮೂರು ನಾಟಿಕೋಳಿಗಳ ಕತ್ತಿನಲ್ಲಿ ರಕ್ತ ಒಸರುತ್ತಿತ್ತು. ಎಲ್ಲ ಸತ್ತು ಬಿದ್ದಿದ್ದವು. ಆಶ್ಚರ್ಯ ಅಂದರೆ ಯಾವುದೇ ನಾಯಿ, ನರಿ ಬಂದು ಕೋಳಿಯನ್ನು ಸಾಯಿಸಿರಲಿಲ್ಲ. ಯಾಕೆಂದರೆ ಕಾರಿನ ಎಲ್ಲಾ ಕಿಟಕಿ ಬಾಗಿಲುಗಳನ್ನು ಮುಚ್ಚಿ ಲಾಕ್ ಮಾಡಲಾಗಿತ್ತು. ಆದರೂ ಆ ಕೋಳಿಗಳ ಸಾವು ಹೇಗಾಯ್ತು ಎಂಬ ಅಚ್ಚರಿ ಎಲ್ಲರನ್ನು ಕಾಡತೊಡಗಿತು. ಮತ್ತೆ ಕಾರು ಹತ್ತಿ ಹೋಟೆಲ್ ಬಳಿ ಬಂದು ಹೀಗೆ ಕೋಳಿಗಳು ಸತ್ತು ಹೋಗಿವೆ. ಅಂತ ಹೇಳಿದ್ದಾರೆ ಹುಡುಗರು. ಅದಕ್ಕೆ ಹೋಟೆಲಿನ ಮುದಕ ಬಿಡಿ ಇದು ಪಿಶಾಚಿಯದ್ದೆ ಕೆಲಸ ಅದೇ ಕೋಳಿಯ ರಕ್ತ ಹಿಂದೆ ಅಂತ ಮತ್ತಷ್ಟು ಹೆದರಿಸಿ ಬಿಟ್ಟಿದ್ದಾನೆ. ಹುಡುಗರು ಇನ್ನು ಇಲ್ಲಿ ಇರುವುದು ಬೇಡ ಹೊರಟು ಹೋಗುವ ಅಂತ್ಹೇಳಿ ಎರಡೆರಡು ಇಡ್ಲಿ ತಿಂದು ಅಲ್ಲಿಂದ ಕಾರನ್ನೇರಿ ಹೊರಟು ಬಿಟ್ಟಿದ್ದಾರೆ. ಆಗ ಬೆಳಗಿನ ಜಾವ ೮ ಗಂಟೆಯ ಸಮಯ. ಇಂತಹವೆಲ್ಲ ಅಲ್ಲಿ ಮಾಮೂಲಾಗಿ ನಡೆಯುತ್ತಿರುತ್ತವೆ. ಅಂತ ಅಲ್ಲಿಗೆ ಹೋಗಿ ಬಂದವರು ಸ್ಥಳೀಯರು ಹೇಳುತ್ತಿರುತ್ತಾರೆ. ಇದು ನಿತ್ಯದ ಕಥೆ ಅಂತ ಯಾರು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಈ ಘಟನೆಯಾಗಿ ಸುಮಾರು ೧೦ ದಿವಸಗಳ ನಂತರ ನಮಗೆ ಈ ಸುದ್ದಿ ಮುಟ್ಟಿತ್ತು.
ಭೂತದ ಬೇಟೆ
ಹೀಗಾಗಿ ನಮಗೆ ಈ ಬಗ್ಗೆ ಮೊದಲಿಗೆ ಅನುಮಾನ ಬಂದದ್ದು. ದರೋಡೆಕೋರರ‍್ಯಾರು ಹೆಂಗಸೊಬ್ಬಳನ್ನು ಮುಂದೆ ಇಟ್ಟುಕೊಂಡು ಜನರನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದಾರಾ ಅಂತ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಆದವು. ಈ ಬಗ್ಗೆ ಕೇಳಿದ ನಮ್ಮ ಪತ್ರಿಕಾ ತಂಡದ ಹಲವರಲ್ಲಿ ಕೆಲಮಂದಿ ನಿಜಕ್ಕು ಅಲ್ಲಿ ದೆವ್ವವಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಯಾರೋ ಕಿಡಿಗೇಡಿಗಳು ಜನರನ್ನು ಸುಲಿಯಲು ಹೀಗೆಲ್ಲ ಮಾಡುತ್ತಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದರು. ಇನ್ನು ಸಾಕಷ್ಟು ಚರ್ಚೆಗಳಾದ ಮೇಲೆ, ಮಾತು ಸಾವು ಅನಂತರದ ಆತ್ಮ ಅದಕ್ಕೆ ಪಿಶಾಚಿಯ ರೂಫದ ಕಡೆ ಹೊರಳಿತು. ಈ ಬಗ್ಗೆ ಸಾಕಷ್ಟು ಓದಿ ತಿಳಿದುಕೊಂಡವರು ಕೂಡ ಆತ್ಮದ ಕಡೆ ಅಚ್ಚರಿ ವ್ಯಕ್ತಪಡಿಸಿದರು. ಇದು ನಿಜಕ್ಕೂ ಕಳ್ಳರ ಕೆಲಸವಾ? ಇಲ್ಲಿ ನಿಜವಾಗಲೂ ಮುತ್ತತ್ತಿಯಲ್ಲಿ ಅಂತರಾತ್ಮಗಳ ಅಟ್ಟಹಾಸವಿದೆಯಾ ನೋಡಿಯೇ ಬಿಡಬೇಕು ಅಂತ ತೀರ್ಮಾನಿಸಿ ಮುತ್ತತ್ತಿಗೆ ಹೋಗಲು ನಿರ್ಧರಿಸಿದೆವು.  ಕನಕಪುರದ ಸ್ಥಳೀಯ ಸ್ನೇಹಿತರು ನನ್ನೊಟ್ಟಿಗೆ ಬರಲು ಸಿದ್ಧಗೊಂಡರು. ಮೊದಲೇ ಹೇಳಿದ್ದೆ ಭಯಪಡುವವರು, ಬರುವುದು ಬೇಡ ದೆವ್ವ ಅಲ್ಲದಿದ್ದರೆ, ಕಳ್ಳರಿಂದಾದ್ರು ತೊಂದರೆಯಾಗಬಹುದು ಅಂತ್ಹೇಳಿದೆ. ಆದರೂ ದೆವ್ವ-ದೇವರು ಎರಡನ್ನು ನಂಬದ ನಮ್ಮ ತಂಡ ಭೂತದ ಬೇಟೆಗೆ ಸಜ್ಜಾಯಿತು! ಅದಕ್ಕೊಂದು ದಿನವು ನಿಗಧಿಯಾಯಿತು. ಶನಿವಾರ ರಾತ್ರಿ ಅದೇ ನದಿಯ ದಡದಲ್ಲಿ ಬಿಡುಬಿಡುವುದಾಗಿ ತೀರ್ಮಾನಿಸಿದೆವು. ಎಲ್ಲರ ದೆವ್ವದ ದರ್ಶನ ಮಾಡಲು ಉತ್ಸುಕರಾಗಿ ತಯಾರಾದರು. ಬ್ಯಾಗಿಗೊಂದಿಷ್ಟು ತಿಂಡಿ-ತಿನಿಸು ಕ್ಯಾಮರ ಕಳ್ಳರಿಂದೆನಾದ್ರು ತೊಂದರೆ ಆದಿತು ಅಂತ ಒಂದಷ್ಟು ಬಿದರಿನ ಕೋಲುಗಳು ಎಲ್ಲವನ್ನು ಓಮಿನಿ ಕಾರಿಗೆ ತುಂಬಿಕೊಂಡು ಶನಿವಾರ ಮಧ್ಯಾಹ್ನವೇ ಹೊರಟೆವು. ಜತೆಗೆ ಮತ್ತೆ ನಾಲ್ಕು ಜನ ನಮ್ಮ ಹುಡುಗರು. ಎರಡು ಯಮಹಾ ಬೈಕಿನಲ್ಲಿ ಬಂದರು. ಸುಮಾರು ೬ ಗಂಟೆಯ ಹೊತ್ತಿಗೆ ನಾವಿದ್ದ ೧೦ ಜನರ ತಂಡ ಮುತ್ತತ್ತಿಯನ್ನು ತಲುಪಿತು. (ಅದರಲ್ಲಿ ಇಬ್ಬರು ಟಿವಿ ಚಾನಲ್ ಪ್ರತಿನಿಧಿಗಳು) ಕೊಂಡು ಹೋಗಿದ್ದ ಆಹಾರ ಪದಾರ್ಥಗಳಿಂದ ಉಪ್ಪಿಟ್ಟು ಮಾಡಿಕೊಂಡು ತಿಂದು ಕಾಡನ್ನೆಲ್ಲ ಒಮ್ಮೆ ಸುತ್ತಾಡಿದೆವು. ನಂತರ ಕಾರನ್ನು ನದಿಯ ದಡಕ್ಕೆ ತಂದು ನಿಲ್ಲಿಸಿ ಮರಳಿನ ಮೇಲೆ ಜಮಖಾನ ಹಾಸಿಕೊಂಡು ಹರಟುತ್ತಾ ಪಿಶಾಚಿಯ ಆಗಮನಕ್ಕೆ ಬಿಟ್ಟ ಕಣ್ಣು ಬಿಟ್ಟ ಹಾಗೆ ಕಾದುಕುಳಿತೆವು.
ಆಕಾರವಿಲ್ಲದೆ ವಿಕಾರ ಶಬ್ಧ
ಉಹುಂ, ಅಲ್ಲಲ್ಲಿ ಜನರು ಬಿಡಾರ ಹೂಡಿದರೆ ಹೊರತು ಯಾವ ಕಳ್ಳನು ಬಾರಲಿಲ್ಲ. ಭೂತವು ಬರಲಿಲ್ಲ. ರಾತ್ರಿ ಸುಮಾರು ೧೨.೩೦ರ ಸಮಯ ಬೀಸುವ ತಂಪಾದ ಗಾಳಿ, ಮಂಪರು ತರಿಸಿತ್ತು ಎಲ್ಲರು ಆಕಾಶದಲ್ಲಿನ ನಕ್ಷತ್ರಗಳ ನೋಡುತ್ತ ನೆಲಕ್ಕೆ ಮೈಚಾಚಿ ಮಲಗಿದೆವು. ಎಲ್ಲರಿಗೂ ಇನ್ನೇನು ನಿದ್ದೆ ಬಂತು ಅನ್ನುವಷ್ಟರಲ್ಲಿ ಕೇಳಿತ್ತು ಹೆಂಗಸೊಬ್ಬಳು ಬಿಕ್ಕಳಿಸಿ ಅಳುತ್ತಿರುವಂತಹ ಶಬ್ಧ. ಅದರ ಹಿಂದೆಯ ಮಗು ಅಳುವ ಶಬ್ಧ ಗಂಡಸರ‍್ಯಾರು ಮಾತನಾಡುವ ಸದ್ದು, ಕಾಡಸುತ್ತ ಪ್ರತಿಧ್ವನಿಸುತ್ತಿತ್ತು. ಮಲಗಿದ್ದವರೆಲ್ಲ ಎದ್ದು ಕುಳಿತರು. ಕೈಗೆ ಟಾರ್ಚ್ ತೆಗೆದುಕೊಂಡು ಕಾರಿನಲಿದ್ದ ಬಿದಿರಿನ ಕೋಲುಗಳನ್ನು ಎತ್ತಿಕೊಂಡು ಶಬ್ಧ ಬಂದ ಕಡೆಯಲ್ಲಿ ಅಡ್ಡಾಡಿದೆವು. ಉಹುಂ ಯಾವುದೇ ಆಕಾರ ಕಾಣಲಿಲ್ಲ. ಹೀಗೆ ಜೀವನದಲ್ಲಿ ಭೂತ ನಂಬದ ನಾವು ಅಶರೀರವಾಣಿಯನ್ನು ಕೇಳಿದ್ದೆವು. ಅದ್ರೂ ಅದನ್ನು ದೆವ್ವ - ಪಿಶಾಚಿ ಅಂತ ನಂಬಲಿಕ್ಕೆ ನಾವು ಸಿದ್ಧರಿಲ್ಲ. ಹೀಗೆ ಕಾಡನ್ನೆಲ್ಲ ಸುಮಾರು ಎರಡು ಗಂಟೆಗಳ ಕಾಲ ತಿರುಗಾಡಿದೆವು. ಯಾರು ಕಾಣಲಿಲ್ಲ. ಆದರೆ ದೂರದಲ್ಲಿ ಒಬ್ಬ ವ್ಯಕ್ತಿ ಮೂತ್ರ ವಿಸರ್ಜನೆ ಮಾಡುತ್ತಿದ್ದಂಥೆ ಕಂಡಿತು. ಹಂಗಾಗಿ ಆ ಕಡೆ ಓಡಿದೆವು, ಆತ ನಮ್ಮ ಕೈಯಲ್ಲಿದ್ದ ಕೋಲುಗಳನ್ನು ನೋಡಿ ಭಯಬಿದ್ದು ಓಡತೊಡಗಿದ. ತುಂಬಾ ದೂರ ಓಡಲು ಸಾಧ್ಯವಾಗದೆ ಅಲ್ಲೆ ನಿಂತುಬಿಟ್ಟ ಆತ ನಮ್ಮನ್ನು ಕಳ್ಳ ಎಂದುಕೊಂಡು ಓಡಿದ್ದ. ಆತನ ಹೆಸರು ಬಸವರಾಜು. ಮುತ್ತತ್ತಿ ಊರಿನ ಸ್ಥಳೀಯರ ಮನೆಗೆ ಬಂದಿದ್ದ. ಅದನ್ನು ಕೇಳಿ ನಾವು ಬಿದ್ದು ಬಿದ್ದು ನಕ್ಕೆವು. ಮತ್ತೆ ವಾಪಸ್ಸು ನದಿಯ ದಡಕ್ಕೆ ಬಂದು ಮಲಗಿ ಆ ಶಬ್ಧ ಎಲ್ಲಿಂದ ಬಂತು. ಹಾಗೆ ಕೂಗಿಕೊಂಡವರ‍್ಯರು ಅಂತ ಸಾಕಷ್ಟು ಚಿಂತಿಸಿದೆವು. ಆ ಬಗ್ಗೆ ನಮಗೆ ಇಂದಿಗೂ ಅನುಮಾನ ಉಂಟು ಬೆಳಗಾಯಿತು. ಅಲ್ಲೆ ಭರ್ಜರಿ ಬಾಡೂಟ ಮುಗಿಸಿ ಮುತ್ತತ್ತಿ ಕಾಡು ಬಿಟ್ಟು ರಸ್ತೆಯ ಕಡೆ ಗಾಡಿ ತಿರುಗಿಸಿದೆವು. ಆಗ ಮರೆಯಲಾಗದ ಒಂದು ಘಟನೆ ನಡೆದು ಹೋಯ್ತು. ನಾವು ಕಾರಿನಲ್ಲಿ ಹಿಂದೆ ಬರುತ್ತಿದ್ದೆವು. ಬೈಕಿನಲ್ಲಿ ಮುಂದೆ ಹೋಗುತ್ತಿದ್ದ ನಮ್ಮ ತಂಡದ ಹುಡುಗರ ಬೈಕು ಸುಮಾರು ಮೂರು ಅಡಿ ಎತ್ತರಕ್ಕೆ ಹಾರಿ ದೊಪ್ಪನೆ ನೆಲಕ್ಕೆ ಬಿತ್ತು. ಸದ್ಯಕ್ಕೆ ಯಾರಿಗೂ ಪ್ರಾಣಾಪಾಯವಾಗಲಿಲ್ಲ. ಹಿಂದೆ ಕುಳಿತಿದ್ದಾತನಿಗೆ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಕೊಂಚ ಬಿರುಸು ಹೆಚ್ಚಾಗಿದ್ದರು ಹಿಂದೆ ಕುಳಿತ್ತಿದ್ದವ ಬದುಕುಳಿಯುತ್ತಿರಲಿಲ್ಲ. ಅಚ್ಚರಿ ಅಂದರೆ ಆ ರಸ್ತೆಯಲ್ಲಿ ಗುಂಡಿ ಅಥವಾ ಹಬ್ಸ್ ತರಹದ್ದೇನು ಇರಲಿಲ್ಲ. ಆದರೂ ಬೈಕು ಹಾಗೆ ಮೇಲಕ್ಕಾರಿ ಕಳೆಬಿದದ್ದು ಯಾಕೊ ಎಂಬುದು ಇಂದಿಗೂ ಅರ್ಥವಾಗದೆ ಉಳಿದಿರುವ ಪ್ರಶ್ನೆ? ಆದರೆ ಕನಕಪುರ ಬಂದು ತಲುಪಿ ನಡೆದ ಬಗ್ಗೆ ಹಿರಿಯರೊಬ್ಬರ ಹತ್ತಿರ ಈ ವಿಷಯ ಪ್ರಸ್ತಾಪಿಸಿದೆವು. ಅದಕ್ಕೆ ಅವರು ಗಂಭೀರವಾಗಿ ಕೊಟ್ಟ ಉತ್ತರ ಇದು ಆತ್ಮದ ರಿಯಾಕ್ಷನ್ನು ಅಂತ ಅದು ಎಷ್ಟರ ಮಟ್ಟಿಗೆ ಸತ್ಯವೋ ಆತ್ಮ, ಪ್ರೇತಾತ್ಮ ಪರಮಾತ್ಮನಿಗೆ ಗೊತ್ತು! ಇನ್ನು ಕ್ಯಾಮರ ಕಣ್ಣಿಗೆ ದೆವ್ವ ಕಾಣಿಸುತ್ತೆ ಅಂತ ಕೆಲವು ಸೈಂಟಿಸ್ಟುಗಳು ಸಂಶೋಧನೆಯಲ್ಲಿ ಸಾಭೀತುಪಡಿಸಿದ್ದರಲ್ಲ. ಅದರಂತೆ ನಮ್ಮ ಕ್ಯಾಮರದಲ್ಲಿ ತಎಗೆದ ಪೋಟೋಗಳಲ್ಲೂ ಪಿಶಾಚಿಯ ದೃಶ್ಯ ಮೂಡಿರಲಿಲ್ಲ. ಆದರೆ ಅಲ್ಲಿ ಕೇಳಿದ ಶಬ್ಧ ಯಾರದ್ದು? ಸ್ಥಳೀಯರು ಹೇಳುವಂತೆ ಅದು ವೇಶ್ಯೆಯ ಪಿಶಾಚಿಯದ್ದ? ಎಂಬುದು ವಿಸ್ಮಯದ ಸಂಗತಿ. ನಿಜಕ್ಕೂ ಅಲ್ಲಿ ಕೊಲೆಯಾದ ವೇಶ್ಯೆ ಕಾಮಪಿಶಾಚಿಯಾಗಿ ಗಂಡಸರಿಗೆ ಮಾತ್ರ ತೊಂದರೆಕೊಡುತ್ತಿದ್ದಾಳ? ಎಂಬ ಯಕ್ಷ ಪ್ರಶ್ನೆಗೆ ಉತ್ತರ ಮಾತ್ರ ಅವರವರ ನಂಬಿಕೆಯಲ್ಲಿಯೇ ಇದೆ. ಆತ್ಮದ ಮೇಲೆ ನಂಬಿಕೆ ಇರುವವರು ಹೌದು ಅಂದರೆ, ಇಲ್ಲದವರು ಅದು ಭ್ರಮೆ ಅಂತಾರೆ. ಅಚ್ಚರಿ ಅಂದರೆ ೧೦ ಜನರ ನಮ್ಮ ತಂಡಕ್ಕೆ ಒಟ್ಟೊಟ್ಟಿಗೆ ಭ್ರಮೆ ಮೂಡಲು ಸಾಧ್ಯವಾ? ಎಂಬ ಪ್ರಶ್ನೆ ಇಂದಿಗೂ ನಮ್ಮನ್ನು ಕಾಡುತ್ತಿದೆ.
ರಾಜ್ ವಸತಿಗೃಹ ಅವನತಿಯ ಅಂಚಿನಲ್ಲಿ!
ಮುತ್ತತ್ತಿ ಕಾಡಿನ ಇತಿಹಾಸದ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಮತ್ತು ಮುತ್ತತ್ತಿಯ ಅಚ್ಚರಿ ಸಂಗತಿಗಳ ಬಗ್ಗೆಯೂ ಯಾರಿಗೂ ಅಷ್ಟಾಗಿ ಗೊತ್ತಿಲ್ಲ. ಇಲ್ಲಿಗೆ ಪ್ರವಾಸಕ್ಕೆ ಅಂತ ಬರುವವರು ಆ ಬಗ್ಗೆ ತಿಳಿದುಕೊಳ್ಳೂವ ಪ್ರಯತ್ನವನ್ನು ಮಾಡುವುದಿಲ್ಲ. ಕಾಡಿನ ಸೊಬಗನ್ನು ನೋಡಿ ಕಣ್ಣು ತುಂಬಿಸಿಕೊರ್ಳಳಲು ಬರುವವರು ತೀರಾ ಕಡಿಮೆ. ಕಠಮಟ್ಟೆ ಹೆಂಡ ಕುಡಿದು ಬಾಡು ಕಡಿಯಲು ಬರುವವರೆ ಹೆಚ್ಚು ಮುತ್ತತ್ತಿ ಎಂಬ ರಮಣೀಯ ಸಉಂದರ ಸೊಬಗಿನ ಪ್ರವಾಸಿ ತಾಣದ ಬಗ್ಗೆ ಮೊದಲಿಗೆ ಹೇಳುವುದಾದರೆ ಥಟ್ ಅಂತ ನೆನಪಿಗೆ ಬರುವುದು ನಟ ರಾಜ್‌ಕುಮಾರ್. ಇವರಿಗೂ ಮುತ್ತತ್ತಿಗೂ ಅವಿನಾಭಾವ ಸಂಬಂಧ. ಯಾಕೆಂದರೆ ರಾಜ್‌ಕುಮಾರ್ ಮನೆಯ ದೇವರು ಇಲ್ಲೆ ಇರುವ ಮುತ್ತತ್ತಿ ರಾಯ ದೇವರು. ಅದೇ ಮನೆದೇವರ ಹೆಸರನ್ನು ರಾಜ್‌ಗೆ ಇಟ್ಟಿದ್ರು ಸಿನಿಮಾಗೆ ಬರುವ ಮುಂಚೆ ಮುತ್ತಪ್ಪನಾಗಿದ್ದವರು ನಂತರ ರಾಜ್‌ಕುಮಾರ್ ಆದರು ರಾಜ್. ಸಿನಿಮಾರಂಗದಲ್ಲಿ ಮಿಂಚಿದ ಮೇಲೆ ಮುತ್ತತ್ತಿಗೆ ದೇವರ ದರ್ಶನಕ್ಕೆ ಅಂತ ಬಂದರೆ ತುಂಬಾ ಕಷ್ಟಪಟ್ಟು ಬರಬೇಕಿತ್ತು. ರಸ್ತೆ ಸರಿ ಇರಲಿಲ್ಲ. ಮತ್ತು ಕಾಡುಮೃಗಗಳು ಅಡ್ಡಗಟ್ಟಿ ನಿಲ್ಲುತ್ತಿದ್ದವು. ಬಂದರು ಉಳಿದುಕೊರ್ಳಳಲು ವಸತಿಯ ವ್ಯವಸ್ಥೆ ಇರಲಿಲ್ಲ. ಹೀಗಾಗಿ ರಾಜ್‌ಕುಟುಂಬದವರು ತಮಗಷ್ಟೇ ಅಲ್ಲ ಇಲ್ಲಿ ತಂಗಲು ಬರುವವರಿಗೆ ಸಹಾಯವಾಗಲಿ ಅಂತಲೇ ನಾಲ್ಕೈದು ರೂಮುಗಳು ಉಳ್ಳ ದೊಡ್ಡ ಹಾಲ್ ಇರುವಂತಹ ಒಂದು ರೀತಿಯಲ್ಲಿ ಮದುವೆ ಛತ್ರದಂತಹ ವಸತಿ ಗೃಹ ಕಟ್ಟಿಸಿದ್ದರು. ಅಲ್ಲಿ ಪ್ರವಾಸಿಗರಷ್ಟೆ ಅಲ್ಲ ಶೂಟಿಂಗ್ ಅಂತ ಬಂದ ಸಿನಿಮಾ ರಂಗದವರು ಉಳಿದುಕೊಳ್ಳುತ್ತಿದ್ದರು. ಸಾಕಷ್ಟು ಜನರಿಗೆ ಈ ವಸತಿ ಗೃಹ ಉಪಯೋಗವಾಗುತ್ತಿತ್ತು. ರಾಜ್‌ಕುಟುಂಬದವರು ಅಲ್ಲಿ ಸಂಸಾರಸ್ಥರಿಗೆ ಮಾತ್ರ ರೂಂ. ಸಿಗುವ ವ್ಯವಸ್ಥೆ ಮಾಡಿದ್ರು. ಅಬ್ಬೆಪಾರಿಗಳಿಗೆ ಮಜಾ ಮಾಡಲು ಹುಡುಗಿಯರನ್ನು ಕರೆತರುವವರಿಗೆ, ಕುಡಿದು ಗಲಾಟೆ ಮಾಡುವವರಿಗೆ ಯಾವುದೇ ಕಾರಣಕ್ಕೂ ವಸತಿ ಗೃಹ ಬಾಡಿಗೆಗೆ ಬೀಡುತ್ತಿರಲಿಲ್ಲ. ರಾಜ್ ತೀರಿಕೊಂಡ ಬಳಿಕ ಇಲ್ಲಿನ ದೇವಸ್ಥಾನಕಕ್ಕೆ ಅವರ ಕುಟುಂಬದವರ‍್ಯಾರೂ ಬಂದಂತಿಲ್ಲ. ಬಹುತೇಕ ರಾಜ್ ತೀರಿಕೊಂಡ ನಂತರ ಅವರು ಕಟ್ಟಿಸಿದ ವಸತಿ ಗೃಹವು ಪಾಳು ಬಿದ್ದಂತಾಗಿದೆ. ಅದನ್ನ ಉಳಿಸಿಕೊಳ್ಳವುವುದು ರಾಜ್ ಮನೆತನದ ಜವಾಬ್ದಾರಿ ಈ ಬಗ್ಗೆ ಪತ್ರಿಕೆ  ಅವರ ಕುಟುಂಬಕ್ಕೆ ಸಾಕಷ್ಟು ಬಾರಿ ತಿಳಿಸಿದೆ. ಅವರ‍್ಯಾರೂ ಈ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಇನ್ನು ಮುಂದಾದರೂ ರಾಜ್ ವಸತಿ ನಿಲಯವನ್ನು ಉಳಿಸಿಕೊಳ್ಳುವ ಪ್ರಯತ್ನವಾಗಲಿಮುತ್ತತ್ತಿಯ ಬಗ್ಗೆ ಬರೆಯುತ್ತ ಹೋದರೆ ರೋಚಕ ಸುದ್ದಿಗಳ ನೂರುಪುಟದ ಪುಸ್ತಕ ವೇ ಆಗಿ ಹೋಗುತ್ತದೆ. ಇರುವುಸರಲ್ಲೇ ಕೆಲವು ಪ್ರಮುಖವಾದ ವಿಷಯವನ್ನು ಹೇಳುವುದಾದರೆ ಇಡೀ ವಿಶ್ವವನ್ನೆ ಬೆಚ್ಚಿ ಬೀಳಿಸಿದಂತಹ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅರೋಪದಲ್ಲಿ ಭಾಗಿಯಾಗಿದ್ದ. ಕೈಕಾಲುಗಳು ಊನವಾಗಿದ್ದ ಕೆಲಮಂದಿ ಶ್ರೀಲಂಕಾದ ಎಲ್‌ಟಿಟಿ ಉಗ್ರಪಡೆ ಇದೇ ಮುತ್ತತ್ತಿಯಲ್ಲಿ ಬಂದು ಬಿಟ್ಟಿತ್ತು. ಗ್ರಾಮಸ್ಥರಿಗೆ ಇವರ ಮೇಲೆ ಅನುಮಾನ ಬಂದು ಪೊಲೀಸರಿಗೆ ವಿಷಯ ತಿಳಿಸಿ ಇವರನ್ನು ಖಾಕಿಗಳು ಸುತ್ತುವರಿಯುವಷ್ಟರಲ್ಲಿ ಎಲ್ಲರೂ ಕೊರಳಿನಲ್ಲಿದ್ದ ಸೈನೈಡ್ ತಾಯತ ಕಚ್ಚಿ ಆತ್ಮಹತ್ಯೆ ಮಾಡಿಕೊಂಡು ಬಿಟ್ಟರು. ಮಾಡಿಕೊಂಡ ಶ್ರೀಲಂಕಾ ಎಲ್‌ಟಿಟಿ ಉಗ್ರ ಉಗ್ರರೆಲ್ಲಾ ಪಿಶಾಚಿಗಳಾಗಿದ್ದಾರೆ.ಹೊತ್ತಿಲ್ಲದ ಹೊತ್ತಿಲ್ಲದ ಹೊತ್ತಿನಲ್ಲಿ ಕೈಇಲ್ಲದವರು ಕಾಲಿಲ್ಲದವರು ಪ್ರೇತವಾಗಿ ಓಡಾಡುತ್ತಿರುತ್ತಾರೆ. ಶ್ರೀಲಂಕಾ ತಮಿಳು ಭಾಷೆಯಲ್ಲಿ ಮಾತನಾಡುವ ಸದ್ದು ಕೇಳುತ್ತದೆ. ಎಂದೆಲ್ಲಾ ಸುದ್ದಿ ಹಬ್ಬಿತ್ತು. ಅದು ನಡೆದು ಸುಮಾರು ೧೮ರಿಂದ ೨೦ ವರುಷಗಳೇ ಕಳೆದು ಹೋಗಿವೆ. ಆಗೆಲ್ಲಾ ಅಲ್ಲಿಗೆ ಪ್ರವಾಸಿಗರು ಕಾಲಿಡಲುಹೆದರುತ್ತಿದ್ದರು. ಅದನ್ನೆ ಬಂಡವಾಳ ಮಾಡಿಕೊಂಡು ಕಾಡುಗಳು ಬೇಟೆಯಾಡುವುದು ಬೆಲೆ ಬಾಳುವ ಮರ ಕಡಿದು ಸಾಗಿಸುವುದು ಅಂತೆಲ್ಲ ಇಡೇ ಕಾಡನ್ನು ಕೊಳ್ಳೆ ಹೊಡೆದದ್ದು ಉಂಟು ಭೂತಗಳಂತೆ ವಿಕಾರವಾಗಿ ಕೂಗಿದರೆ ಯಾವೊಬ್ಬ ಅರಣ್ಯ ಸಿಬ್ಬಂಧಿಯಾಗಲಿ ಗ್ರಾಮಸ್ಥರಾಗಲಿ ಮನೆ ಬಿಟ್ಟು ಹೊರ ಬರುತ್ತಿರಲಿಲ್ಲ. ಹೀಗಾಗಿ ಕಾಡು ಗಳ್ಳರಿಗೆ ಇದು ಸುಲಲಿತ ಮಾರ್ಗವಿತ್ತು. ಮುಂದೊಂದು ದಿನ ಪೊಲೀಸರಿಗೆ ಸಿಕ್ಕು ಬಿದ್ದ ಪಾಖಂಡಿಗಳು ಈ ಸತ್ಯವನ್ನು ಒಪ್ಪಿಕೊಂಡಿದ್ರು. ಆಗ ಜನ ನಿರಾಳವಾಗಿ ನೆಮ್ಮಂದಿಯಿಂದ ಇರುತೊಡಗಿದರು. ಪ್ರವಾಸಿಗರು ಬರತೊಡಗಿದರು. ಈಗಲೂ ಅಂತಹದ್ದೆ ಕಿಡಿಗೇಡಿಗಳ ಗುಂಪು ಯಾವುದೋ ಬಲವಾದ ಕಾರಣಕ್ಕೆ ಭೂತದಂತೆ ಕೂಗಿ ಸರಿರಾತ್ರಿಯಲ್ಲಿ ಓಡಾಡಿ ಜನರನ್ನು ಬೆದರಿಸುತ್ತಿದ್ದಾರಾ? ಆ ಬಗ್ಗೆ ಅರಣ್ಯ ಸಿಬಂಧಿಯೆ ಒದು ಕಣ್ಣು ಇಡಬೇಕಾಗಿದೆ. ಇಲ್ಲವಾದಲ್ಲಿ ಏನಾದರೊಂದು ಅನಾಹುತ ನಡೆಯಬಹುದು ಇಲ್ಲ ಕಾಡಿನ ಸಂಪತ್ತು ಲೂಟಿಯಾಗಬಹದು. ಇದೊಂದು ಎಚ್ಚರವಿದ್ದರೆ ಒಳ್ಳೆಯದು.




























 

Friday 13 July 2012

ಗೀತಾ ಬ್ಯಾಂಗಲ್ ಸ್ಟೋರ್ ಪ್ರೇಮ ಕಾವ್ಯವಾಗಲಿ!


ಗೀತಾ ಬ್ಯಾಂಗಲ್ ಸ್ಟೋರ್ ಇದು ಸಿನಿಮಾದ ಹೆಸರು. ಆ ಟೈಟಲನ್ನು ಕೇಳಿದವರು ಓ...ಹೋ... ಇದೆಂತಹಾ ಸಿನಿಮಾ ಅಂದುಕೊಂಡದ್ದು ಸುಳ್ಳಲ್ಲ. ಆದರೆ ದುನಿಯಾ ಸಿನಿಮಾ ಶೂಟಿಂಗ್ ಶುರುವಾದಾಗಲೂ ಸಾಕಷ್ಟು ಮಂದಿ ದುನಿಯಾ ಅನ್ನೋದು ಹಿಂದಿಯ ಪದ, ಅದನ್ನಿಟ್ಟುಕೊಂಡು ಎಂತಹ ಸಿನಿಮಾ ಮಾಡಲು ಸಾಧ್ಯ ಅಂತ ಮಾತನಾಡಿಕೊಂಡದ್ದು ಸುಳ್ಳಲ್ಲ. ಆದರೆ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಸಾಧಿಸಿದ ಮೇಲೆ ದುನಿಯಾ ಹೆಸರನ್ನು ಹೋಲುವ ಸಾಕಷ್ಟು ಸಿನಿಮಾ ಬಂದವು ಬರುತ್ತಿವೆ. ಎಂಬುದು ಸುಳ್ಳಲ್ಲ. ಬೋರ್ಡಿಗಿಲ್ಲದ ಸೂರಿ ಸ್ಟಾರ್ ಡೈರೆಕ್ಟರ್ ಆದದ್ದು ಸುಳ್ಳಲ್ಲ. ಅದರಂತೆ ಕಥೆಗೆ ಪೂರಕವಾಗಿರುವುದರಿಂದ ನಿರ್ದೇಶಕ ಮಂಜು ಮಿತ್ರ ಸಿನಿಮಾಗೆ ಗೀತಾ ಬ್ಯಾಂಗಲ್ ಸ್ಟೋರ್ ಅಂತ ಹೆಸರಿಟ್ಟಿದ್ದಾರೆ. ಅಂದಹಾಗೆ ಇದೊಂದು ಲವ್ ಸ್ಟೋರಿ. ಇದೇ ತಿಂಗಳಿನಲ್ಲಿ ಚಿತ್ರದ ಮುಹೂರ್ತ. ಮಂಜುಗೆ ಇದು ಸ್ವತಂತ್ರ ನಿರ್ದೇಶನದ ಮೊದಲ ಚಿತ್ರ. ಈ ಮೊದಲ ಓಂ ಪ್ರಕಾಶ್ ರಾವ್, ರಮೇಶ್ ಅರವಿಂದ್‌ರಂತಹ ಘಟಾನುಘಟಿಗಳ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿದೆ. 
ನಿರ್ದೇಶಕ ಮಂಜು ಮಿತ್ರ
ನಿರ್ಮಾಪಕ ಕೆಂಪರಾಜುರಿಗೂ ಇದು ಮೊದಲನೇ ಸಿನಿಮಾ. ವಿ. ಮನೋಹರ್ ಕಥೆಗೆ ಅನುಗುಣವಾಗಿ ಚೆಂದದ ಸಂಗೀತ ನೀಡಲಿದ್ದಾರೆ. ಅಂದಹಾಗೆ ಹೊಸಬರೇ ಇದ್ದ ದುನಿಯಾ ಸಿನಿಮಾಗೂ ವಿ. ಮನೋಹರ್‌ರವರೇ ಸಂಗೀತ ನೀಡಿದ್ದರು. ಹೊಸಬರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಉದಾರ ಗುಣ ಮನೋಹರದ್ದು. ಇನ್ನು ಸಾಹಸ ಡಿಫರೆಂಟ್ ಡ್ಯಾನಿ. ನೃತ್ಯ ಮದನ್ ಹರಿಣಿ. ಹೀಗೆ ಹೊಸಬರು ಮತ್ತು ಹೆಸರಾಂತ ತಂತ್ರಜ್ಞರ ಸಮ್ಮಿಲನದಲ್ಲಿ ಸಿನಿಮಾ ಮೂಡಿ ಬರಲಿದೆ. ಮರಳವಾಡಿಯಿಂದ ಶುರುವಾಗುವ ಸಿನಿಮಾ ಚಿತ್ರೀಕರಣ ರಾಮನಗರದ ಸುತ್ತ ಮುತ್ತ ನಡೆಯಲಿದೆ. ನಿರ್ದೇಶಕ ಮಂಜು ಮಿತ್ರರಿಗೆ ಒಳ್ಳೆಯ ಭವಿಷ್ಯವಿದೆ. ಗೀತಾ ಬ್ಯಾಂಗಲ್ ಸ್ಟೋರ್ ಸಿನಿಮಾ ಒಂದು ಪ್ರೇಮ ಕಾವ್ಯವಾಗಲಿ ಚಿತ್ರ ತಂಡಕ್ಕೆ ಬೆಸ್ಟ್ ಆಫ್ ಲಕ್.
                                                                                                                                                                                                                    -ನವೀನ್ ಮರಳವಾಡಿ

Wednesday 11 July 2012

ರಣ ಸಿನಿಮಾ ಹೇಗಿದೆ

*ವಿನಾಯಕರಾಮ್ ಕಲಗಾರು
ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಎಸ್.ನಾರಾಯಣ್ ಪುತ್ರ ಪಂಕಜ್ ಅಭಿನಯದ ರಣ ಬಿಡುಗಡೆಯಾಗಿದೆ. ಅವರ ಹಿಂದಿನ ಚಿತ್ರ ದುಷ್ಟದಲ್ಲಿದ್ದಂತ ಹಲವಾರು ಭೀಕರ ಸನ್ನಿವೇಶಗಳು ಚಿತ್ರದಲ್ಲಿವೆ. ಆಕ್ಷನ್ ಸಿನಿಮಾಕ್ಕೂ ಸೈ ಎಂದು ಪಂಕಜ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.ಆದರೆ ಚಿತ್ರದಲ್ಲಿ ಪಂಕಜ್ನನ್ನು ಹೊರತುಪಡಿಸಿ ಇನ್ನೂ ಮೂವರು ನಾಯಕರಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಲವ್ ಎಪಿಸೋಡು. ಜೊತೆ ಜೊತೆಗೆ ರೌಡಿಸಂನ ಕರಾಳ ಮುಖ ಅನಾವರಣಗೊಳ್ಳುತ್ತಾ ಹೋಗುತ್ತದೆ.ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರೂಪಣೆ ಹಾಗೂ ಸಂಭಾಷಣೆ ಒದಗಿಸಿರುವ ಲಕ್ಷ್ಮಣ್, ನಾಲ್ವರು ನಾಯಕರಲ್ಲಿಯೂ ಒಬ್ಬರು. ಶ್ರೀನಿವಾಸ್ ನೂರ್ತಿ ತಮ್ಮ ಪ್ರಥಮ ಪ್ರಯತ್ನದಲ್ಲಿ ಜಸ್ಟ್ ಪಾಸ್ ಆಗಿದ್ದಾರೆ. ರಾಜರತ್ನಂ ಕ್ಯಾಮೆರಾ ಕೆಲಸ ನೋಡಿಯೇ ಸವಿಯಬೇಕು. ಆದರೆ ಒಂದಷ್ಟು ಕಡೆ ಕಥೆ ಕೈಕೊಟ್ಟಿದೆ. ನಿರ್ಮಾಣದಲ್ಲಿ ಇನ್ನಷ್ಟು ಅದ್ದೂರಿತನ ಇದ್ದಿದ್ದರೆ ಒಂದೊಳ್ಳೆ ಚಿತ್ರವಾಗಿರುತ್ತಿತ್ತು. ಶ್ರೀಧರ್ ವಿ.ಸಂಭ್ರಮ್ ಹಾಡುಗಳಲ್ಲಿ ಎರಡು ಗುನುಗುವಂತೆ ಮಾಡುತ್ತದೆ.ಅಂಬರೀಶ್ ಪೋಸ್ಟರ್ ಗಳಲ್ಲಿ ರಾರಾಜಿಸಿದಂತೆ ಸಿನಿಮಾದಲ್ಲಿ ಕಾಣಸಿಗುವುದಿಲ್ಲ. ಒಟ್ಟಾರೆ ೪ ರಿಂದ ೫ ದೃಶ್ಯಗಳಿಗೆ ಮಾತ್ರ ಅಂಬಿ ಸೀಮಿತಾಗಿದ್ದಾರೆ. ಡೈಲಾಗ್ ಗಳನ್ನೂ ಹಿಂದಿಯಲ್ಲಿ ಹೇಳಿಸಲಾಗಿದೆ. ಹೀಗಾಗಿ ಅಂಬರೀಶ್ ಅಭಿಮಾನಿಗಳಿಗೆ ತುಸು ಬೇಸರದ ಸಂಗತಿ.ಪಂಕಜ್ ಅಭಿನಯದಲ್ಲಿ ಇನ್ನಷ್ಟು ಮಾಗಬೇಕಿದೆ. ನಾಯಕಿಯರ ಪೈಕಿ ಅರ್ಚನಾ, ಸುಪ್ರೀತಾ, ಸೋನಿಯಾಗೌಡ ಹಾಗೂ ಸ್ಪೂರ್ತಿ ತಂತಮ್ಮ ಪಾತ್ರಗಳಿಗೆ ಜೀವ ತುಂಬಲು ಯತ್ನಿಸಿದ್ದಾರೆ. ಇವರಲ್ಲಿ ಸುಪ್ರೀತಾ ನಟನೆ ಪರ್ವಾಗಿಲ್ಲ. ಚಿತ್ರದಲ್ಲಿ ಹೊಸದನ್ನೇನೂ ಹೇಳಹೊರಟಿಲ್ಲ. ಅದೇ ಹಳೇ ಸವಕಲು ಕಥೆಯನ್ನೇ ಬೇರೆ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ ಅಷ್ಟೆ !

ಕ್ರೇಜಿಲೋಕ ಸಿನಿಮಾ ಹೇಗಿದೆ

* ಶ್ರೀರಾಮ್ ಭಟ್
ಕವಿತಾ ಲಂಕೇಶ್ ನಿರ್ದೇಶನದ ಕ್ರೇಜಿಲೋಕ ಚಿತ್ರವು ಪ್ರೇಕ್ಷಕರ ನಿರೀಕ್ಷೆ ಮುಟ್ಟುವಲ್ಲಿ ಸೋತಿದೆ. ಚಿತ್ರವನ್ನು ಸಂಪೂರ್ಣವಾಗಿ ’ರವಿಚಂದ್ರನ್ ಮಯ’ ಮಾಡುವ ಜರೂರತ್ತು ಚಿತ್ರದ ಶೀರ್ಷಿಕೆಯಲ್ಲೇ ಎದ್ದು ಕಾಣುತ್ತಿದೆ. ಆದರೆ ಅದನ್ನು ಮಾಡುವಲ್ಲಿ ಕವಿತಾ ಯಶಸ್ವಿಯಾಗಿಲ್ಲ. ಏಕೆಂದರೆ, ಈ ಕ್ರೇಜಿಲೋಕದ ಜೊತೆ ಅವರು ತಮ್ಮದೇ ಹಿಂದಿನ ಚಿತ್ರ ’ಪ್ರೀತಿ ಪ್ರೇಮ ಪ್ರಣಯ’ ವನ್ನು ಹಿಂಬಾಗಿಲಿನಿಂದ ಮತ್ತೆ ತರುವ ಪ್ರಯತ್ನವನ್ನೂ ಮಾಡಿದ್ದಾರೆ.ಈ ಎರಡನ್ನೂ ಬೆರೆಸಲು ಮೊದಲು ಪ್ರಯತ್ನಿಸಿ ಆಮೇಲೆ ಬೇರ್ಪಡಿಸಲೂ ಪ್ರಯತ್ನಿಸಿ ಎರಡರಲ್ಲೂ ಗೊಂದಲ ಸೃಷ್ಟಿಸಿಕೊಂಡು ಸುಸ್ತಾಗಿದ್ದಾರೆ ಕವಿತಾ. ಈ ಮೊದಲು ಅವರು ’ದೇವೇರಿ’, ’ತನನಂ ತನನಂ,’ಹಾಗೂ ’ಪ್ರೀತಿ ಪ್ರೇಮ ಪ್ರಣಯ’ ದಂತಹ ಸದಭಿರುಚಿಯ ಚಿತ್ರ ಕೊಟ್ಟಿದ್ದರಿಂದ ಈ ಚಿತ್ರದಲ್ಲಿ ಇನ್ನೂ ಹೆಚ್ಚಿನದೇನನ್ನೋ ಮಾಡುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಪ್ರೇಕ್ಷಕರ ಈ ನಿರೀಕ್ಷೆ ಉಲ್ಟಾ ಆಗಿದೆ.
ಸಿನಿಮಾದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಎಲ್ಲವನ್ನೂ ಮಾಡಿರುವ ಕವಿತಾರಿಗೆ ಅದನ್ನು ಚೆನ್ನಾಗಿ ಮಾಡಲು ಸಾಧ್ಯವಾಗಿಲ್ಲ. ಇರುವುದರಲ್ಲಿ ಸಂಭಾಷಣೆಯೇ ’ದಿ ಬೆಸ್ಟ್’ ಅನ್ನಬಹುದು. ಚಿತ್ರದಲ್ಲಿ ಗಟ್ಟಿಯಾದ ಕಥೆಯನ್ನು ಹುಡುಕುವ ಮೂರ್ಖ ಪ್ರಯತ್ನವೇ ಬೇಡ. ಮೊದಲು ಸಂಭಾಷಣೆ ಬರೆದು, ಚಿತ್ರಕಥೆ ಬರೆದು ಆಮೇಲೆ ಕಥೆ ಬರೆಯಲು ಹೊರಟರೋ ಏನೋ, ಕಥೆ ಮಾಡಲು ಅವರಿಗೆ ಬಹುಶಃ ವೇಳೆಯೇ ಸಿಗಲಿಲ್ಲ ಎನ್ನಬಹುದು.
ಇನ್ನು ಚಿತ್ರಕಥೆ ಸಿಗಬೇಕೆಂದರೆ ಪ್ರೇಕ್ಷಕರು ಅದಕ್ಕೂ ಮೊದಲು ತಾವು ತೆರೆಯಲ್ಲಿ ನೋಡಿದ ಎಲ್ಲಾ ದೃಶ್ಯಗಳನ್ನು ನೆನಪಿಸಿಕೊಂಡು ತಾವೇ ಜೋಡಿಸಿಕೊಳ್ಳಬೇಕು. ಅದನ್ನು ಚಿತ್ರಕಥೆಯೆಂದು ಕರೆದು ಅದನ್ನು ತೆರೆಯ ಮೇಲೆ ಓಡಾಡುವ ಪಾತ್ರಗಳು ಹಾಗೂ ಸಂಭಾಷಣೆಯ ಮೂಲಕ ಕಲ್ಪಿಸಿಕೊಂಡವರಿಗೆ ಅಲ್ಲೊಂದು ಸಿನಿಮಾ ಗೋಚರಿಸುತ್ತದೆ.
 
ಇದರಲ್ಲಿ ರವಿಚಂದ್ರನ್ ಒಬ್ಬ ಪಾತ್ರಧಾರಿಯಾದ್ದರಿಂದ, ಅವರ ಪರಿಚಯ ಎಲ್ಲರಿಗೂ ಇರುವುದರಿಂದ ಇದಕ್ಕೆ ’ಕ್ರೇಜಿಲೋಕ’ ಎಂಬ ಹೆಸರೇ ಸೂಕ್ತ ಎನ್ನುವಂತಿದೆ. ಬಹುಶಃ ರವಿಚಂದ್ರನ್ ಕಾಲ್ ಶೀಟ್ ಸಿಕ್ಕಮೇಲೆಯೇ ಕವಿತಾರಿಗೆ ’ಕ್ರೇಜಿಲೋಕ’ ಹೆಸರು ನೆನಪಾಗಿರಬೇಕು. ಅದಕ್ಕೂ ಮೊದಲು ಅವರು ತಮ್ಮ ಪ್ರೀತಿಯ ಪ್ರಾಜೆಕ್ಟ್ ಗೆ ಹೆಸರಿಡಲು ಅದೆಷ್ಟು ಒದ್ದಾಡಿರಬೇಕೆಂದರೆ ಅದೇ ಕಥೆಯನ್ನೇ ಎರಡು ಸಿನಿಮಾ ಮಾಡಬಹುದಿತ್ತೇನೋ!ಕಾನ್ಫಿಡೆಂಟ್ ಗ್ರೂಫ್ ನ ’ಡಾ ರಾಯ್ ಸಿಜೆ’ ಎಂಬ ನಿರ್ಮಾಪಕರು ನಿರ್ಮಿಸಿದ ಈ ಚಿತ್ರ, ಅವರಿಗೆ ಸಿನಿಮಾ ಒಂದು ಬಿಸಿನೆಸ್ ಅಷ್ಟೇ ಎಂಬುದನ್ನು ಸೂಚಿಸುವಂತಿದೆ. ಹೋಗಲಿ, ಕವಿತಾ ಅವರಿಗಾದರೂ ಈ ಮೊದಲು ಇದ್ದ ಸಿನಿಮಾ ಪ್ರೀತಿ ಮಾಯವಾಗಿದ್ದು ಯಾಕೆ ಎಂಬುದೇ ಯಕ್ಷ ಪ್ರಶ್ನೆ!ಈ ಮೊದಲು ಬಂದಿದ್ದ ತಮ್ಮ ’ಪ್ರೀತಿ ಪ್ರೇಮ ಪ್ರಣಯ’ ಚಿತ್ರದಂತೆ ಇಲ್ಲೂ ಕೆಲವು ಒಳ್ಳೆಯ ಮೆಸೇಜ್ ಗಳನ್ನು ಕೊಡುವ ಯೋಚನೆ ಅವರಿಗಿತ್ತೇನೋ! ಆದರೆ ಅದು ಈ ಕ್ರೇಜಿಲೋಕದ ಮೂಲಕ ಈಡೇರಿಲ್ಲ. ಕವಿತಾ ಲಂಕೇಶ್ ಅವರು ಇದಕ್ಕಿಂತ ಬಹಳಷ್ಟು ಒಳ್ಳೆಯ ಚಿತ್ರಗಳನ್ನು ನೀಡುವ ಸಾಮರ್ಥ್ಯವುಳ್ಳವರು. ಆದರೂ ’ಏಕೆ ಹೀಗಾಯ್ತೋ.... ಪ್ರೇಕ್ಷಕರು ಕಾಣರು!
ಚಿತ್ರಕ್ಕೆ ಗಟ್ಟಿಯಾದ ಕಥೆಯೇ ಇಲ್ಲ ಎಂದಮೇಲೆ ಹೇಳುವುದೇನನ್ನು? ’ಪ್ರೇಮಿಸಲು ಹಾಗೂ ವಿದ್ಯೆ ಕಲಿಯಲು ವಯಸ್ಸಿನ ಹಂಗಿಲ್ಲ’ ಎಂಬುದು ಚಿತ್ರದ ಮೆಸೇಜು ಹಾಗೂ ಒನ್ ಲೈನ್ ಸ್ಟೋರಿಯ ತಿರುಳು. ಪಾತ್ರಗಳ ಬಗ್ಗೆ, ಪಾತ್ರಧಾರಿಗಳ ಆಯ್ಕೆ ಬಗ್ಗೆ ಕವಿತಾರನ್ನು ದೂರುವಂತಿಲ್ಲ. ಅವರ ಚಿತ್ರದ ಶೀರ್ಷಿಕೆಗೆ, ಪಾತ್ರಗಳಿಗೆ ಸೂಕ್ತವಾದವರನ್ನೇ ಆಯ್ಕೆ ಮಾಡಿದ್ದಾರೆ. ಹಿಂದಿನ ಚಿತ್ರದ ನಂಟಿಗೆ ಉದಾಹರಣೆ ಎಂಬಂತೆ ಕ್ರೇಜಿಲೋಕದಲ್ಲಿ ಭಾರತಿ ವಿಷ್ಣುವರ್ಧನ್ ಇದ್ದಾರೆ.ಇನ್ನು ಅಭಿನಯದ ಬಗ್ಗೆ ಹೇಳುವುದಾದರೆ, ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಅವರ ಜೋಡಿಯಾಗಿ ನಟಿಸಿರುವ ಡೈಸಿ ಬೋಪಣ್ಣ (ಸ್ಪೈಸಿ ಬೋಪಣ್ಣ..!) ಇಬ್ಬರೂ ತಮಗೊಪ್ಪುವ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಭಾರತಿಯವರ ಪಾತ್ರವೇ ವಿಚಿತ್ರ, ಅದಕ್ಕೆ ತಕ್ಕ ಅಭಿನಯ ಅವರದು. ಅವಿನಾಶ್ ಹಾಗೂ ನೀನಾಸಂ ಅಶ್ವಥ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಮ್ಯಾ ಒಂದು ಹಾಡಿಗೆ ಮಾತ್ರ ಸೀಮಿತ. ಅದನ್ನು ಚಿತ್ರಕ್ಕೆ ಅನಾವಶ್ಯಕವಾಗಿ ಎಳೆದುತಂದಂತಿದೆ.

ಸೀನಿಯರ್ ನಟ-ನಟಿಯರ ಮಧ್ಯೆ ಯುವಜೋಡಿಯಾಗಿ ನಟಿಸಿರುವ ನವನಟ ಸೂರ್ಯ ಹಾಗೂ ಹರ್ಷಿಕಾ ಪೂಣಚ್ಚ ಇಬ್ಬರೂ ಸಖತ್ ಆಕ್ಟೀವ್. ಆದರೆ ಅಭಿನಯವೇನೆಂಬುದು ಗೊತ್ತಿಲ್ಲ. ಕೆಲವು ಬಾರಿ ಕೈ-ಕಾಲು, ಹಲವು ಬಾರಿ ದೇಹವನ್ನು ಅಲ್ಲಾಡಿಸಿಬಿಟ್ಟರೆ ಅದನ್ನು ’ಅಭಿನಯ’ ಎಂದು ಅವರಿಗೆ ಹೇಳಿದವರ್ಯಾರೋ! ಇಬ್ಬರೂ ತಮಗೆ ಕಣ್ಣು ಇರುವುದನ್ನೇ ಮರೆತಿದ್ದಾರೆ. ಬಾಯಿಯನ್ನೇ ಬ್ರಹ್ಮಾಸ್ತ್ರ ಮಾಡಿಕೊಂಡು ಸುತ್ತಲೂ ತಿರುಗಿಸುತ್ತಾರೆ.ಮಣಿಕಾಂತ್ ಕದ್ರಿ ಸಂಗೀತ, ಕೆಂಪರಾಜು ಸಂಕಲನ ಹಾಗೂ ಎಸಿ ಮಹೇಂದ್ರನ್ ಕ್ಯಾಮರಾ ಕೆಲಸವನ್ನು ’ಫಿಪ್ಟಿ-ಫಿಪ್ಟಿ’ ಎನ್ನಬಹುದು. ಎ ಹರ್ಷ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಚೆನ್ನಾಗಿದೆ. ಕ್ರೇಜಿಲೋಕದ ನಿರ್ಮಾಣ ಮಾಡಿರುವುದು ’ಕಾನ್ಫಿಡೆಂಟ್ ಗ್ರೂಫ್’ ಆಗಿದ್ದರೂ ದೃಶ್ಯವೈಭವ ಅಷ್ಟಕಷ್ಟೇ. ನಿರ್ಮಾಪಕರು ಹಾಗೂ ನಿರ್ದೇಶಕರು ಇಡೀ ಚಿತ್ರವನ್ನು ಅವರಿಗಿದ್ದ ಸಾಮರ್ಥ್ಯ ಬಳಸಿಕೊಂಡು ಬಹಳಷ್ಟು ಚೆನ್ನಾಗಿ ಮಾಡಬಹುದಿತ್ತು ಎಂದೆನಿಸದಿರದು. ಹೇಳಲೇಬೇಕಾಗಿರುವ ವಿಷಯವೆಂದರೆ ಈ ಮೊದಲು ಕ್ರೇಜಿಲೋಕ ಬಾಲಿವುಡ್ ಚಿತ್ರವೊಂದರ ಸ್ಪೂರ್ತಿ ಎನ್ನಲಾಗಿತ್ತು. ಆದರೆ ಶಾರುಖ್ ಖಾನ್ ’ಮೈ ಹೂಂ ನಾ’ ಚಿತ್ರದ ಛಾಯೆ ಅಲ್ಲಲ್ಲಿ ಕಂಡುಬರುತ್ತದೆ ಎಂಬುದನ್ನು ಬಿಟ್ಟರೆ ಬಾಲಿವುಡ್ ನಲ್ಲಿ ಇಂಥಹ ಒಂದು ಚಿತ್ರವೂ ಇರಬಹುದೆಂಬ ಯಾವ ಸಂಶಯಕ್ಕೂ ಆಸ್ಪದವಿಲ್ಲ. ಕವಿತಾ ಲಂಕೇಶ್ ಕಲ್ಪನೆ ಈ ಬಾರಿ ಅವರಿಗೆ ಕೈಕೊಟ್ಟಿದೆ. ಒಳ್ಳೆಯ, ಮುಂದಿನ ಚಿತ್ರವನ್ನು ಶೀಘ್ರವೇ ಅವರಿಂದ ನಿರೀಕ್ಷಿಸಬಹುದೇನೋ...!

’ಈಗ’ ಸಿನಿಮಾ ಹೇಗಿದೆ


’ನಮ್ಮೂರಲ್ಲಿ ಗಂಟೆ ಹೊಡೀಬೇಕು, ಪಕ್ಕದ ಊರಲ್ಲಿ ತಮಟೆನೂ ಹೊಡಿಬೇಕು’ ಎಂದು ಕನ್ನಡದ ಡೈಲಾಗ್ ಮೂಲಕ ಅಭಿನಯ ಚಕ್ರವರ್ತಿ ಸುದೀಪ್, ತೆರೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡುತ್ತಾರೆ.ಸಾಮಾನ್ಯವಾಗಿ ಕನ್ನಡ ಚಿತ್ರಗಳಲ್ಲಿ ಹಿಂದಿ, ತಮಿಳು, ತೆಲುಗು ಇತರ ಭಾಷೆಗಳನ್ನು ಬಳಸುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ತೆಲುಗು ಚಿತ್ರದಲ್ಲಿ ಕನ್ನಡ ಪದ ಬಳಕೆ ಮಾಡಿಕೊಂಡಿರುವ ಉದಾಹರಣೆ ಎಲ್ಲೋ ಅಪರೂಪ.  ’ಈಗ’ ಚಿತ್ರದಲ್ಲಿ ಸುದೀಪ್ ಕನ್ನಡದಲ್ಲಿ ಕೆಲ ಡೈಲಾಗ್ ಗಳನ್ನು ಹೇಳಿ ಕನ್ನಡತನ ಮೆರೆದಿದ್ದಾರೆ.ಈಗ ಚಿತ್ರದ ಕಥೆ ಹೇಳಿದ್ದರೂ ಎರಡು ತಾಸು ಸೀಟಿನಲ್ಲಿ ಕೂರುವಂತೆ ಮಾಡಿದ್ದಾರೆ ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ. ಇಬ್ಬರು ಪ್ರೇಮಿಗಳ ನಡುವೆ (ನಾಣಿ, ಸಮಂತಾ) ಖಳನಾಯಕ (ಸುದೀಪ್) ಎಂಟ್ರಿ ಕೊಡುತ್ತಾರೆ. ಮೊದಲಿಗೆ ಮೈಂಡ್ ಗೇಮ್ ನಿಂದ ಆಟವಾಡುವ ಸುದೀಪ್, ನಂತರ ಹುಡುಗನನ್ನು ಕೊಲ್ಲುತ್ತಾನೆ. ಹುಡುಗ ನೊಣವಾಗಿ ಹುಟ್ಟಿಬಂದು ವಿಲನ್ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ. ಇದು ಚಿತ್ರದ ಸ್ಟೋರಿ.ಚಿತ್ರ ಆರಂಭವಾದ ೨೦ ನಿಮಿಷದಲ್ಲೇ ಪ್ರೇಮಿಗಳ ಪ್ರೇಮಕಥೆ ಅಂತ್ಯಗೊಳ್ಳುತ್ತದೆ. ಅದರ ನಡುವೆಯೂ ಸುದೀಪ್ ಬರುತ್ತಾರೆ. ಸುದೀಪ್ ನಾಯಕನನ್ನು ಕೊಂದ ನಂತರ ಚಿತ್ರ ಮತ್ತಷ್ಟು ಇಂಟರೆಸ್ಟಿಂಗ್ ಆಗಿ ಸಾಗುತ್ತದೆ. ನಾಯಕ ಸತ್ತ ನಂತರ ಆತನ ಆತ್ಮ ನೊಣದ ರೂಪದಲ್ಲಿ ಬಂದು ಸುದೀಪ್ ರನ್ನು ಇನ್ನಿಲ್ಲದಂತೆ ಕಾಡತೊಡಗುತ್ತದೆ. ಕೊನಗೆ ಸುದೀಪ್ ರನ್ನು ಕೊಂದು ಸೇಡು ತೀರಿಸಿಕೊಳ್ಳುತ್ತದೆ.

ನೊಣವನ್ನು ಇಟ್ಟುಕೊಂಡು ಇಂಥ ಅಪರೂಪದ ಚಿತ್ರವನ್ನು ನಿರ್ಮಿಸಿದ ನಿರ್ದೇಶಕ ರಾಜಮೌಳಿ ಅವರಿಗೆ ಹ್ಯಾಟ್ಸಾಫ್ ಹೇಳಲೇಬೇಕು. ಚಿತ್ರದ ಕಥೆ ಮೊದಲೇ ಗೊತ್ತಿದ್ದರೂ ಸೀಟಿನ ಎಡ್ಜ್ ನಲ್ಲಿ ಕೂರುವಂತೆ ಮಾಡಿದ್ದಾರೆ ನಿರ್ದೇಶಕರು.ಚಿತ್ರದಲ್ಲಿರುವ ಎರಡು ಹಾಡುಗಳು ಮನ ಮುಟ್ಟುವಂತಿದೆ. ಹಿನ್ನಲೆ ಸಂಗೀತದಲ್ಲಿ ಕೀರವಾಣಿ ಕೆಲಸ ಜೋರಾಗಿದೆ. ಸುದೀಪ್ ಮತ್ತು ನೊಣ ಚಿತ್ರದ ಹೀರೋಗಳೆಂದರೆ ತಪ್ಪಾಗುವುದಿಲ್ಲ. ಅಷ್ಟರ ಮಟ್ಟಿಗೆ ಸುದೀಪ್ ಮತ್ತು ನೊಣ ಚಿತ್ರವನ್ನು ಆವರಿಸಿಕೊಂಡಿದ್ದಾರೆ.ನಾಯಕ ನಾಣಿ ಪಾತ್ರ ಚಿಕ್ಕದಾದರೂ ಚೊಕ್ಕದಾಗಿದೆ. ನಾಯಕಿ ಸುಮಂತಾ ನಟನೆ ತಂಪಾದ ಗಾಳಿಯಂತೆ ಮುದ ನೀಡುತ್ತದೆ. ಸುಮಾರು ಮೂವತ್ತು ಕೋಟಿ ರೂಪಾಯಿ ವೆಚ್ಚದ ಈ ಚಿತ್ರದ ಗ್ರಾಫಿಕ್ಸ್ ಕೆಲಸವೂ ಮಿಳಿತ ಗೊಂಡಿರುವುದರಿಂದ ಚಿತ್ರ ಅದ್ದೂರಿಯಾಗಿದೆ.ಸುದೀಪ್ ಒನ್ ಮ್ಯಾನ್ ಶೋ ಎಂದು ಹೇಳಬಹುದಾದ ಚಿತ್ರದಲ್ಲಿನ ಸುದೀಪ್ ನಟನೆ ಸೂಪರ್. ಚಿತ್ರದಲ್ಲಿನ ಅವರ ನೋಟ, ಡೈಲಾಗ್ ಡೆಲಿವರಿ, ಬಾಡಿ ಲಾಂಗ್ವೇಜ್ ಮೂಲಕ ಅವರ ಅಮೋಘ ಅಭಿನಯವನ್ನು ನೋಡಿದರೆ,  ಆ ಜಾಗದಲ್ಲಿ ಸುದೀಪ್ ಹೊರತಾಗಿ ಬೇರೊಬ್ಬರನ್ನು ಕಲ್ಪಿಸಿ ಕೊಳ್ಳಲಾಗದಷ್ಟು ಅವರು ಪಾತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಸುದೀಪ್ ಈ ಪಾತ್ರದಲ್ಲಿ ನಟಿಸಲು ಒಪ್ಪದಿದ್ದರೆ ಚಿತ್ರವನ್ನೇ ಕೈಬಿಡಲು ನಿರ್ಧರಿಸಿದ್ದ ರಾಜಮೌಳಿ ಅವರ ಬೆಟ್ಟದಷ್ಟು ನಿರೀಕ್ಷೆಗೆ ಮೀರಿ ಅಭಿನಯಿಸಿದ ಸುದೀಪ್ ನಿರ್ದೇಶಕರಿಗೆ ಒಳ್ಳೆ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಬಹಳಷ್ಟು ದೃಶ್ಯಗಳಲ್ಲಿ ಸುದೀಪ್ ಕನ್ನಡದಲ್ಲೇ ಗೊಣಗುವ ದೃಶ್ಯಗಳಿವೆ.

ಅದ್ದೂರಿ ಸಿನಿಮಾ ಹೇಗಿದೆ


* ಶ್ರೀರಾಮ್ ಭಟ್
ಎ ಪಿ ಅರ್ಜುನ್ ನಿರ್ದೇಶನದ ’ಅದ್ದೂರಿ’ ಚಿತ್ರವನ್ನು ಒಳ್ಳೆಯ ’ಲವ್ ಸ್ಟೋರಿ’ ಸಿನಿಮಾ ಎನ್ನಬಹುದು. ಈ ಮೊದಲು ’ಅಂಬಾರಿ’ ಎಂಬ ಸೂಪರ್ ಹಿಟ್ ಚಿತ್ರ ಕೊಟ್ಟಿದ್ದ ನಿರ್ದೇಶಕ ಅರ್ಜುನ್, ಈಗ ’ಅದ್ದೂರಿ’ ಎಂಬ ಚಿತ್ರವನ್ನು ಸಿನಿಪ್ರೇಕ್ಷಕರ ಮುಂದಿಟ್ಟಿದ್ದಾರೆ. ಚಿತ್ರದ ಅಡಿಬರಹದಂತೆ ಇದೊಂದು ಒಳ್ಳೆಯ ಅಚ್ಚು-ರಚ್ಚು ಲವ್ ಸ್ಟೋರಿ. ಕಾಸು ಕೊಟ್ಟು ನೋಡುವ ಪ್ರೇಕ್ಷಕರಿಗೆ ನಿರಾಸೆ ಮೂಡಿಸುವುದಿಲ್ಲ, ಒಮ್ಮೆ ನೋಡುವಂತಹ ಸಿನಿಮಾಶಂಕರ್ ರೆಡ್ಡಿ ಹಾಗೂ ಕೀರ್ತಿ ಸ್ವಾಮಿ ನಿರ್ಮಾಣದ ’ಅದ್ದೂರಿ’ ಚಿತ್ರ ಬಿಡುಗಡೆಗಿಂತ ಮೊದಲು ಸಾಕಷ್ಟು ನಿರೀಕ್ಷೆ ಹಾಗೂ ಕುತೂಹಲ ಮೂಡಿಸಿತ್ತು. ನಿರೀಕ್ಷೆಗೆ ಕಾರಣ, ನಿರ್ದೇಶಕ ಎ ಪಿ ಅರ್ಜುನ್ ಈ ಮೊದಲಿನ ಅಂಬಾರಿ ಯಶಸ್ಸು. ಹಾಗೇ ಕುತೂಹಲಕ್ಕೆ ಕಾರಣ, ಚಿತ್ರದ ನಾಯಕ ಅರ್ಜುನ್ ಸರ್ಜಾ ಕುಟುಂಬದ ಕುಡಿ, ನಾಯಕನಟ ಚಿರಂಜೀವಿ ಸರ್ಜಾ ತಮ್ಮ ಧ್ರುವ ಸರ್ಜಾ. ಈ ಇಬ್ಬರೂ ತಮ್ಮ ಮೇಲಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಅದ್ದೂರಿ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ-ನಿರ್ದೇಶನ ಎಲ್ಲವೂ ಎಪಿ ಅರ್ಜುನ್ ಅವರದು. ಚಿತ್ರದ ಕಥೆ ಮಾಮೂಲಿ ಲವ್ ಸ್ಟೋರಿ ಅಷ್ಟೇ. ಕಥೆಯಲ್ಲೇನೂ ಹೊಸತನವಿಲ್ಲ. ಈ ರೀತಿಯ ಚಿತ್ರಗಳು ಅದೆಷ್ಟೋ ಬಂದುಹೋಗಿವೆ. ಆದರೆ ಚಿತ್ರವನ್ನು ಚಿತ್ರಕಥೆ ಹಾಗೂ ಸಂಭಾಷಣೆಯಲ್ಲಿ ನಿರ್ದೇಶಕರು ಕಟ್ಟಿಕೊಟ್ಟಿರುವ ರೀತಿ ಚೆನ್ನಾಗಿದೆ. ಮೊದಲಿನಿಂದ ಕೊನೆಯವರೆಗೂ ನಿರ್ದೇಶಕ ಅರ್ಜುನ್ ಅವರಿಗೆ ಚಿತ್ರದ ನಿರೂಪಣೆಯ ಮೇಲೆ ಇರುವ ಬಿಗಿಹಿಡಿತ ಎದ್ದುಕಾಣುತ್ತದೆ. ಸಂಭಾಷಣೆ ಸೂಪರ್.ಮಾಮೂಲಿ ಪ್ರೇಮಕಥೆಯೊಂದನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ಚಿತ್ರಕಥೆ ಹೆಣೆದು, ಅದಕ್ಕೆ ಪೂರಕವಾದ ಸಂಭಾಷಣೆ, ಸಾಹಿತ್ಯ, ನಿರೂಪಣೆಯ ಮೂಲಕ ಕಟ್ಟಿಕೊಟ್ಟ ಅರ್ಜುನ್ ಪ್ರಯತ್ನಕ್ಕೆ ’ಭೇಷ್’ ಎನ್ನಲೇಬೇಕು. ಮೊದಲ ಚಿತ್ರ ಅಂಬಾರಿಯಲ್ಲಿ ಮೂಡಿಸಿದ್ದ ಭರವಸೆಯನ್ನು ಉಳಿಸಿಕೊಂಡಿದ್ದಾರೆ ಅರ್ಜುನ್. ಹೊಸ ಪ್ರಯತ್ನಕ್ಕೆ ಕೈಹಾಕದಿದ್ದರೂ ಮಾಡಿರುವ ಚಿತ್ರ ಚೆನ್ನಾಗಿದೆ, ಕೊಟ್ಟ ಕಾಸಿಗೆ ಮೋಸವಿಲ್ಲ. ದೋಷವೇ ಇಲ್ಲವೆಂದಲ್ಲ, ಆದರೆ ಚಿತ್ರ ಎಲ್ಲೂ ಬೋರೆನಿಸುವುದಿಲ್ಲ.

ಮಕ್ಕಳಿಂದ ಮುದುಕರವೆರೆಗೂ, ಕುಟುಂಬದಿಂದ ಸಮಾಜದವೆರೆಗೂ ಜಗಳ, ಮನಸ್ತಾಪಗಳು ಇದ್ದದ್ದೇ. ಅವುಗಳ ಜೊತೆಯೇ ಬದುಕಿಯೂ ಪ್ರೀತಿ-ಪ್ರೇಮಗಳು, ನವಿರಾದ ಸಂಬಂಧಗಳು ಕೆಲವೊಮ್ಮೆ ಚದುರಿಯೂ ನಲುಗಿಯೂ ಹೇಗೆ ಉಳಿದುಕೊಳ್ಳುತ್ತವೆ ಎಂಬುದು ಒನ್ ಲೈನ್ ಸ್ಟೋರಿ. ಚಿತ್ರದ ಪೂರ್ತಿ ಕಥೆಯನ್ನು ವಿಮರ್ಶೆಯಲ್ಲಿ ಹೇಳಿದರೆ ನೋಡಬೇಕಾದ ಪ್ರೇಕ್ಷಕರು ಹೋಗಿ ನೋಡುವುದೇನು? ಹೀಗಾಗಿ ಚಿತ್ರವನ್ನು ತೆರೆಯಲ್ಲಿ ನೋಡಿ ಆನಂದಿಸಿ ಎನ್ನುವುದೇ ಸೂಕ್ತ.ಕಲಾವಿದರ ನಟನೆಗೆ ಬಂದರೆ ನಾಯಕಿ ರಾಧಿಕಾ ಪಂಡಿತ್ ಬಗ್ಗೆ ಎರಡು ಮಾತಿಲ್ಲ. ಚಿತ್ರದುದ್ದಕ್ಕೂ ಲವಲವಿಕೆ ಕಾಪಾಡಿಕೊಂಡಿರುವ ರಾಧಿಕಾ ನಟನೆ ಎಂದಿನಂತೆ ಲೀಲಾಜಾಲ. ನಟನೆ ವಿಷಯದಲ್ಲಿ ರಾಧಿಕಾ ಫುಲ್ ಪ್ಯಾಕೇಜ್. ಚಿತ್ರ ನೋಡಿ ಈಚೆ ಬಂದರೆ ಹೆಚ್ಚು ಉಳಿಯುವುದು ರಾಧಿಕಾ ನೆನಪು ಮಾತ್ರ. ಮೊದಲ ಬಾರಿಗೆ ತೆರೆಯ ಮೇಲೆ ಬಂದಿರುವ ಧ್ರುವ ಸರ್ಜಾ ಫೈಟ್ಸ್, ಡಾನ್ಸ್ ಸೂಪರ್. ಸಂಭಾಷಣೆ ಹೇಳುವ ರೀತಿಯೂ ಈ ಪ್ರೇಮಕಥೆಗೆ ಪೂರಕ. ಎಕ್ಸ್ ಟ್ರಾ ಎನರ್ಜಿ ಹಾಗೂ ಲವಲವಿಕೆಯಿದ್ದರೂ ನಟನೆ ಓಕೆ, ಇನ್ನೂ ಪಳಗಬೇಕು ಎನ್ನಬಹುದು. ಮೊದಲ ಚಿತ್ರವಾದ್ದರಿಂದ ಪರವಾಗಿಲ್ಲ.

ಅತಿಥಿ ಪಾತ್ರದಲ್ಲಿ ಕಾಣಿಸಿಕೊ೦ಡಿರುವ ನಟ ತರುಣ್ ಅಭಿನಯ ಚಿತ್ರಕ್ಕೆ ಬೋನಸ್. ಚಿಕ್ಕ ಪಾತ್ರದಲ್ಲೂ ತೆರೆಯ ಮೇಲಿರುವಷ್ಟೂ ಹೊತ್ತು ತರುಣ್ ಎಲ್ಲರ ಗಮನಸೆಳೆಯುತ್ತಾರೆ. ಇನ್ನು ಪೋಷಕವರ್ಗದಲ್ಲಿ ನಟಿಸಿರುವ ತಬಲಾ ನಾಣಿ, ಬುಲೆಟ್ ಪ್ರಕಾಶ್, ನೀನಾಸಂ ಸತೀಶ್ ಹಾಗೂ ರಾಜು ತಾಳಿಕೋಟೆ ಅವರದು ಪಾತ್ರಕ್ಕೆ ತಕ್ಕ ಪೋಷಣೆ. ಪಾತ್ರಗಳಿಗೆ ತಕ್ಕ ಕಲಾವಿದರ ಆಯ್ಕೆಯಲ್ಲೂ ನಿರ್ದೇಶಕ ಅರ್ಜುನ್ ಜಾಣತನ ಮೆರೆದಿದ್ದಾರೆ.ಅರ್ಜುನ್ ಸಾಹಿತ್ಯದ ಎಲ್ಲಾ ಹಾಡುಗಳಿಗೆ ವಿ ಹರಿಕೃಷ್ಣ ಸಂಗೀತ ಸಂಯೋಜನೆ ಪೂರಕವಾಗಿದೆ. ’ಅಮ್ಮಾಟೆ...’ ಹಾಡು ಚಿತ್ರಮಂದಿರದಲ್ಲಿ ಮಾಸ್ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗೆ ಸಾಕ್ಷಿಯಾಗುತ್ತದೆ. ಉಳಿದ ಹಾಡುಗಳೂ ಕೇಳುವಂತಿದ್ದು ಚಿತ್ರಕ್ಕೆ ಸಾಥ್ ನೀಡುವಲ್ಲಿ ಸಫಲವಾಗಿವೆ. ಎ ಹರ್ಷ ಹಾಗೂ ಇಮ್ರಾನ್ ಸರ್ದಾರಿಯಾ ಕೋರಿಯೋಗ್ರಫಿ, ಸೂರ್ಯ ಎಸ್ ಕಿರಣ್ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಸಂಕಲನ ಮೆಚ್ಚುವಂತಿದೆ.ಒಟ್ಟಿನಲ್ಲಿ ಹೊಸ-ಹಳಬರ ಅರ್ಜುನ್ ತಂಡ, ಸ್ಯಾಂಡಲ್ ವುಡ್ ಪ್ರೇಕ್ಷಕರು ನೋಡುವಂತಹ ಸಿನಿಮಾವೊಂದನ್ನು ’ಅದ್ದೂರಿ’ ಎಂಬ ಹೆಸರಿನಲ್ಲಿ ತಂದಿದ್ದಾರೆ. ಈ ಚಿತ್ರದ ಮೂಲಕ ’ಧ್ರುವ ಸರ್ಜಾ’ ಎಂಬ ಹೊಸ ನಾಯಕನಟನ ಉದಯವಾಗಿದೆ ಎಂದರೆ ಆಶ್ಚರ್ಯವೇನೂ ಇಲ್ಲ. ಅದ್ದೂರಿಯ ಮೂಲಕ ನಿರ್ದೇಶಕ ಎಪಿ ಅರ್ಜುನ್ ಇನ್ನೂ ಒಂದು ಸ್ಟೆಪ್ ಮೇಲೇರುವುದು ಗ್ಯಾರಂಟಿ ಎಂದು ಧಾರಾಳವಾಗಿ ಹೇಳಬಹುದು.

Sunday 8 July 2012

ರೋಮಿಯೋ!ಸಿನಿಮಾ ಹೇಗಿದೆ!


 * ಉದಯರವಿ
ಗೋಲ್ಡನ್ ಸ್ಟಾರ್ ಗಣೇಶ್ ಭವಿಷ್ಯ ಏನಾಗುತ್ತದೋ ಏನೋ ಎಂದುಕೊಂಡಿದ್ದವರಿಗೆ ’ರೋಮಿಯೋ’ ಚಿತ್ರ ಉತ್ತರ ನೀಡಿದೆ. ಸೂತ್ರಹರಿದ ಗಾಳಿಪಟದಂತಾಗಿದ್ದ ಗಣೇಶ್ ವೃತಿಬದುಕಿಗೆ ’ರೋಮಿಯೋ’ ಹೊಸ ದಿಕ್ಕು ನೀಡಿದೆ. ಬಾಕ್ಸಾಫೀಸಲ್ಲಿ ಸದ್ದು ಮಾಡುವ ಎಲ್ಲ ಲಕ್ಷಣಗಳೂ ಚಿತ್ರಕ್ಕಿವೆ.ಚಿತ್ರದ ಹೆಸರು ’ರೋಮಿಯೋ’ ಎಂದಿದ್ದರೂ ಗಣೇಶ್ ಇಲ್ಲಿ ಭಗ್ನಪ್ರೇಮಿಯಲ್ಲ. ಎಲ್ಲರನ್ನೂ ನಕ್ಕು ನಲಿಸುವ ಕಾಮಿಡಿ ಪ್ರೇಮಿ. ಈ ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ಅದು ನಿಸ್ಸಂದೇಹವಾಗಿ ಕಾಮಿಡಿ. ಗಣೇಶ್ ಕಾಮಿಡಿ ಟೈಂ ಇಲ್ಲಿ ಗೆದ್ದಿದೆ. ಅವರ ವೃತ್ತಿಜೀವನದಲ್ಲಿ ಕಾಮಿಡಿ ಟೈಂ ಮತ್ತೆ ಅವರ ಕೈಹಿಡಿದು ಗೋಲ್ಡನ್ ಡೇಸ್ ಗೆ ಮರಳಿಸುವ ಎಲ್ಲ ಸೂಚನೆಗಳನ್ನು ನೀಡಿದೆ.ಚಿತ್ರದ ನಾಯಕನ ಹೆಸರು ಗಣೇಶ್. ಇವನು ಪಕ್ಕಾ ಮಾಸ್. ಆದರೆ ಹೈಕ್ಲಾಸ್ ಹುಡುಗನಂತೆ ಲೀಲಾಜಾಲವಾಗಿ ಅಭಿನಯಿಸಿ ದಂತದಗೊಂಬೆಯಂತಹ ಶ್ರುತಿ (ಭಾವನಾ) ಎಂಬ ಹುಡುಗಿಗೆ ಬಲೆ ಬೀಸುತ್ತಾನೆ. ಇವನ ಪ್ರೇಮದ ಬಲೆಗೆ ಬಂಗಾರದ ಜಿಂಕೆ ಸುನಾಯಾಸವಾಗಿ ಬೀಳುತ್ತದೆ. ಮದುವೇನೂ ಆಗುತ್ತದೆ.

ಕಡೆಗೆ ಕೈಹಿಡಿದವನ ಮನೆಗೆ ಬಂದಾಗ ಅವನ ಅಸಲಿ ಕತೆ ಗೊತ್ತಾಗುತ್ತದೆ. ಶಿವರಾತ್ರಿ ಮನೆಗೆ ಏಕಾದಶಿ ಬಂದಂಗಾಗುತ್ತದೆ. ಬಾಯಿಬಿಟ್ಟರೆ ಟಾಟಾ, ಬಿರ್ಲಾ, ಅಂಬಾನಿ ಎನ್ನುತ್ತಿದ್ದನ ಬಣ್ಣ ಬಯಲಾಗುತ್ತದೆ. ಅಲ್ಲಿಂದ ನಾಯಕಿ ತವರುಮನೆ ಬಾಗಿಲು ತಟ್ಟುತ್ತಾಳೆ. ಇಬ್ಬರೂ ದೂರಾಗಲು ಡಿವೋರ್ಸ್ ಗೆ ಮೊರೆಹೋಗುತ್ತಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ಇಬ್ಬರೂ ದೂರಾಗುತ್ತಾರೆ.ಕತೆ ಅಲ್ಲಿಗೆ ಮುಗಿಯುವುದಿಲ್ಲ. ಹೊಸ ತಿರುವು ಪಡೆದುಕೊಳ್ಳುತ್ತದೆ. ಬಳಿಕ ಮುಂದೇನಾಗುತ್ತದೆ ಎಂಬುದೇ ಕಥಾವಸ್ತು. ಇದನ್ನು ನೀಟಾಗಿ ತೆರೆಗೆ ತರುವಲ್ಲಿ ನಿರ್ದೇಶಕ ಪಿ.ಸಿ. ಶೇಖರ್ ಅವರ ಶ್ರಮ ಎದ್ದುಕಾಣುತ್ತದೆ. ಇದಕ್ಕೆ ಸಾಥ್ ನೀಡಿರುವುದು ನಟರಾಜ್ ಅವರ ಪಂಚಿಂಗ್ ಡೈಲಾಗ್ಸ್.ಅವರ ಹಿಂದಿನ ಚಿತ್ರಗಳಿಗಿಂತ ಇಲ್ಲಿ ಗಣೇಶ್ ಲವಲವಿಕೆಯಿಂದ ಅಭಿನಯಿಸಿರುವುದು ಗಮನಾರ್ಹ. ಗಂಭೀರವಾಗಿ ಕಾಣುವ ಹುಡುಗಿ ಪಾತ್ರದಲ್ಲಿ ಭಾವನಾ ಅವರ ಅಭಿನಯ ಕೂಡ ತಾಜಾತನದಿಂದ ಕೂಡಿದೆ. ಭಾವನಾತ್ಮಕ ಸನ್ನಿವೇಶಗಳಲ್ಲಿ, ಹಾಸ್ಯರಸ ಉಕ್ಕಿಸುವಲ್ಲಿ ಗಣೇಶ್ ಅಭಿನಯ ಲೀಲಾಜಾಲ.

ಗಣೇಶ್ ಅವರ ತಂದೆತಾಯಿಯಾಗಿ ರಂಗಾಯಣ ರಘು ಹಾಗೂ ಸುಧಾ ಬೆಳವಾಡಿ ಪಾತ್ರ ಪೋಷಣೆ ಚಿತ್ರಕ್ಕೆ ಒಂದು ಚೌಕಟ್ಟನ್ನು ಒದಗಿಸಿದೆ. ಸೀರಿಯಸ್ ಅಲ್ಲದ ಅಪ್ಪಅಮ್ಮನ ಪೋಷಕ ಪಾತ್ರಗಳಲ್ಲಿ ಇಬ್ಬರೂ ಜಿದ್ದಿಗೆ ಬಿದ್ದಂತೆ ಅಭಿನಯಿಸಿದ್ದಾರೆ.ರಂಗಾಯಣ ರಘು ಹಾಗೂ ಸಾಧು ಕೋಕಿಲ ಅವರ ಸಮಯೋಚಿತ ಕಾಮಿಡಿ ಮತ್ತೊಂದು ಹೈಲೈಟ್. ಬೆಲ್ಲಕ್ಕೆ ತಾಟಿ ಬೆಲ್ಲ ಸೇರಿಸಿದಂತೆ ಅವರಿಬ್ಬರ ಕಾಮಿಡಿ ಬೆರೆತುಹೋಗಿದೆ. ಈ ಚಿತ್ರದ ಮೂಲಕ ರಂಗಾಯಣ ರಘು ಹಾಗೂ ಸಾಧು ಕೋಕಿಲ ತಮ್ಮ ಕಾಮಿಡಿ ವರಸೆಗಳನ್ನು ಬದಲಾಯಿಸಿರುವುದು ವಿಶೇಷ. ಅವರ ಎಂದಿನ ಶೈಲಿ ನೋಡಿ ನೋಡಿ ಸಾಕಾಗಿದ್ದ ಪ್ರೇಕ್ಷಕರು ಇಲ್ಲಿ ಹೊಟ್ಟೆ ತುಂಬ ನಗಬಹುದು.ಅರ್ಜುನ್ ಜನ್ಯ ಸಂಗೀತ ಪಾಂಚಜನ್ಯದಂತೆ ಮೊಳಗಿದೆ. ’ನಾಯಕ’ ಚಿತ್ರದ ಬಳಿಕ ಪಿಸಿ ಶೇಖರ್ ಗೆ ಇದು ಎರಡನೇ ಚಿತ್ರವಾದರೂ ಕತೆ, ಚಿತ್ರಕತೆ ಹಾಗೂ ನಿರ್ದೇಶನದ ಜವಾಬ್ದಾರಿಗಳನ್ನು ನೀಟಾಗಿ ನಿಭಾಯಿಸಿದ್ದಾರೆ. ವೈದಿ ಎಸ್ ಅವರ ಛಾಯಾಗ್ರಹಣ ಕಣ್ಣಿಗೆ ಹಿತವಾಗಿದೆ.