Tuesday 19 April 2011

ಪ್ರತಿ ಮನೆಯ ಅತಿಥಿ ಆಗಿರುವ ಶೀತ, ನೆಗಡಿ

ಮಳೆಗಾಲ ಅಥವಾ ಚಳಿಗಾಲವೇ ಆಗಲಿ, ಕೆಮ್ಮು ಹಾಗೂ ಶೀತ ಸಾಮಾನ್ಯ. ಆದರೆ ಇದು ಕೇವಲ ತಂಪಾದ ಹವೆದಿಂದ ಮಾತ್ರ ಬರುವುದಿಲ್ಲ. ಅಲರ್ಜಿ, ಕೆಲವೊಂದು ಪರಿಸ್ಥಿತಿಗಳಲ್ಲಿ ಜನರೊಂದಿಗೆ ಹೆಚ್ಚು ಬೆರೆಯುವುದರಿಂದಲೂ ನೆಗಡಿ ಉಂಟಾಗುತ್ತದೆ. ಇದರ ಕಿರಿಕಿರಿ ಮಾತ್ರ ಹೇಳತೀರದು.
ಪ್ರತಿ ಮನೆಯ ಅಪರೂಪವಲ್ಲದ ಈ ಅತಿಥಿಯು ಇತರರಿಗೆ ಹರಡಲು ಹೆಚ್ಚು ಕಷ್ಟಪಡಬೇಕಿಲ್ಲ. ಮೂಗನ್ನು ಕೈಯಿಂದ ಸೀದ ನಂತರ ಆ ವ್ಯಕ್ತಿಯು ಅದೇ ಕೈಯಿಂದ ಇನ್ನೊಬ್ಬ ವ್ಯಕ್ತಿಯನ್ನು ಮುಟ್ಟಿದರೂ ವೈರಸ್ ಹರಡಿ ನೆಗಡಿ ಉಂಟಾಗಬಹುದು. ಸಾಮಾನ್ಯವಾಗಿ ಕೆಮ್ಮು ಮತ್ತು ಸೀನುವಿಕೆಯಿಂದಾಗಿ ಮಾತ್ರ ಕೆಮ್ಮು ಹರಡುತ್ತದೆ ಎಂಬುದು ತಪ್ಪು ಭಾವನೆ. ನಾವು ದಿನನಿತ್ಯ ಉಪಯೋಗಿಸುವಂತಹ ವಸ್ತುಗಳಲ್ಲಿರುವ ಹಲವು ವೈರಸ್‌ಗಳಿಂದಲೂ ಇದು ಪಸರಿಸುತ್ತದೆ.
ದಿನನಿತ್ಯ ಬಳಕೆಯಾಗುವ ವಸ್ತುಗಳಲ್ಲಿ ರೋಗಾಣಗಳು ಗಂಟೆಗಟ್ಟಲೆ ಜೀವಂತವಾಗಿರುತ್ತವೆ. ಹಾಗಾಗಿ ಇಂತಹ ವಸ್ತುಗಳಿಂದಲೂ ಸೋಂಕು ಹರಡುತ್ತವೆ. ದೈನಂದಿನ ಜೀವನದಲ್ಲಿ ಬಳಕೆಯಾಗುವ ಎಲ್ಲಾ ವಸ್ತುಗಳನ್ನು ಸ್ವಚ್ಛವಾಗಿಡಿಲು ಯತ್ನಿಸುವುದು ಈ ನಿಟ್ಟಿನಲ್ಲಿ ಅಗತ್ಯ.

'
ವಿಟಮಿನ್ ಡಿ' ಕೊರತೆ ಶೀತ ಮತ್ತು ನೆಗಡಿ ಬರುವ ಸಾಧ್ಯತೆಗಳು ಹೆಚ್ಚು. ಯಾಕೆಂದರೆ ರೋಗಾಣುಗಳ ವಿರುದ್ಧ ವಿಟಮಿನ್ ಡಿ ಹೋರಾಡುತ್ತಿರುತ್ತದೆ. ದೇಹದಲ್ಲಿ ಇದರ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ರೋಗ ನಿರೋಧಕ ಶಕ್ತಿಯೂ ಕುಂಠಿತವಾಗುತ್ತದೆ. ಇದರಿಂದಾಗಿ ಶೀತ ಮತ್ತು ನೆಗಡಿಯು ಸುಲಭವಾಗಿ ವ್ಯಕ್ತಿಯನ್ನು ಆವರಿಸುತ್ತವೆ.
ನಮ್ಮ ಶರೀರಕ್ಕೆ ವಿಟಮಿನ್ ಡಿ ಪ್ರಮಾಣ ಸೂರ್ಯ ಪ್ರಕಾಶದಿಂದ ಸಿಗುತ್ತದೆ. ಆದರೆ ಚಳಿ ಮತ್ತು ಮಳೆಗಾಲದಲ್ಲಿ ಸೂರ್ಯನ ಬೆಳಕು ಸಿಗದೇ ಇರುವ ಸಂದರ್ಭದಲ್ಲಿ ವಿಟಮಿನ್ ಡಿ ಪ್ರಭಾವವೂ ಕುಂಠಿತವಾಗುತ್ತದೆ. ಇದು ಶೀತ ಮತ್ತು ನೆಗಡಿ ಹೆಚ್ಚಲು ಕಾರಣವಾಗುತ್ತದೆ.
ಇದನ್ನು ತಡೆಗಟ್ಟಲು ಪ್ರತಿದಿನ ರಾತ್ರಿ ಮಲಗುವುದಕ್ಕಿಂತ ಮುಂಚೆ ಹಾಲು ಕುಡಿಯುವುದು ಉತ್ತಮ. ಯಾಕೆಂದರೆ ಹಾಲಿನಿಂದಲೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಹಾಗೆಯೇ ಬಿಸಿ ಹಾಲಿಗೆ ಕಾಳು ಮೆಣಸಿನ ಪುಡಿ ಮತ್ತು ಕಲ್ಲುಸಕ್ಕರೆ ಸೇರಿಸಿ ಕುಡಿಯುವುದರಿಂದಲೂ ನೆಗಡಿ ಕಡಿಮೆಯಾಗುತ್ತದೆ.
ಜೇನುತುಪ್ಪದಲ್ಲಿ ಕಾಳುಮೆಣಸಿನ ಚೂರ್ಣವನ್ನು ಕಲಸಿ ಸೇವಿಸುವ ಮೂಲಕವೂ ಇದರ ನಿವಾರಣೆ ಮಾಡಬಹುದು. ವಿಪರೀತ ಕೆಮ್ಮು ಉಂಟಾದ ಸಂದರ್ಭದಲ್ಲಿ ಅರಿಶಿನ ಪುಡಿಯನ್ನು ಕೆಂಡದ ಮೇಲೆ ಚೆಲ್ಲಿ, ಅದರಿಂದ ಹೊರಡುವ ಹೊಗೆಯನ್ನು ಮೂಗಿನ ಮೂಲಕ ಸೇವಿಸಿಯೂ ಇದರ ಪ್ರಭಾವ ಕಡಿಮೆ ಮಾಡಬಹುದು.
 *ನಾಗರಾಜ್ ಬೇಳ

No comments:

Post a Comment